ಸಕಾಲಿಕ ಸುಫ್ರಾಸೋ ನೋಡಲೇಬೇಕಾದ ಚಿತ್ರ su from so move review

ಸಾಹಿತ್ಯ,ಸಂಗೀತ ಸಿನೆಮಾ ವರ್ತಮಾನಕ್ಕೆ ಮೂಖಾಮುಖಿಯಾದರೆ ಎಷ್ಟು ಜನಪರ, ಜೀವಪರ ಇರಬಹುದು ಎಂಬುದಕ್ಕೆ ತಾಜಾ ಉದಾಹರಣೆ ಸು.ಫ್ರಾಮ್‌ ಸೋ.

ಧರ್ಮಸ್ಥಳ, ರಾಜ್ಯ, ದೇಶದಾದ್ಯಂತ ದೇವಮಾನವರ ಹಾವಳಿ ಎಷ್ಟು ವಿಪರೀತವಾಗಿದೆಯೆಂದರೆ…. ಅಧಿಕ ಲಾಭದ ಕಾಂಟ್ರ್ಯಾಕ್ಟ್‌, ಬಿಲ್ಡರ್‌ ಉದ್ಯಮಕ್ಕಿಂತ ದೇವರವ್ಯಾಪಾರ ಹೆಚ್ಚು ಲಾಭದಾಯಕ, ನಿರಾಯಾಸ ಎನ್ನುವ ಗ್ರಹಿಕೆ ಹಿನ್ನೆಲೆಯಲ್ಲಿ ಕಂಡಕಂಡಲ್ಲಿ ದೇವರು, ದೇವ ಮಾನವರ ಉದ್ಭವವಾಗುತ್ತಿದೆ. ಇಂಥ ಕಟುವಾಸ್ಥವವನ್ನು ಹಾಸ್ಯದೊಂದಿಗೆ ಬೆರೆಸಿ ಉತ್ತಮ ಸಂದೇಶವೊಂದನ್ನು ನೀಡಿದರೆ ಅದು ಸುಪ್ರಾಸೋ ಆಗುತ್ತದೆ.

ಅಶೋಕ, ಗ್ರಾಮದ ಹುಡುಗಿಯನ್ನು ಕದ್ದು ನೋಡಲು ಹೋಗಿ ಜನರ ಸಾಹಸಕ್ಕೆ ನೆಲೆ ಒದಗಿಸುತ್ತಾನೆ. ಸಹಜ ಮನುಷ್ಯ ಕಿಡಿಗೇಡಿತನ ಮಾಡಿ ಬಚಾವಾಗುವುದು ಕಷ್ಟವಾದಾಗ ಈ ಕುಚೇಷ್ಟೆಗೆ ದೈವದ ರೂಪ ಪ್ರಾಪ್ತವಾಗುತ್ತದೆ.

ಸಹಜ ವಾಂಚೆಯ ಮನುಷ್ಯ ಅಸಹಜ ಪ್ರೇತವಾಗುತ್ತಾ ಬದಲಾಗುವ ಪರಿ ವಾಸ್ತವದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತದೆ. ಸಕತ್‌ ಮೆಲೋಡ್ರಾಮಾದ ನಂತರ ದೈವವಾಗಿ ಕೆಟ್ಟವನನ್ನು ಶಿಕ್ಷಿಸುವ ಸುಲೋಚನಾ ಎಷ್ಟು ಸಹಜವಾಗಿ ಜನರನ್ನು ಆವಾಹಿಸಿಕೊಳ್ಳುತ್ತಾಳೆಂದರೆ ಚಿತ್ರ ಮುಗಿದಾಗಲೂ ಅಲ್ಲಿಯ ತಮಾಸೆ, ಕಲಾವಿದರ ನಟನೆ ನೆನಪಾಗಿ ನಗೆ ಉಕ್ಕಿಸುತ್ತದೆ.

ಹಾಗೆ ನೋಡಿದರೆ ಇದು ಸಿನೆಮಾ ಕತೆಯೇ ಅಲ್ಲ ಆದರೆ ಇದು ಸಿನೆಮಾ ಎನ್ನುವುದನ್ನೇ ಮರೆಸುವ ಲವಲವಿಕೆಯ ನಿರೂಪಣೆ ಈ ಚಿತ್ರವನ್ನು ಅದ್ಭುತ ದ್ರಶ್ಯಕಾವ್ಯವಾಗಿಸಿದೆ.

ದಕ್ಷಿಣ ಕನ್ನಡ, ಕರಾವಳಿಯಲ್ಲಿ ತುಸು ಹೆಚ್ಚಾಗಿರುವ ಈ ಮೂಢನಂಬಿಕೆ ಸಾರ್ವತ್ರಿಕ ಆದರೆ ರಾಜ್‌ ಬಿ. ಶೆಟ್ಟಿ ಬಂಡವಾಳ ಹಾಕಿ, ನಯನಮನೋಹರ ಎನ್ನುವಂತೆ ನಟಿಸಿ ಈ ಸಿನೆಮಾದ ತೂಕ ಹೆಚ್ಚಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಇಲ್ಲಿಯ ಕಲಾವಿದರ ಬಳಗ ಪಾತ್ರಗಳನ್ನು ಅಭಿನಯಿಸಿಲ್ಲ ಬದಲಾಗಿ ಜೀವಿಸಿದೆ. ಇದರಲ್ಲಿ ಪ್ರಮುಖ ನಟ,ನಿರ್ಧೇಶಕ ಜೆ.ಪಿ.ತುಮಿನಾಡ್‌ ಬುದ್ಧಿವಂತಿಕೆ ಜೊತೆ ಇಡೀ ತಂಡದ ಶ್ರಮ ಉತ್ತಮ ಚಿತ್ರವಾಗಿ ಫಲಕೊಟ್ಟಿದೆ.

ಕೇಳುವುದು, ಓದುವುದಕ್ಕಿಂತ ನೋಡುವುದು ಹೆಚ್ಚು ಪರಿಣಾಮ ಎನ್ನುವಂತೆ ಸು.ಫ್ರಾಮ್‌ ಸೋ ಓದಿ, ಕೇಳುವುದಕ್ಕಿಂತ ನೋಡಿ ಹಗುರಾಗುವ ಸಿನೆಮಾ. ಈ ಹೊಸ ಅಲೆ ಕನ್ನಡದ ಮಹತ್ವ ಹೆಚ್ಚಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಧರ್ಮಸ್ಥಳದ ಅಬ್ಬರದ ಪ್ರಚಾರದ ನಡುವೆ ಈ ಧಾರ್ಮಿಕ ವ್ಯಾಪಾರದ ವಿಡಂಬನೆಯಂತಿರುವ ಈ ಚಿತ್ರ ಈ ಕಾಲದ ಅನಿವಾರ್ಯ ಸಿನೆಮಾವೂ ಹೌದು ಎನ್ನುವಲ್ಲಿ ಚಿತ್ರರಂಗದ ಸಮಕಾಲಿನ ಸ್ಫಂದನೆ ಇದೆ ಎನ್ನುವ ಸತ್ವ,ಸತ್ಯ, ವಾಸ್ತವಗಳೂ ಮೇಳೈಸಿವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *