ಶಿವರಾಜ್‌ ಕುಮಾರ್‌ ಬರ್ತಾರಂತೆ…..ಹೆಚ್ಚಿದ ಕ್ರೇಜ್‌ ಸ್ಯಾಂಡಲ್‌ ವುಡ್‌ ಕಿಂಗ್‌ ನೋಡಲು ಜನರ ಕಾತರ

ಗುರುವಾರ ಅಂದರೆ ಮೇ೪, ಕನ್ನಡದ ಎವ್ವರ್‌ ಗ್ರೀನ್‌ ಹೀರೋ ಶಿವರಾಜ್‌ ಕುಮಾರ ಶಿರಸಿ-ಸಿದ್ಧಾಪುರಗಳಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

ನೆಚ್ಚಿನ ನಟ ಶಿವಣ್ಣ ತಮ್ಮೂರಲ್ಲಿ ರೋಡ್‌ ಶೋ ನಡೆಸಲಿದ್ದಾರೆ ಎನ್ನುವ ವಿಚಾರ ಶಿರಸಿ-ಸಿದ್ಧಾಪುರದ ಜನತೆಯ ರೋಮಾಂಚನಕ್ಕೆ ಕಾರಣವಾಗಿದೆ.

ಆನಂದ ದಿಂದ ಪ್ರಾರಂಭವಾಗಿ ವೇದದ ವರೆಗೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಶಿವರಾಜ್‌ ಕುಮಾರ ಮೊದಮೊದಲು ಚಾಕಲೇಟ್‌ ಹಿರೋ ಎಂದು ಪರಿಚಿತರಾಗಿದ್ದರು. ಚಿತ್ರರಂಗ ಪ್ರವೇಶಿಸುತ್ತಲೇ ಹ್ಯಾಟ್ರಿಕ್‌ ಹೀರೋ ಎಂದು ಅಭಿದಾನ ಪಡೆದ ಶಿವಣ್ಣ ಮುತ್ತಣ್ಣ, ಓಂ, ಭೂಮಿತಾಯಿಯ ಚೊಚ್ಚಲಮಗ ನಟಸಾರ್ವಭೌಮ, ರಾಕ್ಷಸ, ಕವಚ ,ನಮ್ಮೂರ ಮಂದಾರ ಹೂವೆ, ವೇದ,ಟಗರು ಹೀಗೆ ಶಿವರಾಜ್‌ ನಟಿಸಿದ ಚಿತ್ರಗಳು ಅವರ ವೈವಿಧ್ಯಮಯ ಅಭಿನಯಕ್ಕೆ ಸಾಕ್ಷಿ.

ಜನುಮದ ಜೋಡಿಯಿಂದ ಹಿಡಿದು, ಜೋಡಿಹಕ್ಕಿ ರಣರಂಗ ಮೋಡದ ಮರೆಯಲ್ಲಿ ಆಸೆಗೊಬ್ಬ ಮೀಸೆಗೊಬ್ಬ ಸೇರಿದಂತೆ ನೂರಾರು ಸಿನೆಮಾಗಳಲ್ಲಿ ಪಾತ್ರ ವೈವಿಧ್ಯ, ವಸ್ತ್ರವೈವಿಧ್ಯಗಳಿಂದ ಹೆಸರು ಮಾಡಿದ ಶಿವರಾಜ್‌ ಕುಮಾರ ಅಪ್ಪ ರಾಜ್‌ ಕುಮಾರರಂತೆ ಮಾನವೀಯ ವ್ಯಕ್ತಿ.

ಶಿವರಾಜ್‌ ಕುಮಾರ ಆಗಲಿ ಅಥವಾ ದೊಡ್ಮನೆ ಕುಟುಂಬದ ಯಾರೇ ಆಗಲಿ ರಾಜಕೀಯದ ಬಗ್ಗೆ ವಿಶೇಶ ಆಸಕ್ತಿ,ಒಲವು ಇಟ್ಟುಕೊಂಡವರೇನಲ್ಲ ಆದರೆ ಶಿವರಾಜ್‌ ತಮ್ಮ ಪತ್ನಿ ಗೀತಾ ಕಾರಣಕ್ಕೆ ಕಾಂಗ್ರೆಸ್‌ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ. ರಾಜಕೀಯ ಕುಟುಂಬದ ಕುಡಿಯಾದ ಗೀತಾ ಶಿವರಾಜ್‌ ಕುಮಾರ್‌ ಬಂಗಾರಪ್ಪ ಬದುಕಿದ್ದಾಗ ರಾಜಕೀಯದ ಬಗ್ಗೆ ಯೋಚಿಸಿದವರೂ ಅಲ್ಲ ಪತಿ, ಕುಟುಂಬದ ಹಿತ, ಕೀರ್ತಿ, ಸಾಧನೆಗಳೇ ತಮ್ಮ ವರ ಎಂದು ಭಾವಿಸಿದ್ದ ಗೀತಾ ಸ್ವಯಂ ಕಾಂಗ್ರೆಸ್‌ ಕೈ ಹಿಡಿದು ಪತಿ, ಕನ್ನಡದ ಕಿಂಗ್‌, ಬೆಸ್ಟ್‌ ಹ್ಯೂಮನ್‌ ಬೀಯಿಂಗ್‌ ಶಿವರಾಜ್‌ ರನ್ನು ಕೈ ಪರ ಪ್ರಚಾರಕ್ಕೆ ಕೈ ಹಿಡಿದು ತಂದಿದ್ದಾರೆ. ನಾಲ್ಕು ದಶಕಗಳ ಸಿನಿ ಬದುಕಿನಲ್ಲಿ ನಿರಂತರ ನಾಯಕನಾದ ಶಿವರಾಜ್‌ ಕುಮಾರ ೬೦ ರ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಪ್ರಯಾಣ, ನಟನೆ,ಪ್ರವಾಸ ಮಾಡುವ ಜೊತೆಗೆ ಜನರನ್ನು ಆಕರ್ಷಿಸಬಲ್ಲರು ಎಂಬುದು ವಿಶೇಶ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *