


ಪೊಲೀಸ್ ಹೆಡ್ ಕಾನ್ಸಟೇಬಲ್ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ ದೂರಿನ ಮೇಲೆ ಶಿರಸಿ ಗಿಡಮಾವಿನಕಟ್ಟೆಯ ದರ್ಶನ್ ಗೌಡರ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಿದ ಘಟನೆ ಸಿದ್ದಾಪುರದಲ್ಲಿನಡೆದಿದೆ.


ಆರೋಪಿ ಕರಿಇಡ್ಲಿ ಯಾನೆ ದರ್ಶನ್ ಗೌಡ ಸಿದ್ಧಾಪುರ ಮುಖ್ಯರಸ್ತೆಯ ಏಕಮುಖ ಸಂಚಾರದ ರಸ್ತೆಯಲ್ಲಿ ಕಾನೂನು ನಿರ್ಲಕ್ಷಿಸಿ ಬರುತಿದ್ದಾಗ ಪ್ರಶ್ನಿಸಿದ ಮುಖ್ಯಪೇದೆ ದೇವರಾಜ್ ನಾಯ್ಕ ಮೇಲೆ ಏರಿ ಹೋಗಿ ಹಲ್ಲೆಮಾಡಿ ಕೊಲೆಬೆದರಿಕೆ ಹಾಕಿದ. ಈ ಸಂದರ್ಭದಲ್ಲಿ ಸೇರಿದ ಸಾರ್ವಜನಿಕರು ದರ್ಶನ್ ಗೌಡನನ್ನು ಹಿಡಿದು ಪೊಲೀಸ್ ವಶಕ್ಕೆ ಕೊಟ್ಟರು. ಬಣ್ಣ ಬಳಿಯುವ ಕೆಲಸಮಾಡುವ ದರ್ಶನ್ ಗೌಡ ಕಳ್ಳತನ, ದಾಂಧಲೆ ಸೇರಿದಂತೆ ಕಾನೂನು ಬಾಹೀರ ಚಟುವಟಿಕೆ ಮಾಡಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಎನ್ನಲಾಗಿದೆ.


ಕೊಲೆ ಆರೋಪಿ ಅಭಿಜಿತ್, ಅಯ್ಯಪ್ಪ ಜಾತ್ರೆಯ ಅಪಘಾತದ ಆರೋಪಿ ರೋಶನ್, ಈಗ ದರ್ಶನ್ ಗೌಡ ಇವರೆಲ್ಲಾ ಕಾನೂನು ಬಾಹೀರ ಕೆಲಸ ಮಾಡಿ ಪೊಲೀಸರ ವಿರುದ್ಧವೇ ಎಗರಾಡಿ ಸುದ್ದಿ ಮಾಡಿರುವುದರಿಂದ ಈ ಆರೋಪಿ ಮೇಲೆ ಪೊಲೀಸ್ ಪವರ್ ಪ್ರಯೋಗವಾಗಿರುವ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
