


ಸಿದ್ಧಾಪುರ,ಮಾ,೧೪- ಗುರುವಾರ ಸಾಯಂಕಾಲ ಮಳಗಿ ಡ್ಯಾಂ ನಲ್ಲಿ ಮುಳುಗಿ ಮೃತರಾದ ಸಿದ್ಧಾಪುರ ರವೀಂದ್ರನಗರದ ಶ್ಯಾಮಸನ್ ಫರ್ನಾಂಡೀಸ್ ಕಳೆ ಬರಹ ಇನ್ನೂ ಸಿದ್ಧಾಪುರ ತಲುಪಿಲ್ಲ.

ಗುರುವಾರ ಸಾಯಂಕಾಲ ಶಿರಸಿಯಿಂದ ಮುಂಡಗೋಡು ಮಳಗಿ ಜಲಾಶಯಕ್ಕೆ ಮೀನು ಹಿಡಿಯಲು ಹೋಗಿದ್ದ ಶ್ಯಾಮಸನ್ ಆಕಸ್ಮಿಕವಾಗಿ ಕಾಲುಜಾರಿ ಮೃತಪಟ್ಟಿದ್ದರು. ಇಬ್ಬರು ಸಂಬಂಧಿಗಳೊಟ್ಟಿಗೆ ಧರ್ಮಾ ಜಲಾಶಯಕ್ಕೆ ತೆರಳಿದ್ದ ಶ್ಯಾಮಸನ್ ನೀರಿನಲ್ಲಿ ಮುಳುಗಿದ್ದರು. ನಂತರ ಕಾರ್ಯಾಚರಣೆಯ ಮೂಲಕ ಹೊರತೆಗೆದಾಗ ಸಾವನ್ನಪ್ಪಿದ್ದು ಖಚಿತಪಟ್ಟಿತ್ತು. ಅವರ ಶವಸಂಸ್ಕಾರ ಶನಿವಾರ ಬೆಳಿಗ್ಗೆ ನಡೆಯಲಿದ್ದು ಪರ ಊರುಗಳಲ್ಲಿರುವ ಸಂಬಂಧಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ಮೃತ ಶ್ಯಾಮಸನ್ ಪತ್ನಿ, ಮಗಳು, ಪಾಲಕರು ಸಂಬಂಧಿಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶಿರಸಿಯ ಹೋಳಿ ಬೇಡರವೇಷ ನೋಡಲು ಸಿದ್ಧಾಪುರದಿಂದ ತೆರಳಿದ್ದ ಅವರು ಶಿರಸಿಯಿಂದ ಸ್ನೇಹಿತರ ಜೊತೆಗೆ ಮಳಗಿ ಧರ್ಮಾ ಜಲಾಶಯಕ್ಕೆ ಮೀನು ಹಿಡಿಯಲು ತೆರಳಿದ್ದಾಗ ಈ ಅವಗಢ ಸಂಭವಿಸಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
