ಮೌನ ಗರ್ಭದ ಕತ್ತಲೆಯ ಸೆಳೆಕು ಹೆಣ್ಣು!

ಮಧುರ ತನ್ನ ಎರಡೆರಡು ಕುಟುಂಬಗಳ ಕತೆಯನ್ನು ಒಬ್ಬಳೇ ಹೇಳುತ್ತಾ ಹೋಗುತ್ತಾಳೆ. ಈ ಕತೆ ಹೇಳುತ್ತಾ ಮುಂದೆ ಮಂಡೋದರಿಯಾಗಿ ಲೌಕಿಕಕ್ಕೆ ಪುರಾಣ, ಚರಿತ್ರೆಯ ಕತೆಯ ಹೂಗಳನ್ನು ಪೋಣಿಸುತ್ತಾಳೆ. ಮೇಲ್ನೋಟಕ್ಕೆ ಇದು ಆಧುನಿಕ ಹೆಣ್ಣೊಬ್ಬಳ ಸ್ವಗತ, ಆದರೆ ಸ್ವಗತದಲ್ಲೇ ವರ್ತಮಾನವನ್ನು ಹೇಳುತ್ತಾ ಚರಿತ್ರೆಯೊಳಗೆ ನುಗ್ಗಿ ಮನುಕುಲದ ಇತಿಹಾಸ, ಪುರಾಣ, ವಾಸ್ತವಗಳಲ್ಲೆಲ್ಲಾ ಹೆಣ್ಣು ಬಲಿಪಶುವಾದ್ದನ್ನು ಹೇಳುವಾಗ ವನಿತಾ ರಾಜೇಶ್‌ ನಮ್ಮನ್ನು ತಮ್ಮದಲ್ಲದ ಇನ್ನೊಂದು ಲೋಕಕ್ಕೆ ಕೊಂಡೊಯ್ಯುತ್ತಾರೆ. ಇದು ಮೊದಲ ಕಥಾನಕ.

ಎರಡನೆಯದ್ದೂ ಇಂಥದ್ದೇ ಕಥನ, ಇಲ್ಲಿ ಮಾಧವಿ ತನ್ನ ಒಡಲಿನ ಪ್ರಸವದ ಕತೆಯನ್ನು ಹೇಳುತ್ತಾ ಹೋಗುತ್ತಾಳೆ. ಒಬ್ಬ ರಾಜ ತನ್ನ ಗುರುಗೌರವಕ್ಕಾಗಿ ಮಗಳನ್ನು ಕೊಡುತ್ತಾನೆ. ಮಗಳನ್ನು ಪಡೆದಾತ ಆಕೆಯನ್ನು ಕುದುರೆಕೊಳ್ಳಲು ಜೂಜಿನ ಪಣವಾಗಿ ಬಳಸುತ್ತಾ ಆಕೆಗೆ ನಾಲ್ಕುಮಕ್ಕಳ ನಂತರ ಸ್ವಯಂವರ ಏರ್ಪಡಿಸುತ್ತಾನೆ. ನಾಲ್ಕು ರಾಜರಿಗೆ ಮಕ್ಕಳನ್ನು ಹಡೆದುಕೊಟ್ಟ ರಾಜಕುಮಾರಿ ಕೊನೆಗೆ ಸ್ವಯಂವರವನ್ನು ಬಹಿಷ್ಕರಿಸುತ್ತಾಳೆ.

ಇವೆರಡು ಪ್ರಸಂಗಗಳು, ಕತೆಗಳನ್ನು ಕತೆಗಳೆನ್ನಿ, ಕಾದಂಬರಿಗಳೆನ್ನಿ, ರಂಗಪ್ರಸ್ತುತಿಗಳೆನ್ನಿ ತಿರುಳು ಪುರುಷಪ್ರಧಾನ ವ್ಯವಸ್ಥೆಯ ಬಲಿಪಶುವಾದ ಹೆಣ್ಣು. ಹೆಣ್ಣನ್ನು ಮುಖ್ಯಭೂಮಿಯಲ್ಲಿಟ್ಟುಕೊಂಡ ಸಿದ್ಧವಾದ ಈ ಎರಡು ನಾಟಕಗಳಲ್ಲಿ ಮೊದಲನೆಯದು ಮಧುರ ಮಂಡೋದರಿ ಮೈಸೂರಿನ ರಂಗಬಂಡಿ ಪ್ರಸ್ತುತಪಡಿಸಿದ ಈ ಏಕವ್ಯಕ್ತಿ ನಾಟಕ ಪ್ರಸಂಗದ ನಿರ್ಧೇಶನ ಮತ್ತು ವಿನ್ಯಾಸ ಮಧು ಮಳವಳ್ಳಿಯವರದು. ಅಭಿನಯಿಸಿದ ವನಿತಾ ರಾಜೇಶ್‌ ಒಂದು ತಾಸಿಗೂ ಅಧಿಕ ಅವಧಿಯುದ್ದಕ್ಕೂ ನಿರರ್ಗಳವಾಗಿ ಸಂಭಾಷಣೆ ಹೇಳತ್ತಾ ಅಭಿನಯಿಸಿದರೂ ದಣಿವು ಕಾಣದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ . ಉಳಿದಂತೆ ಕಥಾಹಂದರ ತಲುಪಿಸುವ ಸಂದೇಶ ಮನುಷ್ಯತ್ವದ ಬುಡ ಮುಟ್ಟುತ್ತದೆ ಎನ್ನುವುದು ಈ ರಂಗಪ್ರಸ್ತುತಿಯ ಹೆಗ್ಗಳಿಕೆ.

ಎರಡನೇ ದಿನದ ರಂಗಪ್ರಸ್ತುತಿ ಮಾಧವಿ, ಬೆಂಗಳೂರಿನ ಕೈವಲ್ಯ ಕಲಾ ಕೇಂದ್ರ ಪ್ರಸ್ತುತಪಡಿಸಿದ ಡಾ. ಶ್ರೀಪಾದ ಭಟ್‌ ವಿನ್ಯಾಸ ನಿರ್ಧೇಶನದ ನಾಟಕ ಸುಧಾ ಅಡಕುಳರ ಮಾಧವಿ. ಪುರಾಣದ ಕಥಾಹಂದರದ ಈ ರಂಗಪ್ರಸ್ತುತಿಯ ಮುಖ್ಯ ಭೂಮಿಕೆ ಹೆಣ್ಣು. ಮಾಧವಿ ಹಡೆಯುವ ಯಂತ್ರವಾಗಿ ರಾಜಸತ್ತೆಯಲ್ಲಿ ಶೋಷಣೇಗೊಳಪಡುವ ಕಥಾ ಹಂದರ ಹೀಗೂ ಉಂಟೆ…? ಎನ್ನುವ ಉದ್ಘಾರಕ್ಕೆ ಕಾರಣವಾದರೆ ಅದು ಕತೆಯ ಶಕ್ತಿ ಮತ್ತು ಸತ್ವ.

ನಿರ್ಧೇಶಕ ಶ್ರೀಪಾದ ಭಟ್‌ ಹಲವು ಉಪಮೆಗಳು, ರಂಗಪರಿಕರಗಳೊಂದಿಗೆ ಸಂಗೀತ ಉಪಕರಣಗಳನ್ನು ಜೋಡಿಸಿರುವುದು ವಿಶೇಶ ಪರಿಣಾಮ ಉಂಟುಮಾಡುತ್ತದೆ. ಅಭಿನಯಿಸಿದ ಶರತ್‌ ಬೋಪಣ್ಣ ಒಂದು ಹೆಜ್ಜೆ ಮುಂದಾದರೆ.. ದಿವ್ಯಶ್ರೀ ನಾಯಕ ದುಪ್ಪಟ್ಟು. ಮೌನದಲ್ಲಿ ಪೊರೆಯುವ ಗರ್ಭದ ಹಿಂದೆ ಇರುವ ಶೋಷಣೆಯ ಯಾತನೆಯನ್ನು ಆಂಗಿಕಾಭಿನಯದಲ್ಲಿ ತೋರಿಸುವಾಗ ಸಾಕ್ಷಾತ್‌ ಮಾಧವಿಯಾಗುವ ದಿವ್ಯಶ್ರೀ ನಿಜಕ್ಕೂ ಶರೀರ, ಶಾರೀರಗಳ ತಾದ್ಯಾತ್ಮದ ಜುಗಲ್‌ ಬಂಧಿಯಲ್ಲಿ ಗೆಲ್ಲುತ್ತಾರೆ.

ಈ ಎರಡು ರಂಗಪ್ರಸ್ತುತಿಗಳನ್ನು ನಮ್ಮೂರಿನಲ್ಲಿ ನೋಡುವಂತೆ ಮಾಡಿದ್ದು ಸಿದ್ಧಾಪುರದ ರಂಗಸೌಗಂಧ, ರಂಗಸೌಗಂಧದ ಎರಡು ದಿವಸಗಳ ರಾಜ್ಯಮಟ್ಟದ ನಾಟಕೋತ್ಸವ ಹಲವು ಕೋನಗಳಿಂದ ಹಿತಕರ ಎನಿಸಿದ್ದು ಅವರೊಂದಿಗಿನ ರಂಗಾಸಕ್ತರ ಅಭಿರುಚಿಯಿಂದ ಎಂದರೆ ಕೃತಜ್ಞತೆ ರಂಗಸೌಗಂಧಕ್ಕೂ ತಲುಪಿದಂತೆ. (ಪ್ರೇಕ್ಷಕ ಕನ್ನೇಶ್)





Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *