



ಭೀಮಣ್ಣನವರ ಜನಪ್ರೀಯತೆ ಸಹಿಸದೆ ಕೆಲವರು ಅವರ ತೇಜೋವಧೆ ನಡೆಸುವುದು ಸರಿಯಲ್ಲ ಅವರು ಶಾಸಕರಾದ ಮೇಲೆ ಶಿರಸಿ-ಸಿದ್ದಾಪುರಕ್ಕೆ ೨೩೦ ಕೋಟಿ ಅನುದಾನ ಹರಿದುಬಂದಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದು ಜನಪ್ರೀಯ ಶಾಸಕರಾಗಿರುವ ಭೀಮಣ್ಣನವರ ವಿರುದ್ಧ ಬೇಜವಾಬ್ಧಾರಿಯಿಂದ ಮಾತನಾಡಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇಂದು ಸಿದ್ಧಾಪುರದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು ಪ್ರಚಾರ,ತೆವಲಿಗೆ ಅನ್ಯರನ್ನು ಬಳಸಿಕೊಳ್ಳುವುದು ಸರಿಯಲ್ಲ ಶಾಸಕರಾಗಿ ಮತ್ತು ಜನಪ್ರತಿನಿಧಿಯಲ್ಲದೆ ಕೂಡಾ ಭೀಮಣ್ಣ ನೀಡಿರುವ ಸೇವೆ,ಕೊಡುಗೆ ಪ್ರಶ್ನಿಸುವ ನೈತಿಕತೆಯೇ ಇಲ್ಲದಿರುವವರು ತಮ್ಮ ಕೊಡುಗೆ ಮುಂದಿಟ್ಟು ಶಾಸಕರ ಬಗ್ಗೆ ಮಾತನಾಡಲಿ ಎಂದರು.


ಶಿರಸಿ ಅನಂತಮೂರ್ತಿ ಹೆಗಡೆ ಶಾಸಕರನ್ನು ಸುಳ್ಳುಗಾರ ಎಂದು ನಿಂದಿಸಿದ ವಿದ್ಯಮಾನವನ್ನು ಖಂಡಿಸಿದ ಕಾಂಗ್ರೆಸ್ ನಾಯಕರು ಅನಂತಮೂರ್ತಿ ಹೆಗಡೆ ಸಾರ್ವಜನಿಕ ಜೀವನದ ಎಲ್ಲೆ ಮೀರಿರುವುದು ಅವರ ಯೋಗ್ಯತೆಗೆ ಸಾಕ್ಷಿ ಎಂದರು.

*ಅನಂತಮೂರ್ತಿ ಹೆಗಡೆಯವರ ಇಲ್ಲಸಲ್ಲದ ಮಾತು ಬೇಜವಾಬ್ಧಾರಿಯ ಲಕ್ಷಣ. – ಆರ್.ಎಂ. ಹೆಗಡೆ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
