b.v nayak- ನಿಜ ನಾಯಕ ಬಿ.ವಿ. ನಾಯಕ!

ಒಬ್ಬ ನಾಯಕನಿದ್ದ ಆತ ಉತ್ತರ ಕನ್ನಡದ ಮೊಟ್ಟಮೊದಲ ಸ್ಥಳಿಯ ಜಿಲ್ಲಾಧಿಕಾರಿಗಳ ಮಗ!

ಅವರು ಓದಿದ್ದು ಅಮೇರಿಕಾದಲ್ಲಿ ಜಿಲ್ಲೆಯ ಹೆಗ್ಗಳಿಕೆಯ ಸಹಕಾರಿ ಕ್ಷೇತ್ರದ ಬಗ್ಗೆ ವಿದೇಶದಲ್ಲಿ ಓದಿದ್ದ ಆ ಹುಡುಗ ಕೆಲವು ಕಾಲ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಯ ಕೆಲಸಮಾಡಿದ್ದರಂತೆ. ನಂತರ ಒಂದೇ ಒಂದು ಅವಧಿಗೆ 1971ರಿಂದ 76 ಕೆನರಾ ಕ್ಷೇತ್ರದ ಲೋಕಸಭಾ ಸದಸ್ಯರಾದರು. ಅನುಭವ, ಶಿಕ್ಷಣದ ಆಧಾರದಲ್ಲಿ ಕೇಂದ್ರ ಮಂತ್ರಿಯಾಗಬೇಕಿದ್ದವರು ಮೋಸಹೋದರು.ಅವರ ಸಚಿವಗಿರಿ ಕೈ ತಪ್ಪಿ ಹೋಯಿತು. ನಂತರ ಲೋಕಸಭಾ ಸದಸ್ಯತ್ವ.

ಈ ನಿಜನಾಯಕನ ಜೀವನದ ಪಯಣದ ಮೊದಲರ್ಧ ಇದಾದರೆ…. ನಂತರ ಲೊಕೇಶನ್ ಬದಲು.

ಮಾಜಿ ಎಂ.ಪಿ. ಯಾಗಿ ಬಂಕಿಕೊಡ್ಲು ಹನೇಹಳ್ಳಿಯ ಹಳ್ಳಿಮನೆ ಸೇರಿದ ಈ ನಾಯಕ ಸೈಕಲ್ ತುಳಿಯುತ್ತಾ, ಹಸು-ಎಮ್ಮೆ ಸಾಕುತ್ತಾ ಗೋಕರ್ಣ ಬೀದಿಯಲ್ಲಿ ಹಾಲು ಮಾರತೊಡಗುತ್ತಾರೆ. ಕೃಷಿ,ಸಾಹಿತ್ಯ,ರಾಜಕಾರಣದ ವ್ಯವಸಾಯದಲ್ಲಿ ತೊಡಗುವ ಘಾಟಿ ಬಾಲಕೃಷ್ಣ ನಾಯಕ ಪತ್ರಿಕೆ ಹೊರಡಿಸುತ್ತಾರೆ. ಚುನಾವಣೆಗಳಲ್ಲಿ ಸ್ಫರ್ಧಿಸಿ ಏಕಾಂಗಿಯಾಗಿ ಕಾರ್ ಏರಿ ಮೈಕ್ ಹಿಡಿದು ಭಾಷಣ ಜಡಿಯುತ್ತಾರೆ. ಹೀಗೆ ತುಸು ವಿಚಿತ್ರವಾಗೇ ಕಾಣುವ ಬಾಲಕೃಷ್ಣ ನಾಯಕ ಬರೆಯತೊಡಗಿದರು, ಕೊರೆಯ ! (ಭಾಷಣ) ತೊಡಗಿದರೆಂದರೆ ದಕ್ಷಿಣ- ಉತ್ತರ ಒಂದಾಗಬೇಕು. ಅಂಥ ಪಾಂಡಿತ್ಯ, ಮಾಹಿತಿ,ನೆನಪು.

ಇಂಥ ಮಾಜಿ ಎಂ.ಪಿ. ಬಿ.ವಿ.ನಾಯಕ ಕರಾವಳಿ ಮುಂಜಾವು ಪತ್ರಿಕೆಯ, ಅಂಕಣ,ಸಾಂಗತ್ಯದಿಂದ ತೀರಾ ಹತ್ತಿರವಾದರು.

ಒಂದು ದಿನ ಅವರ ಮನೆಗೆ ಹೋಗಿದ್ದಾಗ ಬಿ.ವಿ.ನಾಯಕ ಓದುತ್ತಾ ಕೂತಿದ್ದರು. ಅವರ ಮೊಮ್ಮಗನ ವಯಸ್ಸಿನ ನನಗೆ ನಾಯ್ಕರಿಗೆ ನಮಸ್ಕಾರ ಜಯವಾಗಲಿ ಬರಬೇಕು ಎಂದರು. ಅದೇ ಧಾಟಿಯಲ್ಲಿ ತಮ್ಮ ಹೆಂಡತಿಗೆ ಮೆಡಂ ನಾಯ್ಕರಿಗೆ ಟೀ..ಗಂಜಿ ಏನು ಕೊಡಬಹುದು ಎಂದರು.

ಅದೇ ಮಾತನ್ನೇ ಮುಂದುವರಿಸಿ ನಿಮಗೆ ಸಮಯ ಉಂಟಲ್ಲಾ ಟೀ..ಊಟ, ಮಾತು- ಕತೆಗೆ ಎಂದರು. ನಾನಾಗ ಮೂಕವಿಸ್ಮಿತ.

ಸಿನೆಮಾದ ಫ್ಲಾಶ್ ಬ್ಯಾಕ್ ನಂತೆ ಅವರ ಅಪ್ಪ ಡಿ.ಸಿ. ವೆಂಕಣ್ಣ ನಾಯಕ, ಇವರ ಅಮೇರಿಕಾದ ಸಹಕಾರಿ ಶಿಕ್ಷಣ, ಒಂದವಧಿಯ ಲೋಕಸಭಾ ಸದಸ್ಯತ್ವ ಇಂದಿರಾ ಮತ್ತು ಅವರ ರಾಜಕೀಯದ ಬಗ್ಗೆ ಇವರೇ ಬರೆದ long long way to go!

ಎಲ್ಲಾ ನೆನಪಾಗಿ ಹನೇಹಳ್ಳಿಯ ಆ ಉರಿಬಿಸಿಲಿನ ಸೆಕೆಯ ನಡುವೆ ತಂಗಾಳಿಯಂಥ ತಂಪು ನನ್ನ ಮನ ತಟ್ಟಿತು. ಇಲ್ಲಿಂದ ಅಂದು ನಾವು ಕೂತು ಮಾತನಾಡಿದ ಆ ಕರಿಇಸಾಡು ಮಾವಿನ ಮರದ ಬುಡದಲ್ಲಿ ಬಿ.ವಿ.ನಾಯಕಸ್ಥಾವರ ಆಗುವ ವರೆಗೆ ನಮ್ಮ ಸಂಪರ್ಕ-ಸಂಬಂಧ ಮುಂದುವರಿಯಿತು. ಈಗ ಬಿ.ವಿ.ನಾಯಕ ನೆನಪು ಮಾತ್ರ. ಆದರೆ ಆ ವ್ಯಕ್ತಿಯ ಸಹಜತೆ, ಸಾಧನೆ,ತಿಕ್ಕಲುತನ ಎನ್ನಬಹುದಾದ ಬದ್ಧತೆ, ಕಠಿಣಜವಾರಿತನ ಅವುಗಳಿಗೆ, ಅವರಿಗೆ ಅವರು ಮಾತ್ರ ಸಾಟಿ, ಹೋಲಿಕೆ……..( ಮುಂದುವರಿದಿದೆ….)

ಸಂದರ್ಶನದ ನನ್ನ ಪ್ರಶ್ನೆಗೆ ಅವರ ಉತ್ತರ…… ಸರ್ ನೀವ್ಯಾಕೆ ಬ್ರಷ್ಟರಾಗಲಿಲ್ಲ…

ಬಿ.ವಿ.ನಾಯಕ……ಹೇಡಿ ನಾನು . ಅದಕ್ಕೂ ಧೈರ್ಯ ಬೇಕು….i am unabale to do it. you don,t think iam able… non corrupt, pure…!

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *