ಇವರಿಗೆ ಗಣೇಶ ಹಬ್ಬ ನಿಷೇಧ!!- ganesh fest special

ನಮಗೆಲ್ಲರಿಗೂ ಗಣೇಶನ ಹಬ್ಬ ಎಂದರೆ ಖುಷಿಯ ದಿನ. ಜಾತಿ, ಧರ್ಮವನ್ನು ಮೀರಿ ನಾವು ಈ ಸಂಭ್ರಮದಲ್ಲಿ ಭಾಗಿಯಾಗುತ್ತೇವೆ. ಆದರೆ ಈ ಹಬ್ಬವನ್ನು ಆಚರಿಸದ ಒಂದು ಸಮುದಾಯ ಇದೆ ನಿಮಗೆ ಗೊತ್ತ? ದಕ್ಷಿಣ ಕನ್ನಡದ ಕುಡುಬಿಗಳ ಪಾಲಿಗೆ ಚೌತಿ ಎಂದರೆ ವಂಚಿಸಲ್ಪಟ್ಟ ದಿನ. ಆದುದರಿಂದ ಕುಡುಬಿಗಳು ಗಣೇಶ ಹಬ್ಬಕ್ಕೆ ನಿಷೇಧ ಹೇರಿದ್ದಾರೆ. ಇದಕ್ಕೊಂದು ಪುರಾಣ ಕತೆಯೂ ಇದೆ. ಈ ಕತೆಯನ್ನು ನನಗೆ ಹೇಳಿದ್ದು, ಕುಡುಬಿ ಪದವಿನ ಕುಡುಬಿ ಜನಾಂಗದ ಗುರಿಕಾರ ಗಿರಿಯ ಗೌಡ್ರು.

ಪುರಾಣಗಳಲ್ಲಿ ನಾವು ತಿಳಿದುಕೊಂಡಂತೆ, ಕೋಪಗೊಂಡಿದ್ದ ಶಿವ ಬಾಲಕ ಗಣೇಶನ ರುಂಡವನ್ನು ಕತ್ತರಿಸಿರುತ್ತಾನೆ. ಇದರಿಂದ ಅಸಮಾಧಾನಗೊಂಡ ಪಾರ್ವತಿ ತನ್ನ ಮಗನನ್ನು ಬದುಕಿಸಿಕೊಡುವಂತೆ ಶಿವನಿಗೆ ಅಂಗಲಾಚುತ್ತಾಳೆ. ಈ ಸಂಧರ್ಭ ತನ್ನ ಪುತ್ರನಿಗೆ ಪ್ರಾಣಿಯೊಂದರ ತಲೆ ತರಲು ಶಿವ ಭೂಲೋಕದ ಜನರಿಗೆ ಅಪ್ಪಣೆ ನೀಡುತ್ತಾನೆ. ಕುಡುಬಿಗಳು ಹುಟ್ಟು ಬೇಟೆಗಾರರು. ಬುಡಕಟ್ಟು ಜನರು. ಕಾಡಿನ ತಪ್ಪಲಲ್ಲೇ ಇರುವ ಕುಡುಬಿಗಳು ಶಿವನ ಆಜ್ಞೆಯಂತೆ ಆನೆಯ ರುಂಡ ಕಡಿದು ತರುತ್ತಿರುತ್ತಾರೆ. ಅಷ್ಟರಲ್ಲಿ ಅದೇ ದಾರಿಯಲ್ಲಿ ಬರುವ ಮತ್ತೊಂದು ಸಮುದಾಯ (ಕೊಂಕಣಿ ಮಾತನಾಡುವ ಬ್ರಾಹ್ಮಣರು) ಮುಗ್ದ ಕುಡುಬಿಗಳನ್ನು ತಡೆದು ನಿಲ್ಲಿಸುತ್ತಾರೆ. ‘ನಿಮ್ಮ ಮೈಯೆಲ್ಲಾ ರಕ್ತಸಿಕ್ತವಾಗಿದ್ದು, ದೇವರ ಬಳಿ ಹೋಗುವಾಗ ಶುಚಿತ್ವವಿರಬೇಕು. ಅದಕ್ಕಾಗಿ ಸ್ನಾನ ಮಾಡಿಕೊಂಡು ಬನ್ನಿ.

ಅಲ್ಲಿಯವರೆಗೆ ಆನೆ ರುಂಡವನ್ನು ನಾವು ಕಾಯುತ್ತೇವೆ’’ ಎಂದು ಕುಡುಬಿಗಳನ್ನು ನಂಬಿಸುತ್ತಾರೆ. ಮುಗ್ದ ಕುಡುಬಿಗಳು ಆ ತಂಡದ ಮಾತನ್ನು ನಂಬಿ ಕೆರೆಗೆ ಇಳಿಯುತ್ತಿದ್ದಂತೆ ಆ ತಂಡ ಆನೆ ರುಂಡವನ್ನು ಕದ್ದೊಯ್ದು ಶಿವನಿಗೊಪ್ಪಿಸಿ ಗಣೇಶನನ್ನು ಗಜಮುಖಜ ಎಂದು ಸ್ತುತಿಸುತ್ತಾರೆ. ಇದರಿಂದಾಗಿ ಕುಡುಬಿಗಳು ಬೇಸರಗೊಳ್ಳುತ್ತಾರೆ. ಕಷ್ಟ ಪಟ್ಟದ್ದು ನಾವು, ಆದರೆ ಅದನ್ನು ಬಳಸಿಕೊಂಡದ್ದು ಅವರು. ಈ ಕಾರಣದಿಂದಾಗಿಯೇ ಕುಡುಬಿಗಳು ಗಣೇಶ ಚತುರ್ಥಿಯನ್ನು ಆಚರಿಸುವುದೇ ಇಲ್ಲ ಎನ್ನುತ್ತಾರೆ ಕುಡುಬಿಪದವಿನ ಕುಡುಬಿ ಜನಾಂಗದ ಗುರಿಕಾರ ಗಿರಿಯ ಗೌಡ್ರು. ಗೋವಾ ಮೂಲದವರಾದ ಕುಡುಬಿಗಳ ಆಡು ಭಾಷೆ ಕೊಂಕಣಿ. ಕೃಷಿಯಲ್ಲಿ ಪರಿಣಿತರಾಗಿರುವ ಕುಡುಬಿಗಳು ಈಗಲೂ ಬೇಟೆಗಾರರು. ಹೋಲಿ ಆಚರಣೆ ಇವರ ಪ್ರಮುಖ ಹಬ್ಬ. ಹೋಲಿ ಹಬ್ಬಕ್ಕೆ ಮೊದಲ ತಿಂಗಳು ಈಗಲೂ ಬೇಟೆಗೆ ಹೋಗಿ ಸಾಮೂಹಿಕ ಮಾಂಸದ ಅಡುಗೆ ಮಾಡಿ ಉಣ್ಣುವ ರೂಢಿ ಇಂದಿಗೂ ತಮ್ಮಲ್ಲಿ ಚಾಲ್ತಿಯಲ್ಲಿದೆ ಎನ್ನುತ್ತಾರೆ ಕುಡುಬಿ ಸಮುದಾಯದ ಯುವಕ ಸದಾನಂದ.

ಕೃಷಿಯನ್ನೇ ತಮ್ಮ ಜೀವಾಳವಾಗಿಸಿಕೊಂಡ ಕುಡುಬಿಗಳು ಕೃಷಿ ಹೊರತುಪಡಿಸಿ ಬೇರಾವುದೇ ಕಾಯಕಕ್ಕೆ ಮುಂದಾಗುವುದಿಲ್ಲ ಎಂಬುದು ವಿಶೇಷ. ಆದರೆ ಕೃಷಿ- ಪ್ರಕೃತಿಯ ಜೊತೆ ನಿಕಟ ಸಂಬಂಧವಿರಿಸಿಕೊಂಡ ಗಣೇಶ ಚತುರ್ಥಿ ಮಾತ್ರ ಈ ಸಮುದಾಯಕ್ಕೆ ನಿಷಿದ್ಧ. ತಮ್ಮ ಊರು ಕೇರಿಗಳಲ್ಲಿ ಗಣೇಶೋತ್ಸವದ ಎಷ್ಟೇ ಗೌಜಿ ಗಮ್ಮತ್ತು ನಡೆದರೂ ಕುಡುಬಿಗಳು ಮಾತ್ರ ಗಣೇಶ ಚತುರ್ಥಿ ದಿನ ಆ ಕಡೆ ತಲೆ ಹಾಕಲ್ಲ ಎಂಬುದು ಮಾತ್ರ ವಿಶೇಷವೇ ಸರಿ.

-baseer b.m.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶಿರಸಿ – ಹಣಕಾಸಿನ ವಿಚಾರ ಒಂದು ಸಾವು, ಮಹಿಳೆಯ ಬಂಧನ!

ಶಿರಸಿ ಪೊಲೀಸ್ರಿಂದ ಕಾರ್ಯಚರಣೆ. ಎಟಿಎಂ ನಿಂದ ಹಣ ತೆಗೆಯಲು ಮುಗ್ದ ಹೆಣ್ಣು ಮಕ್ಕಳಿಗೆ ನೆರವಾಗುವ ನಾಟಕಮಾಡಿ ಅವರ ಎಟಿಎಂ ನಿಂದಲೇ ಹಣ ತೆಗೆದು ಪರಾರಿಯಾಗುತ್ತಿದ್ದ...

ನಾನು ಗ್ಯಾರಂಟಿ ವಿರೋಧಿಯಲ್ಲ…- ಆರ್.ವಿ. ದೇಶಪಾಂಡೆ

ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ...

ಕಾನಗೋಡು ಬಳಿ ಅಪಘಾತ, ಒಂದು ಸಾವು

ಶಿರಸಿ ತಾಲೂಕಿನ ಕಾನಗೋಡು ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬರಿಗೆ ತೀವೃತರಹದ ಗಾಯಗಳಾದ ಬಗ್ಗೆ ವರದಿಯಾಗಿದೆ. ಕಾರು...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *