” ದೇವರು” ನನ್ನ ದೇವರು & ರಾಮಮಂದಿರ ವ್ಯಂಗ್ಯ!

ನಾನು ದೇವರನ್ನು ನಂಬುವವನಲ್ಲ. ದೇವರನ್ನು ನಂಬುವವರಿಗಿಂತ ನಾನು ಶ್ರೇಷ್ಠನೆಂದು ತಿಳಿದುಕೊಳ್ಳುವ ಭ್ರಮೆಯೂ ನನಗಿಲ್ಲ. ಪ್ರತಿಯೊಬ್ಬರದೂ ಒಂದೊಂದು ವಿಧಾನ. ದೇವರನ್ನು ನಂಬಿರುವ ಸಾಧಾರಣ ಜನರನ್ನು ನಾನು ನೋಡಿದ್ದೇನೆ. ಅಂಥವರು ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಹೋಗಿ ಶಾಂತಿ ಪಡೆಯುವುದುಂಟು. ಅವರಿಗೆ ನಾನೆಂದು ಅಡ್ಡಿಮಾಡುವವನೂ ಅಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಅವರ ಮುಖಗಳ ಮೇಲೆ ಮೂಡುವ ಶಾಂತಿಯನ್ನು ಪ್ರಾಯಶಃ ಬೇರಾವ ರೀತಿಯಿಂದಲೂ ನಾನು ಅವರಿಗೆ ಕೊಡಲಾರೆ. ಪರಿಸ್ಥಿತಿ ಹೀಗಿರುವಾಗ ಅವರನ್ನು ತಡೆಯಲು ನಾನಾರು…?

ನಾನು ದೇವರಲ್ಲಿ ನಂಬಿಕೆ ಇಲ್ಲದವನೆನೋ ನಿಜ. ಆದರೆ ಎಷ್ಟೋ ಕಲಾತ್ಮಕ ಕಲ್ಪನೆಗಳು ನನ್ನ ಮನ ಮಿಡಿಯುತ್ತವೆ. ಉದಾಹರಣೆಗೆ ಶಿಲುಬೆ ಮೇಲಿರುವ ಯೇಸುವಿನ ಕಲ್ಪನೆಯು ಕೋಟಿಗಟ್ಟಲೇ ಕ್ರಿಶ್ಚಿಯನ್ನರನ್ನು ಸೆಳೆದಂತೆ ನನ್ನ ಮನವನ್ನೂ ಸೆಳೆದಿದೆ. ಹ್ಯಾಮ್ಲೆಟ್ ಮತ್ತು ಜೂಲಿಯೆಟ್ ನನ್ನ ಮನ ಮಿಡಿಯಬಹುದಾದರೆ ಹುಸೇನ್ ಮತ್ತು ಏಸು ನನ್ನ ಮನ ಸೆಳೆಯಬಾರದೇಕೆ? ಅದರಂತೆಯೇ ರಾಮ, ಕೃಷ್ಣ, ಶಿವನ ಕಲ್ಪನೆಯೂ ನನಗೆ ಆಕರ್ಷಣೀಯವೆನಿಸುತ್ತದೆ. ಆ ಶಿವನಂತೂ ಎಲ್ಲರಿಗಿಂತ ತುಸು ಹೆಚ್ಚಿಗೆ! ದೇವರಲ್ಲಿ ನಂಬಿಕೆ ಇರಲಿ ಬಿಡಲಿ ಕಲಾಪೂರ್ಣ ಕಲ್ಪನೆಗಳು ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ…” — ಡಾ.ಲೋಹಿಯಾ

-‘ ಡಾ.ರಾಮಮನೋಹರ ಲೋಹಿಯಾ’

ನನ್ನ ದೇವರು

-ದೇವನೂರ ಮಹಾದೇವ

(“ಎದೆಗೆ ಬಿದ್ದ ಅಕ್ಷರ” ಸಂಕಲನದಿಂದ ಆಯ್ದ ಒಂದು ಭಾಗ. ನಮ್ಮ ಮರು ಓದಿಗಾಗಿ… ರೇಖಾ ಚಿತ್ರ- ದೇಮ)

ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನ್ನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನೂ ಕೇಳಿದರೆ ಯಾವುದಕ್ಕೂ ಇರಲಿ ಎಂದು ನಾನು ಬರೆಯಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ನಿರ್ಧರಿಸಿಕೊಂಡೋ ಏನೋ ನನ್ನನ್ನು ಕೇಳಲೇ ಇಲ್ಲ. ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.

ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:

ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ:

‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’

‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’

‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’

‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.

‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’

-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!

ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

viral news of india today…..! ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”!

‘Rented Girlfriend’: ಬಾಡಿಗೆ ”ಗರ್ಲ್ ಫ್ರೆಂಡ್” ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”! ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ...

ಅಕ್ರಮ ಮರಳು: ಪೊಲೀಸರಿಗೆ ಕೈ ತುಂಬಾ ಕಾಸು!

ಅಕ್ರಮ ಮರಳು ಸಾಗಾಣಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಭರ್ಜರಿ ಕಮಾಯಿ ಮಾಡುತಿದ್ದಾರೆ ಎನ್ನುವ ಮಾತು ಚರ್ಚೆಯಲ್ಲಿದೆ. ಗೇರಸೊಪ್ಪಾ ಅಥವಾ ಮಲೆನಾಡು, ಕರಾವಳಿಯ ಮರಳು...

ಕಾಂಗ್ರೆಸ್ ಅಲ್ಪಸಂಖ್ಯಾತರ ‘ಬಹುದೊಡ್ಡ ಶತ್ರು’; 2024ರ ಚುನಾವಣೆಯಲ್ಲಿ ಮೀಸಲಾತಿ ಮುಖ್ಯ ವಿಷಯ: ಪ್ರಧಾನಿ ಮೋದಿ

ಇಂಡಿಯಾ ಒಕ್ಕೂಟವು ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷಗಳು ಪರಿಶಿಷ್ಟ ಜಾತಿ (SC), ಪರಿಶಿಷ್ಟ...

‘ಕಾಂಗ್ರೆಸ್ ಕುಟುಂಬ’: ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು ಕಾರ್ಯಕ್ರಮ

ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ‘ಕಾಂಗ್ರೆಸ್ ಕುಟುಂಬ’ ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸುತ್ತಿದೆ. ಉಪಕ್ರಮದ ಭಾಗವಾಗಿ, ಪ್ರತಿ...

ಕರಾವಳಿಯಲ್ಲಿ ಅಕ್ರಮ ಮರಳು ದಂಧೆ ಹೆಚ್ಚಿಸಲಿದೆಯೆ ಹಸಿರು ಪೀಠದ ಆದೇಶ?

ಕರಾವಳಿಯಲ್ಲಿ ಮರಳು ಮಾರಾಟ, ಸಾಗಾಟಕ್ಕೆ ನಿರ್ಬಂಧ ಹೇರಿ ಆದೇಶ ಮಾಡಿರುವ ಹಸಿರು ಪೀಠದ ಹೊಸ ಆದೇಶ ಅಕ್ರಮ ಮರಳುಗಾರಿಕೆಗೆ ದಾರಿ ಮಾಡಲಿದೆಯೆ? ಎನ್ನುವ ಪ್ರಶ್ನೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *