ಎರಡು ವಾರಗಳ ಎರಡು ಶ್ರದ್ಧಾಂಜಲಿಗಳು….. ಛೇ ದೇವರು ಇಷ್ಟು ಕ್ರೂರಿಯಾಗಬಾರದಿತ್ತು!

ನಾಳೆ ಬಾ ಎನ್ನಬಹುದು ಅತಿಥಿಗಳಿಗೆ…. ಆದರೆ ಸಾವಿಗೆ ನಾಳೆ ಬಾ ಎನ್ನುವಂತಿಲ್ಲ…

ಒಬ್ಬ ಸಹೋದರನಂತಿದ್ದ ಸ್ನೇಹಿತ, ಸ್ನೇಹಿತನಂತಿದ್ದ ಸಹೋದರ ಎನ್ನಬಹುದು ಹೆಸರು ಶಿವಶಂಕರ್.‌ ನಮ್ಮ ನಡುವೆ ಓಡಾಡಿಕೊಂಡಿದ್ದ ಸ್ನೇಹಿತ. ಸ್ಕೂಟರ್‌, ಕಾರ್‌ ಮೇಲೆಲ್ಲಾ ಸ್ವಪ್ನದಂತೆ ಸಾಗಿ ಹೋಗುತಿದ್ದ ಈತ ನಮ್ಮೆಲ್ಲರ ಗೆಳೆಯ.

ನಮ್ಮ ಗೆಳೆಯ ಅಂದಮೇಲೆ ಬಡವನಾಗಿರಬೇಕು, ಕ್ರೀಯಾಶೀಲನಾಗಿರಬೇಕು, ಪರಿಶ್ರಮಿಯಾಗಿರಬೇಕು, ಕನಸುಗಾರನಾಗಿರಬೇಕು ಹೀಗೆ ಏನೇನೆಲ್ಲಾ… ಈತನಿಗೆ ಕೆಲವು ರಿಯಾಯತಿಗಳಿದ್ದವು.

ವಿನಾಯಿತಿಗಳನ್ನು ಪಡೆಯಲೆಂಬಂತೆಯೇ ಹಾಗಿದ್ದನೋ ಕಾಣೆ. ತುಸು ಆಳಸಿ, ಸ್ವಲ್ಫ ಸೋಮಾರಿ, ಎಲ್ಲರೊಳಗೊಂದಾಗುವ ಗುಡ್‌ ಫಾರ್‌ ನಂಥಿಂಗ್‌ ನಡವಳಿಕೆ ಜೊತೆಗೆ ಅಂತರ್ಗತವಾಗಿದ್ದ ಮಮತೆ!

ಈತ ನಮ್ಮನ್ನೆಲ್ಲಾ ಬಿಟ್ಟು ಹೋಗಿ ಒಂದುವಾರ ಕಳೆದು ಎರಡೂ ಕಳೆಯತೊಡಗಿದ್ದರೂ ಈತ ಇಲ್ಲೇ ಎಲ್ಲೋ ಇರುವಂತಿದೆ. ಯಾಕೆಂದರೆ ಆತ ಇದ್ದುದೇ ಹಾಗೇ.

ಆತ ಅಮಾಯಕನಾಗಿರದಿದ್ದರೆ ಕಾಲ ಅವನ ಮೇಲೆ ಮಾಡಿದ ದಾಳಿಗೆ ಆತ ಇಷ್ಟು ವರ್ಷವೂ ಇರುತಿದ್ದನೋ ಇಲ್ಲವೋ? ದೇವರನ್ನು ಅತಿಯಾಗಿ ನಂಬುತಿದ್ದ ಈತ ಹಬ್ಬಗಳಿಗಾಗಿ ಕನವರಿಸುತಿದ್ದ ಶಿಕ್ಷಕನಾಗಲು ಓದಿದ್ದ ಆತ ಅದಾಗದೇ ಮತ್ತೇನೇನೋ ಆಗಿದ್ದ. ಬ್ಯಾಂಕ್‌ ನೌಕರಿ, ಮಾಧ್ಯಮಕ್ಷೇತ್ರ ಅವನ ಹವ್ಯಾಸಗಳಂತಿದ್ದವು ಆದರೆ ಕಲಿಯಲು ಹಿಂಜರಿಯುವ ವ್ಯಕ್ತಿ ಯಾಗಿ ಎಲ್ಲವರಿಗೂ ಬೇಕಾದವನಾಗಿ ದೂರ ಸಾಗಿ ಬಿಟ್ಟ.

ಬಂಡಾಯವೇಳಲು ಹಿಂಜರಿಯುತಿದ್ದ ಆತನ ಮನಸ್ಸು ಸಾವನ್ನೇ ಒಪ್ಪಿಕೊಳ್ಳುವಂತಾಗಿದ್ದು ಆತನ ಮೇಲೆ ಆದ ದಾಳಿಗಳ ಪರಿಣಾಮ. ಸಕಾಲದಲ್ಲಿ ಸಿಗದ ಕೆಲಸ, ವೇತನ, ತೃಪ್ತಿ, ಆತನ ದೇಹವನ್ನೂ ಪೊಳ್ಳಾಗಿಸಿತ್ತೇ ಎನ್ನುವುದು ಈಗ ಸಿಗುವ ಸಕಾರಣ. ಸಾವಿನ ಹಿಂದೆ ಕುಟುಂಬ, ಆಹಾರ, ಬಡಿದಾಡದ ಸೋಲೊಪ್ಪುವ ಗುಣ ಮತ್ತೂ ಎನೇನೋ ಇರಬಹುದು ಆದರೆ ಅನಾಮಿಕನಂತಿದ್ದ ಅಮಾಯಕ ಅಕಾಲಿಕವಾಗಿ ಸತ್ತದ್ದು ದೌರ್ಭಾಗ್ಯ.

ಈತನ ಸಾವಿನ ಸೂತಕ ಕಳೆಯುವ ಮುನ್ನ ಸುಂದರ ಸಂಸಾರದ ನೆರೆಮನೆಯ ಹುಡುಗನಂತಿದ್ದ ‌ಶ್ಯಾಮಸನ್ ಸೆಬಾಸ್ಟಿನ್‌ ಮೀನು ಹಿಡಿಯಲು ತೆರಳಿ ಮಳಗಿಯಿಂದ ಹೆಣವಾಗಿ ಮರಳಿದ್ದಾನೆ. ‌ ಶ್ಯಾಮಸನ್ ಶಿರಸಿಯ ಪ್ರಸಿದ್ಧ ಹೋಳಿ ಬೇಡರವೇಷ ನೋಡಲು ಹೋದವನು ಸಂಬಂಧಿಗಳೊಂದಿಗೆ ಮಳಗಿ ಧರ್ಮಾ ಜಲಾಶಯಕ್ಕೆ ಮೀನು ಹಿಡಿಯಲು ತೆರಳಿ ಕಾಲು ಜಾರಿ ಬಿದ್ದು ಆಕಸ್ಮಿಕ ಸಾವನ್ನಪ್ಪಿ ದ್ದಾನೆ. ಒಂದು ವಾರದ ಹಿಂದೆ ಮೃತನಾದ ಶಿವಶಂಕರ್‌ ಮತ್ತು ‌ಶ್ಯಾಮಸನ್ ಸೆಬಾಸ್ಟಿನ್‌ ಸಂಪೂರ್ಣ ವೈರುಧ್ಯಮಯ ವ್ಯಕ್ತಿತ್ವದವರು. ಶಿವಶಂಕರ್‌ ನಂತೆ ಶ್ಯಾಮಸನ್‌ ಅಮಾಯಕ, ನತದೃಷ್ಟನಾಗಿರಲಿಲ್ಲ. ಆದರೆ ಸಾವಿಗೆ ರಿಯಾಯತಿ ಇಲ್ಲ. ನತದೃಷ್ಟರೂ ಉಳಿಯುವುದಿಲ್ಲ, ದೇವದೂತರೂ ಶಾಶ್ವತರಲ್ಲ… ನಿಜಕ್ಕೂ ನಿಮ್ಮ ದೇವರು ಕ್ರೂರಿ. ಈ ಕುಟುಂಬಗಳನ್ನು ದೇವರಂಥ ಮನುಷ್ಯರು ಸಂತೈಸಬೇಕಷ್ಟೇ… ಮತ್ತೆ ಹುಟ್ಟಿ ಬನ್ನಿ ಅದೃಷ್ಟವಂತರಾಗಿ ಸಕಾಲದಲ್ಲಿ ಎಂದು ನಾವು ಸಂತೈಸಿಕೊಳ್ಳಬಹುದಷ್ಟೆ… ಸಾವುಗಳಿಗೂ ಧಿಕ್ಕಾರವಿರಲಿ ದುಖಿ:ತರಿಗೆ ನೆಮ್ಮದಿ ಸಿಗಲಿ. ‌

– ಇಂತಿ ನಿಮ್ಮ ಕನ್ನೇಶ್.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

ಸೈನಿಕ ಸುರೇಶ್‌ ನಾಯ್ಕ ಸಾವು

ಕೆಂದ್ರ ರಕ್ಷಣಾ ಪಡೆ ಸಿ.ಆರ್.ಪಿ.ಎಫ್.‌ ನಲ್ಲಿ ಸಹಾಯಕ ಸಬ್‌ ಇನ್ಫೆಕ್ಟರ್‌ ಆಗಿ ಸೇವೆಯಲ್ಲಿದ್ದ ಸುರೇಶ್‌ ಮೂಕಾ ನಾಯ್ಕ ಹಳದೋಟ ರವಿವಾರ ಬೆಂಗಳೂರಿನ ಆಸ್ಫತ್ರೆಯಲ್ಲಿ ನಿಧನರಾದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *