ಅಡಿಕೆ ಬೆಳೆಗಾರರ ಪರವಾಗಿ ನಿಂತ ಗುಂಜಗೋಡು ಕುಟುಂಬ

ಸಿದ್ಧಾಪುರ ತಾಲೂಕಿನಲ್ಲಿ ಗುಂಜಗೋಡು ಗ್ರಾಮ ಮತ್ತು ಗುಂಜಗೋಡು ಕುಟುಂಬಕ್ಕೆ ಮಹತ್ವದ ಸ್ಥಾನವಿದೆ. ತಾಲೂಕು ಕೇಂದ್ರದಿಂದ ತುಸುದೂರದ ಗುಂಜಗೋಡು ಲಾಯಾಯ್ತಿನಿಂದ ಸಮಾಜದ ಆಗುಹೋಗುಗಳೊಂದಿಗೆ ಸ್ಪಂದಿಸಿದೆ. ಸುಶಿಕ್ಷಿತ,ಸಮಾಜಮುಖಿ ಗ್ರಾಮವಾದ ಗುಂಜಗೋಡು ಈಗಲೂ ಬಿಳಗಿ ಸೀಮೆಯ ಪ್ರಸಿದ್ಧ ಗ್ರಾಮ. ಸ್ವಾತಂತ್ರ್ಯ ಹೋರಾಟ, ಧಾರ್ಮಿಕ ಕೆಲಸ, ಕಲೆ, ಸಾಂಸ್ಕೃತಿಕತೆ ಎಲ್ಲದರಲ್ಲೂ ಗುಂಜಗೋಡು ಗುರುತಿಸಿಕೊಂಡಿದೆ.

ಗುಂಜಗೋಡಿನ ಕೃಷಿ ಪ್ರಧಾನ ಕುಟುಂಬಗಳಲ್ಲಿ ಹಲವರು ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಹೆಸರು ಮಾಡಿ ದ್ದಾರೆ. ಅವರಲ್ಲಿ ಕೆಲವರು ಅಡಿಕೆ ವ್ಯಾಪಾರಿಗಳಾಗಿ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಸಹಕರಿಸಿದ್ದಾರೆ.

ಗುಂಜಗೋಡಿನ ಕೆಲವು ಅಡಿಕೆ ವರ್ತಕರಲ್ಲಿ ಈಗಿನ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆಯವರ ತಂದೆ ಎಮ್.ಎಸ್. ಹೆಗಡೆ ಗುಂಜಗೋಡು ಹೆಗಡೆ ಎಂದೇ ಪ್ರಸಿದ್ಧರಾಗಿದ್ದರು. ಕಳೆದ ವರ್ಷ ಅಕ್ಟೋಬರ್ ಒಂದರಂದು ನಿಧನರಾಗಿದ್ದ ಎಮ್. ಎಸ್. ಹೆಗಡೆ ಸಿದ್ಧಾಪುರ ಪುರಸಭೆಯ ಸದಸ್ಯರಾಗಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಹಿಂದೆ ಸೇವೆ ಸಲ್ಲಿಸಿದ್ದರು. ಇಂಥ ಸಾರ್ವಜನಿಕ ಸೇವೆಗೆ ಬರುವ ಮೊದಲು ಗುಂಜಗೋಡು ಹೆಗಡೆ ಅಡಿಕೆ ವ್ಯಾಪಾರಸ್ಥರಾಗಿ ಸಾಹಸ ಮಾಡಿದ ವ್ಯಾಪಾರಿ ಕೃಷಿಕ. 1970 ರ ದಶಕದ ಕಷ್ಟದ ದಿನಗಳಲ್ಲಿ ತಾಲೂಕಿನ ಹಳ್ಳಿಗಳಿಗೆ ಸೈಕಲ್ ನಲ್ಲಿ ತೆರಳಿ ವ್ಯಾಪಾರ ಮಾಡುತ್ತಾ ಗಣ್ಯ ವರ್ತಕರಾಗಿ ಬೆಳೆದದ್ದು ಅವರ ಸಾಧನೆ. ಕುಗ್ರಾಮದಂತಿದ್ದಗುಂಜಗೋಡಿನಿಂದ ತಮ್ಮ ಸಾಹಸದ ಪಯಣ ಪ್ರಾರಂಭಿಸಿದ ಎಮ್.ಎಸ್. ಹೆಗಡೆ ಕ್ರಮೇಣ ಸಿದ್ಧಾಪುರಕ್ಕೆ ತಮ್ಮವಾಸ್ತವ್ಯ ಬದಲಿಸಿ ಕೃಷಿ-ವ್ಯಾಪಾರದಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಸಿದ್ಧಾಪುರ ಭಾನ್ಕುಳಿಮಠದ ಆಸ್ತಿಯನ್ನು ಉಳಿಸುವಲ್ಲಿ ಹೆಗಡೆಯವರ ಪಾತ್ರ ಗುರುತವಾಗಿತ್ತು. ಎ.ಪಿ.ಎಂ.ಸಿ.ಯಾರ್ಡ್ ನಿರ್ಮಾಣ, ಭೂನ್ಯಾಯ ಮಂಡಳಿ ಸದಸ್ಯರಾಗಿ ಸಲ್ಲಿಸಿದ ಸೇವೆ ಅವರನ್ನು ಪ್ರಸಿದ್ಧರನ್ನಾಗಿಸಿತ್ತು.

ಇಂದು ಅವರಗುಪ್ಪಾದಲ್ಲಿ ನಡೆದ ಅವರ ವಾರ್ಷಿಕ ಸಂಸ್ಮರಣೆಯಲ್ಲಿ ಅವರ ಕುಟುಂಬಸ್ಥರು, ಹಿತೈಶಿಗಳು, ಗ್ರಾಮಸ್ಥರೆಲ್ಲಾ ಗುಂಜಗೋಡು ಹೆಗಡೆಯವರನ್ನು ಸ್ಮರಿಸಿದರು. ಸಿದ್ಧಾಪುರದಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿರುವ ಅಡಿಕೆ ವರ್ತಕರ ಕುಟುಂಬದ ಎಮ್.ಎಸ್. ಹೆಗಡೆ, ಅವರ ಪುತ್ರ ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ ಹೆಗಡೆ ತಮ್ಮ ಕೃಷಿ-ವ್ಯಾಪಾರ, ವ್ಯವಹಾರಗಳೊಂದಿಗೆ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಮಕ್ಕಳಿಗೆ ವಿದ್ಯಾವಂತರನ್ನಾಗಿಸಿ ಅವರೂ ಕೂಡಾ ಸ್ಥಳೀಯತೆ, ಸಹಜತೆ ಅಳವಡಿಸಿಕೊಳ್ಳುವ ಹಿಂದೆ ಎಮ್.ಎಸ್. ಹೆಗಡೆಯವರ ಕುಟುಂಬದ ಕೊಡುಗೆ ಸ್ಮರಣೀಯ ಎಂದರು.

ಎಮ್.ಎಸ್. ಹೆಗಡೆಯವರ ಎರಡ್ಮೂರು ತಲೆಮಾರು ಕೃಷಿಕರು, ವರ್ತಕರೂ ಆಗಿ ಜನಮೆಚ್ಚುಗೆ ಪಡೆದಿದ್ದಾರೆ. ಹೊರ ಊರುಗಳಲ್ಲಿ ವಿದ್ಯಾಭ್ಯಾಸ,ಉದ್ಯೋಗ ಮಾಡಿ ಜನಮಾನಸದೊಂದಿಗೆ ಬೆರೆತ ಅವರ ಕುಟುಂಬದ ಕುಡಿಗಳೂ ಕೃಷಿ-ಅಡಿಕೆ ವ್ಯಾಪಾರಗಳ ಮೂಲಕ ತಾಲೂಕು, ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಎಮ್.ಎಸ್. ಹೆಗಡೆಯವರ ಸಾಧನೆ, ಸಂಸ್ಮರಣೆಗಳ ಹಿಂದೆ ಅವರ ಗ್ರಾಮ, ಕುಟುಂಬ ಎಂದು ಮತ್ತೊಮ್ಮೆ ಅವರು ಸಾರ್ವಜನಿಕ ಸ್ಮೃತಿಯ ಭಾಗವಾಗಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *