ಅಪಘಾನ್ ನಿಂದ ಅಮೇರಿಕಾದ ನಿರ್ಗಮನದ ಆನಂದ

ಅಫ್ಘಾನಿಸ್ತಾನದಿಂದ ಅಮೆರಿಕದ ನಿರ್ಗಮನ*

ಕಳೆದ ಕೆಲದಿನಗಳಿಂದ ಅಫ್ಘಾನಿಸ್ತಾನದ ವಿಷಯದಲ್ಲಿ ಕೆಲವು ಭಾರತೀಯರ ಅಭಿಪ್ರಾಯಗಳನ್ನು ಓದಿ ಪ್ರತಿಕ್ರಿಯಿಸುತ್ತಿದ್ದೇನೆ. ಅಮೆರಿಕದ ಹೆಚ್ಚಿನ ನಾಗರಿಕರಿಗೆ ಅಫ್ಘಾನಿಸ್ತಾನದ ವಿಷಯದಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಆದಷ್ಟು ಬೇಗ ಆಫ್ಘನ್ ಸಂಘರ್ಷ ಮುಗಿದರೆ ಒಳ್ಳೆಯದು ಎಂಬ ಇಚ್ಛೆ ಇದೆ. 2001 ರಿಂದ ಸುಮಾರು 2,500 ಅಮೆರಿಕನ್ ಸೈನಿಕರು ಆಫ್ಘಾನಿಸ್ತಾನದಲ್ಲಿ ಸತ್ತಿದ್ದಾರೆ. 1,000 ಅಮೆರಿಕದ ಮಿತ್ರ ರಾಷ್ಟ್ರಗಳ ಸೈನಿಕರು ಸತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಆಫ್ಘನ್ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಬೈಡನ್ ನಿಲುವಿಗೆ ಸಾರ್ವತ್ರಿಕ ಪ್ರತಿರೋಧ ಅಮೆರಿಕಲ್ಲಿಲ್ಲ. ಬೈಡನ್ ಮೊನ್ನೆ ಸಾರ್ವಜನಿಕವಾಗಿ ಮರುಗಿದ್ದು ಇತ್ತೀಚೆಗೆ ಜೀವ ತೆತ್ತ ಅಮೆರಿಕದ ಸೈನಿಕರ ಬಗ್ಗೆ ಅವರ ಅನುಕಂಪವನ್ನು ತೋರಿಸುತ್ತದೆ.

ಬೈಡನ್ ಅವರ ದೀರ್ಘಕಾಲದ ಸಾರ್ವಜನಿಕ, ರಾಜಕೀಯ ಜೀವನ ಮತ್ತು ಅವರು ಕೌಟುಂಬಿಕವಾಗಿ ಎದುರಿಸಿದ ಕಷ್ಟದ ಪರಿಸ್ಥಿತಿಗಳನ್ನು ಸ್ವಲ್ಪ ತಿಳಿದರೆ ಬೈಡನ್ ಕಂಬನಿಗರೆದದ್ದು ಅವರ ದೌರ್ಬಲ್ಯ ಎಂದು ಯಾರೂ ಭಾವಿಸುವುದಿಲ್ಲ. 5 ವರ್ಷಗಳ ಹಿಂದಿನವರೆಗೂ ಅವರು ಅಮೆರಿಕದ ಮೇಲ್ಮನೆಯ ದೀರ್ಘಕಾಲದ ಸದಸ್ಯರಾಗಿ, ನಂತರ 8 ವರ್ಷಗಳ ಕಾಲ ದೇಶದ ಉಪಾಧ್ಯಕ್ಷರಾಗಿ ಬೆಂಕಿಯ ಚೆಂಡಿನಂತೆಯೇ ಇದ್ದರು. ಈಗ ಜೀವನದಲ್ಲಿ ಮಾಗಿದ್ದಾರೆ. ಅಫ್ಘಾನಿಸ್ತಾನದ ಜನರಿಗೆ ತಮ್ಮ ಸ್ವಾತಂತ್ರ್ಯದ ಕುರಿತು ಹೋರಾಡಲು ಮನಸ್ಸಿಲ್ಲದಿದ್ದರೆ ಅಮೆರಿಕ ಯಾಕೆ ಹೋರಾಡಬೇಕು? ಎನ್ನುವ ಬೈಡನ್ ಮಾತು ಸತ್ಯವಾದುದು.

ಅಫ್ಘಾನಿಸ್ತಾನದ ಸೈನಿಕರಿಗೆ, ರಾಜಕಾರಣಿಗಳಿಗೆ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆಯ ಕೊರತೆ ಇದೆ. ಹೀಗಾಗಿ ಅಮೆರಿಕ ಇನ್ನು 50 ವರ್ಷ ಆಫ್ಘಾನಿಸ್ತಾನದಲ್ಲಿ ಇದ್ದರೂ ಕೇವಲ ಅಮೆರಿಕದ ಧನ ಮತ್ತು ಜನ ಹಾನಿ ಮಾತ್ರ ಆಗುತ್ತದೆ. ಅಫ್ಘಾನಿಸ್ತಾನದ ಜನರಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಕೊಡಿಸುವುದು ಎಂದರೆ ಗಾಳಿಯಲ್ಲಿ ಗುದ್ದಿ ಮೈನೋವು ಮಾಡಿಕೊಂಡಂತೆ.ಇದೇ ಬರುವ ಆಗಸ್ಟ್ 31 ರಂದು ಅಮೆರಿಕ ಆಫ್ಘಾನಿಸ್ತಾನದಿಂದ ನಿರ್ಗಮಿಸುವುದು ಯೋಜಿತವಾಗಿದೆ. ಆದರೆ ಅಮೆರಿಕ ಅಫ್ಘಾನಿಸ್ತಾನ ವಿಷಯದಲ್ಲಿ ಬೇರೆ ರೀತಿಯಲ್ಲಿ ಹೊರಗಿನಿಂದ ತೊಡಗಿಕೊಂಡಿರುವುದು ನಿಶ್ಚಿತ. ಓರ್ವ ವಿಶ್ಲೇಷಕರ ಪ್ರಕಾರ, ಬೈಡನ್ ಆಫ್ಘನ್ ಸಂಘರ್ಷದಲ್ಲಿ ಅಮೆರಿಕದ ಪಾತ್ರವನ್ನು ಕೊನೆಗೊಳಿಸಿಲ್ಲ. ಬದಲಾಗಿ ಅಮೆರಿಕದ ಆಫ್ಘನ್ ನೀತಿಯ ಪಥವನ್ನು ಬದಲಾಯಿಸಿದ್ದಾರೆ ಅಷ್ಟೇ.ಅಮೆರಿಕದಂತೆ ಪ್ರತಿದಿನ 300 ಮಿಲಿಯನ್ ಡಾಲರ್ ಗಳು (ರೂ. 2,250 ಕೋಟಿ) ಹಣವನ್ನು 20 ವರ್ಷಗಳ ಕಾಲ ಭಾರತ ಬೇರೆ ದೇಶದಲ್ಲಿ ಖರ್ಚು ಮಾಡುತ್ತಿದ್ದರೆ, ಭಾರತೀಯರಿಗೆ ಎನನಿಸುತ್ತಿತ್ತು?

ಭಾರತ ಸರಕಾರ ಹೀಗೆ ಬೇರೆ ದೇಶದಲ್ಲಿ ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತಾ ಇರಲಿ ಎಂದು ಭಾರತೀಯರು ಅನುಮೊದಿಸುತ್ತಿದ್ದರೆ? ಖಂಡಿತವಾಗಿಯೂ ಇಲ್ಲ. ಭಾರತ ಆಫ್ಘಾನಿಸ್ತಾನದಲ್ಲಿ ಬಂಡವಾಳ ಹೂಡಿದ್ದ ಹಣ 3 ಬಿಲಿಯನ್ ಡಾಲರ್ ಅಂತೆ (ಅಂದರೆ ಅಮೆರಿಕ 10 ದಿನ ಆಫ್ಘಾನಿಸ್ತಾನದಲ್ಲಿ ಮಾಡಿದ ಖರ್ಚಿಗೆ ಸಮ). ಅಮೆರಿಕದ ಹಣ ಬಂಡವಾಳ ಹೂಡಿಕೆ ಅಲ್ಲ. ಅದು ಖರ್ಚು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರು ಕೇವಲ ಪ್ರದರ್ಶನ ನೋಡುವ ಪ್ರೇಕ್ಷಕರಂತೆ. ಕುಣಿಯುವವರಿಗೆ ಕುಣಿದು ಕುಣಿದು ಸಾಕಾಗಿದೆ. ಆದಷ್ಟು ಬೇಗ ಪ್ರದರ್ಶನ ಮುಗಿದರೆ ಸಾಕು ಎಂಬಂತಾಗಿದೆ. ಆದರೆ ಪ್ರೇಕ್ಷಕರಿಗೆ ಪ್ರದರ್ಶನ ಮುಗಿಯುವುದು ಬೇಕಾಗಿಲ್ಲ.ಮೊನ್ನೆ ಆಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ ಸತ್ತ 13 ಅಮೆರಿಕದ ಸೈನಿಕರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಅವರಲ್ಲಿ ನಾನು ವಾಸಿಸುವ ಊರಿನ ನಿಕೋಲ್ ಜೀ ಎನ್ನುವ 23 ವರ್ಷದ ಮಹಿಳೆಯೂ ಒಬ್ಬಳು. 1 ವಾರದ ಹಿಂದೆ ಅಷ್ಟೇ ಅಫ್ಘಾನಿಸ್ತಾನದಲ್ಲಿ ಕಷ್ಟದಲ್ಲಿದ್ದ ಶಿಶುವೊಂದರ ರಕ್ಷಣೆಮಾಡುತ್ತಾ ಇರುವ ಚಿತ್ರವನ್ನು ನಿಕೋಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ತನ್ನ ಉದ್ಯೋಗವನ್ನು ಪ್ರೀತಿಸುತ್ತೇನೆ ಎಂದಿದ್ದಳು.ಆಫ್ಘಾನಿಸ್ತಾನದಿಂದ ಅಮೆರಿಕ ಹಿಂದಕ್ಕೆ ಸರಿಯಬಾರದು ಎಂದು ಹೇಳುವ ಜನರಿಗೆ ಒಂದು ಮಾತು – ಯುದ್ದಕ್ಕಿಂತ ಯುದ್ದದ ವಾರ್ತೆ ಕೇಳುವುದು ರೋಚಕವಂತೆ !!

*** ಚಿತ್ರ: ನಿಕೋಲ್ ಜೀ (23 ವರ್ಷ), ರೋಸವಿಲ್, ಕ್ಯಾಲಿಫಾರ್ನಿಯ ***– ಆನಂದ ಹಾಸ್ಯಗಾರ, ಕರ್ಕಿ (ಅಮೆರಿಕ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *