ಗೀಜಗದ ಗೂಡು & ಇತರ ಪದ್ಯಗಳು

ಗೂಡು ಕಟ್ಟಿಸಿ ಮೊಟ್ಟೆ ಕಾವಿಟ್ಟುಗುಟುಕು ತುತ್ತುಣಿಸುವಜೀವ

ಜಗತ್ತಿನ ಬಂಧದಬಗ್ಗೆ ಬರೆವಾಗ ಇರುವ ಉತ್ಸಾಹಖಾಲಿ ಗೂಡಿನ ಆತ್ಮಕಥೆಕೇಳುವಾಗ ರೆಕ್ಕೆಗಳ ಬಗ್ಗೆ ಪಿಚ್ಚೆನಿಸಿಬದುಕಿನ ಅನಿಶ್ಚಿತತೆ ಕಾಡುತ್ತದೆ*********

****ತನ್ನ ನೇಯ್ದ ತಾಯಿ ಹಕ್ಕಿರೆಕ್ಕೆ ಬಲಿತ ಮರಿಗಳುನೆಗೆದು ಹಾರಿದ ನಂತರಮೌನವಾಗಿ ಬಿಕ್ಕಿದ್ದನ್ನುಕಂಡು ಗೂಡು ಮೌನವಾಯ್ತು*

************ಬಿಡಿಯನ್ನ ಇಡೀ ಆಗಿಸಿಬದುಕು ಕಟ್ಟುವ ಬಗ್ಗೆನಾ ಪಾಠ ಮಾಡುವಾಗಆಕೆ ಕಿಟಕಿಯಿಂದ ಜಗದ ಮೊದಲ ನೇಕಾರನ ನೆಯ್ಗೆಯ ನೋಡಿ ಪುಳಕಗೊಳ್ಳುತ್ತಿದ್ದಳು**************

ಈ ಪ್ರಾಣಿ ಪಕ್ಷಿಗಳುಪ್ರೇಮ ಕಾಮದ ಸುಖ ತಾಯ್ತನದ ಧನ್ಯತೆ ಎಲ್ಲಾಅನುಭವಿಸಿಯೂ ಸ್ವತಂತ್ರವಾಗುವುದರಲ್ಲಿಮನುಷ್ಯನಿಗೆ ಪಾಠವಿದೆಯೇ..?

-ಜಿ. ಟಿ ಸತ್ಯನಾರಾಯಣ ಕರೂರು.15-09-2021. ಬೆಳಿಗ್ಗೆ: 9:30 (ಕೃಪೆ: ಅದ್ಬುತ ಫೋಟೋ ಕ್ಲಿಕ್ಕಿಸಿದ ಲಕ್ಷ್ಮಿ ನಾರಾಯಣ ಸರ್ ಗೆ ಋಣಿ)

ರಾಕೆಟ್, ಉಪಗ್ರಹ, ಕ್ಷಿಪಣಿವಿಜ್ಞಾನ

ತಂತ್ರಜ್ಞಾನದ ಶೋಧಚಂದ್ರನ ದಾಟಿ ಮಂಗಳಕ್ಕೇರುವಾಗ

ಅಂಗಳದ ಕೊಳೆ ಅಡಿಕೆಬೋರ್ವೆಲ್ ನ ಚೀರುವ ಮಗು

ಏಕಕಾಲದಲ್ಲಿ ನೆಲದಟೀಕೆ ಟಿಪ್ಪಣಿ ಬರೆಯುತ್ತವೆ***********

ನೆಲದ ಅಂಟು ನಂಟಿಲ್ಲದೆಒಡ್ಡು ಬಿದ್ದ ಕಣ್ಣೀರ ಕೋಡಿಯ

ತೆವೆಗಣ್ಣಲೂ ನೋಡದೇಕ್ರೌರ್ಯ ಶೋಷಣೆಗೆ ಬೆನ್ನು ತಿರುವಿ

ಬರೀ ಬಿರಿದ ಹೂವಿನ ಬಗ್ಗೆಯೇಕವನ ಗೀಚುವ ಕವಿ

ಕೆಟ್ಟ ರಾಜಕಾರಣಿಗಿಂತಹೆಚ್ಚು ಅಪಾಯಕಾರಿ. ನಿಜವಲ್ಲವೇ..?

************ಕವಿಗಳನ್ನು ಹೊರಗಟ್ಟಿಆದರ್ಶ ರಾಜ್ಯ ಕಟ್ಟುವೆಎಂದಿದ್ದ ಪ್ರಾಚೀನ ಗ್ರೀಕ್ ಚಿಂತಕ

ರಕ್ತದ ಶ್ರೇಷ್ಠತೆಯಲ್ಲಿ ಮುಕ್ತ ಕಾಮವನ್ನ ಎತ್ತಿಹಿಡಿದ.ಗುಮಾನಿ

ಇಷ್ಟೇನಮ್ಮ ಘೋಷಿತ ಪರಮ ಶ್ರೇಷ್ಠರನ್ನಪ್ಲೇಟೋ ಪ್ರಭಾವಿಸಿರಬಹುದೇ..?

*ನಿನ್ನೊಳಗಿನ ನಿನ್ನನೀ ಹುಡುಕುತ್ತಿರುವೆಯೆಂದರೆ

ನನ್ನ ಕವಿತೆ ಕಾಲು ದಾರಿ ತೋರುವುದುಕಿಚ್ಚು ಹತ್ತಿಸಿಕೊಂಡರೂನೀ ಸುಡು ಬೆಂಕಿಯಾಗಲಾರೆ

ಖಚಿತಹಣತೆ ಹಿಡಿದು ನೆಲದ ಜತೆಗೆ ನಡೆವೆಇಷ್ಟೇ.. ಈ ಕ್ಷಣದ ಪ್ರಣಾಳಿಕೆ

-ಸತ್ಯನಾರಾಯಣ ಜಿ. ಟಿ ಕರೂರು(14-09-2021. ಬೆಳಿಗ್ಗೆ: 7 ಗಂಟೆ)

ಇಳಿ ಸಂಜೆ ಮತ್ತೆನಿನ್ನ ನೆನಪಾಯಿತು

ಸ್ವಲ್ಪ ಹೊತ್ತು ಹೂ ಅಂಗಡಿ ಬಳಿಯೇ ನಿಂತು

ತೋಪು ದಾಟಿ ಮನೆ ಬಂದುಅಬ್ಬಲಿಗೆ ಗಿಡಕೆ ಮಣ್ಣು ಹಾಕಿ

ದುಂಡು ಮಲ್ಲಿಗೆ ಕೊಯ್ದುಹೂವಂತ ಸೊಸೆ ಬೇಕೆಂದಅವ್ವನ ಕೈಗಿಟ್ಟೆ….

ಒಂಟಿ ರಾತ್ರಿಗಳಲ್ಲಿಉದಾಸ ಸಂಜೆಗಳಲಿಸುಡುಕೆಂಡದ ವಿರಹಮತ್ತು

ನೋವಿನ ಆಲಾಪನೆಯಲಿಪ್ರೀತಿ ಹುಡುಕಿ ಅಲೆವ ದಾರಿಯಲ್ಲಿ

ಗೋಕುಲದ ಅವಳುಪದೇ ಪದೇ ಎದುರಾಗುವಳು

ಕಂಗಳ ತುಂಟ ಭಾಷೆಮೌನದ ನಿಘಂಟು ಮುನಿಸಿನ

ವ್ಯಾಖರಣಜಗಳದ ವ್ಯಾಖ್ಯಾನ ನಗುವಿನ ಛಂದಸ್ಸಿನೆದುರುಪದವಿ ವಿದ್ವತ್ತುಗಳು ಸೋಲುತ್ತವೆಂಬ

ಪ್ರೇಮ ಪಂಡಿತರ ಅಭಿಪ್ರಾಯದಲ್ಲಿನಿಜವಿರಬಹುದೇ…?

– ಸತ್ಯನಾರಾಯಣ ಜಿ. ಟಿ ಕರೂರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

1 Comment

  1. What you’re creating here is a true oasis of knowledge and inspiration! Every sentence is like a precious pearl, and together they form a fascinating necklace of wisdom. The only thing I found missing was slightly more detailed examples – that would have made it absolutely perfect!

Leave a Reply

Your email address will not be published. Required fields are marked *