



ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ ಹೊಸಳ್ಳಿಯವರ ಮನೆಯಂಗಳದಲ್ಲಿ ಏರ್ಪಡಿಸಿದ್ದ ಸ್ತ್ರೀ ಸಂವೇದನೆ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು ಕವಿತೆ, ಸಾಹಿತ್ಯ ಯಾವಾಗಲೂ ಜೀವನ್ಮುಖಿ ಕವಿತೆ ಇಲ್ಲದಿದ್ದರೆ ಬದುಕಿಲ್ಲ ಎಂದು ವಿವರಿಸಿದರು.
ಕವಿಗೋಷ್ಠಿ ಉದ್ಘಾಟಿಸಿದ ಶಿಕ್ಷಕಿ ಸುಮಿತ್ರಾ ಶೇಟ್ ಮತ್ತು ಆಶಯ ಭಾಷಣ ಮಾಡಿದ ವಿನೋದಾ ಭಟ್ಟ ಸ್ರ್ತೀ ಸಂವೇದನೆಯ ಮಹತ್ವ ಮತ್ತು ವಾಸ್ತವದ ಬಗ್ಗೆ ಮಾತನಾಡಿದರು. ಅನೇಕ ಕವಿಗಳು ತಮ್ಮ ಕಾವ್ಯ ವಾಚನ ಮಾಡಿದರು. ಮಾರುತಿ ನಾಯ್ಕ ಬೇಡ್ಕಣಿ ಸರ್ವರನ್ನೂ ಸ್ವಾಗತಿಸಿ, ನಿರೂಪಿಸಿದರು.ತಾ.ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ್ ಕುಂಬ್ರಿಗದ್ದೆ ಅಧ್ಯಕ್ಷತೆ ವಹಿಸಿದ್ದರು.
