ಅಕ್ರಮ ಮರಳು: ಪೊಲೀಸರಿಗೆ ಕೈ ತುಂಬಾ ಕಾಸು!

ಅಕ್ರಮ ಮರಳು ಸಾಗಾಣಿಕೆಯಿಂದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಭರ್ಜರಿ ಕಮಾಯಿ ಮಾಡುತಿದ್ದಾರೆ ಎನ್ನುವ ಮಾತು ಚರ್ಚೆಯಲ್ಲಿದೆ. ಗೇರಸೊಪ್ಪಾ ಅಥವಾ ಮಲೆನಾಡು, ಕರಾವಳಿಯ ಮರಳು ಸಾಗಾಟಕ್ಕೆ ಈ ವರೆಗೆ ಜಿಲ್ಲೆಯಾದ್ಯಂತ ನಿರ್ಬಂಧಗಳಿರಲಿಲ್ಲ. ಜಿಲ್ಲೆಯೊಳಗೆ ಪರವಾನಗಿ ಪಡೆದ ಮರಳು ಸಾಗಾಟದ ವಾಹನಗಳು ಸುತ್ತುತಿದ್ದವು. ಆದರೆ ಗಣಿ ಇಲಾಖೆಯ ಆಂಶಿಕ ಪರವಾನಗಿ ಜೊತೆ ಪೊಲೀಸರಿಗೆ ತಿಂಗಳ ಮಾಮೂಲಿ ನೀಡಿ ಅನೇಕ ವಾಹನಗಳು ಅನಾಯಾಸವಾಗಿ ತಿರುಗುತಿದ್ದವು.

ಹಸಿರುಪೀಠದ ಆದೇಶ- ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮರಳುಗಾರಿಕೆಗೆ ನಿರ್ಬಂಧ ಹೇರಿ ಕೇಂದ್ರದ ಹಸಿರುಪೀಠ ಕಳೆದ ವಾರ ಆದೇಶ ಹೊರಡಿಸಿದೆ. ಈ ಆದೇಶದ ನಂತರ ಪೊಲೀಸರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಹಸಿರುಪೀಠ ಮರಳುಗಾರಿಕೆ ನಿಷೇಧಿಸುವ ಮೊದಲು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮರಳು ಮಾರಾಟ ಮತ್ತು ಸಾಗಾಟಕ್ಕೆ ಅನುಮತಿ ನೀಡುತಿತ್ತು. ಈಗಿನ ಹೊಸ ಆದೇಶದಿಂದಾಗಿ ಉತ್ತರ ಕನ್ನಡ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರವಾನಗಿ ನೀಡುತ್ತಿಲ್ಲ ಆದರೆ ಅಕ್ರಮ ಮರಳು ಸಾಗಾಟ ಮಾಡುವವರಿಗೆ ಇದು ವರದಾನವಾಗಿದೆ. ಅಧೀಕೃತ ಪರವಾನಗಿ ಈಗ ಅನಿವಾರ್ಯವಲ್ಲದಿರುವುದರಿಂದ ಗಣಿ ಇಲಾಖೆಗೆ ಅನುಮತಿ ಕೇಳದೆ ಮರಳುಗಾಡಿಗಳು ಮರಳು ಸಾಗಾಟ ಮಾಡುತಿದ್ದಾರೆ.

ಕಳೆದ ಸೋಮುವಾರ ಸಂಜೆ ಬಿ.ಜೆ.ಪಿ.ಯ ನಾಯಕರ ಎರಡು ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದು ವ್ಯವಹಾರ ಮಾಡಿ ಬಿಟ್ಟುಕೊಟ್ಟಿದ್ದಾರೆ. ಇದರ ಜೊತೆಗೆ ಶಿರಸಿ ಶೆಟ್ಟಿ ಗ್ಯಾಂಗ್‌ ಕೂಡಾ ಸ್ಥಳೀಯ ಪೊಲೀಸರಿಗೆ ಕ್ಯಾರೆ ಎನ್ನದೆ ಅಕ್ರಮ ಮರಳು ಸಾಗಾಟ ಮಾಡುತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಈ ವ್ಯವಹಾರದ ನಡುವೆ ಚುನಾವಣೆವೇಳೆಗೆ ಬಂದಿದ್ದ ಸಿದ್ಧಾಪುರದ ಹಿರಿಯ ಅಧಿಕಾರಿಯೊಬ್ಬರು ಕೆಲವು ಪ್ರಮುಖ ಕಳ್ಳರಿಗೆ ರಿಯಾಯತಿ ನೀಡಿ ಸ್ಥಳೀಯ ಹೊಸ ಮರಳು ಸಾಗಾಟಗಾರರಿಗೆ ಎರಡು ತಿಂಗಳ ಮಾಮೂಲಿ ಮೊತ್ತ ಮೇ ತಿಂಗಳಲ್ಲೇ ಕೊಡಬೇಕೆಂದು ಫರ್ಮಾನು ಹೊರಡಿಸಿದ ವೇಳೆಗೆ ಸರಿಯಾಗಿ ಹಸಿರುಪೀಠ ಮರಳು ಸಾಗಾಟಕ್ಕೆ ನಿರ್ಬಂಧ ಹೇರಿದೆ.!

ಈ ಹೊಸ ಬೆಳವಣಿಗೆಯಿಂದ ಕಂಗಾಲಾದ ಪೊಲೀಸ್‌ ಅಧಿಕಾರಿ ಯುವ ಮರಳು ಸಾಗಾಟಗಾರರು ಮತ್ತು ಅವರ ಹಿತೈಶಿ ರಾಜಕಾರಣಿಯೊಬ್ಬರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಈ ಘಟನೆಗೆ ಪ್ರತಿಕ್ರೀಯಿಸಿದ ಯುವ ರಾಜಕಾರಣಿ ಕೆಂಡಾಮಂಡಲರಾಗಿ ವಿಚಾರ ಶಾಸಕರ ವರೆಗೂ ತಲುಪಿದೆ!

ಎರಡು ತಿಂಗಳಲ್ಲಿಎರಡು ಡಜನ್‌ ಲಕ್ಷಗಳನ್ನು ಜೇಬಿಗಿಳಿಸಿದ ಅಧಿಕಾರಿ ಕೊನೆಯ ತಿಂಗಳಲ್ಲಿ ಡಬಲ್‌ ಲಾಭ ಮಾಡಲು ಹೋಗಿ ಕಾಗೇರಿ ಬಣದ ಲಾಭದ ರಾಜಕಾಣಿಗಳಿಗೆ ನೆರವಾಗಿ ಆಡಳಿತ ಪಕ್ಷದ ಹೊಸ ಹುಡುಗರಿಗೆ ಧಮಕಿ ಹಾಕುವ ವರೆಗೆ ನಡೆದ ಬೆಳವಣಿಗೆ ಪೊಲೀಸರ ಬ್ರಷ್ಟತೆ, ದುಷ್ಟತೆಯನ್ನು ಬಹಿರಂಗ ಮಾಡಿದೆ.ಇದು ರಾಜಕೀಯ ಬೆಳವಣಿಗೆ, ತಾಲೂಕಿನ ಕೆಲವರ ಕೆಂಗಣ್ಣಿಗೂ ಗುರಿಯಾಗಿದೆ. ಉಂಡು ಹೋದ ಕೊಂಡೂ ಹೋದ ಎನ್ನುವಂತಾಗಿರುವ ಪೊಲೀಸ್‌ ಅಧಿಕಾರಿಯ ಲೋಭ ಸ್ಥಳೀಯ ರಾಜಕೀಯದ ಮೇಲೂ ಕರಿನೆರಳು ಬೀರಿದೆ ಎನ್ನುವಲ್ಲಿಗೆ ಸಿದ್ಧಾಪುರದ ವಸೂಲಿ ಮುಖವಾಡಗಳ ಅನಾವರಣವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *