ಇವರಿಗೆ ಗಣೇಶ ಹಬ್ಬ ನಿಷೇಧ!!- ganesh fest special

ನಮಗೆಲ್ಲರಿಗೂ ಗಣೇಶನ ಹಬ್ಬ ಎಂದರೆ ಖುಷಿಯ ದಿನ. ಜಾತಿ, ಧರ್ಮವನ್ನು ಮೀರಿ ನಾವು ಈ ಸಂಭ್ರಮದಲ್ಲಿ ಭಾಗಿಯಾಗುತ್ತೇವೆ. ಆದರೆ ಈ ಹಬ್ಬವನ್ನು ಆಚರಿಸದ ಒಂದು ಸಮುದಾಯ ಇದೆ ನಿಮಗೆ ಗೊತ್ತ? ದಕ್ಷಿಣ ಕನ್ನಡದ ಕುಡುಬಿಗಳ ಪಾಲಿಗೆ ಚೌತಿ ಎಂದರೆ ವಂಚಿಸಲ್ಪಟ್ಟ ದಿನ. ಆದುದರಿಂದ ಕುಡುಬಿಗಳು ಗಣೇಶ ಹಬ್ಬಕ್ಕೆ ನಿಷೇಧ ಹೇರಿದ್ದಾರೆ. ಇದಕ್ಕೊಂದು ಪುರಾಣ ಕತೆಯೂ ಇದೆ. ಈ ಕತೆಯನ್ನು ನನಗೆ ಹೇಳಿದ್ದು, ಕುಡುಬಿ ಪದವಿನ ಕುಡುಬಿ ಜನಾಂಗದ ಗುರಿಕಾರ ಗಿರಿಯ ಗೌಡ್ರು.

ಪುರಾಣಗಳಲ್ಲಿ ನಾವು ತಿಳಿದುಕೊಂಡಂತೆ, ಕೋಪಗೊಂಡಿದ್ದ ಶಿವ ಬಾಲಕ ಗಣೇಶನ ರುಂಡವನ್ನು ಕತ್ತರಿಸಿರುತ್ತಾನೆ. ಇದರಿಂದ ಅಸಮಾಧಾನಗೊಂಡ ಪಾರ್ವತಿ ತನ್ನ ಮಗನನ್ನು ಬದುಕಿಸಿಕೊಡುವಂತೆ ಶಿವನಿಗೆ ಅಂಗಲಾಚುತ್ತಾಳೆ. ಈ ಸಂಧರ್ಭ ತನ್ನ ಪುತ್ರನಿಗೆ ಪ್ರಾಣಿಯೊಂದರ ತಲೆ ತರಲು ಶಿವ ಭೂಲೋಕದ ಜನರಿಗೆ ಅಪ್ಪಣೆ ನೀಡುತ್ತಾನೆ. ಕುಡುಬಿಗಳು ಹುಟ್ಟು ಬೇಟೆಗಾರರು. ಬುಡಕಟ್ಟು ಜನರು. ಕಾಡಿನ ತಪ್ಪಲಲ್ಲೇ ಇರುವ ಕುಡುಬಿಗಳು ಶಿವನ ಆಜ್ಞೆಯಂತೆ ಆನೆಯ ರುಂಡ ಕಡಿದು ತರುತ್ತಿರುತ್ತಾರೆ. ಅಷ್ಟರಲ್ಲಿ ಅದೇ ದಾರಿಯಲ್ಲಿ ಬರುವ ಮತ್ತೊಂದು ಸಮುದಾಯ (ಕೊಂಕಣಿ ಮಾತನಾಡುವ ಬ್ರಾಹ್ಮಣರು) ಮುಗ್ದ ಕುಡುಬಿಗಳನ್ನು ತಡೆದು ನಿಲ್ಲಿಸುತ್ತಾರೆ. ‘ನಿಮ್ಮ ಮೈಯೆಲ್ಲಾ ರಕ್ತಸಿಕ್ತವಾಗಿದ್ದು, ದೇವರ ಬಳಿ ಹೋಗುವಾಗ ಶುಚಿತ್ವವಿರಬೇಕು. ಅದಕ್ಕಾಗಿ ಸ್ನಾನ ಮಾಡಿಕೊಂಡು ಬನ್ನಿ.

ಅಲ್ಲಿಯವರೆಗೆ ಆನೆ ರುಂಡವನ್ನು ನಾವು ಕಾಯುತ್ತೇವೆ’’ ಎಂದು ಕುಡುಬಿಗಳನ್ನು ನಂಬಿಸುತ್ತಾರೆ. ಮುಗ್ದ ಕುಡುಬಿಗಳು ಆ ತಂಡದ ಮಾತನ್ನು ನಂಬಿ ಕೆರೆಗೆ ಇಳಿಯುತ್ತಿದ್ದಂತೆ ಆ ತಂಡ ಆನೆ ರುಂಡವನ್ನು ಕದ್ದೊಯ್ದು ಶಿವನಿಗೊಪ್ಪಿಸಿ ಗಣೇಶನನ್ನು ಗಜಮುಖಜ ಎಂದು ಸ್ತುತಿಸುತ್ತಾರೆ. ಇದರಿಂದಾಗಿ ಕುಡುಬಿಗಳು ಬೇಸರಗೊಳ್ಳುತ್ತಾರೆ. ಕಷ್ಟ ಪಟ್ಟದ್ದು ನಾವು, ಆದರೆ ಅದನ್ನು ಬಳಸಿಕೊಂಡದ್ದು ಅವರು. ಈ ಕಾರಣದಿಂದಾಗಿಯೇ ಕುಡುಬಿಗಳು ಗಣೇಶ ಚತುರ್ಥಿಯನ್ನು ಆಚರಿಸುವುದೇ ಇಲ್ಲ ಎನ್ನುತ್ತಾರೆ ಕುಡುಬಿಪದವಿನ ಕುಡುಬಿ ಜನಾಂಗದ ಗುರಿಕಾರ ಗಿರಿಯ ಗೌಡ್ರು. ಗೋವಾ ಮೂಲದವರಾದ ಕುಡುಬಿಗಳ ಆಡು ಭಾಷೆ ಕೊಂಕಣಿ. ಕೃಷಿಯಲ್ಲಿ ಪರಿಣಿತರಾಗಿರುವ ಕುಡುಬಿಗಳು ಈಗಲೂ ಬೇಟೆಗಾರರು. ಹೋಲಿ ಆಚರಣೆ ಇವರ ಪ್ರಮುಖ ಹಬ್ಬ. ಹೋಲಿ ಹಬ್ಬಕ್ಕೆ ಮೊದಲ ತಿಂಗಳು ಈಗಲೂ ಬೇಟೆಗೆ ಹೋಗಿ ಸಾಮೂಹಿಕ ಮಾಂಸದ ಅಡುಗೆ ಮಾಡಿ ಉಣ್ಣುವ ರೂಢಿ ಇಂದಿಗೂ ತಮ್ಮಲ್ಲಿ ಚಾಲ್ತಿಯಲ್ಲಿದೆ ಎನ್ನುತ್ತಾರೆ ಕುಡುಬಿ ಸಮುದಾಯದ ಯುವಕ ಸದಾನಂದ.

ಕೃಷಿಯನ್ನೇ ತಮ್ಮ ಜೀವಾಳವಾಗಿಸಿಕೊಂಡ ಕುಡುಬಿಗಳು ಕೃಷಿ ಹೊರತುಪಡಿಸಿ ಬೇರಾವುದೇ ಕಾಯಕಕ್ಕೆ ಮುಂದಾಗುವುದಿಲ್ಲ ಎಂಬುದು ವಿಶೇಷ. ಆದರೆ ಕೃಷಿ- ಪ್ರಕೃತಿಯ ಜೊತೆ ನಿಕಟ ಸಂಬಂಧವಿರಿಸಿಕೊಂಡ ಗಣೇಶ ಚತುರ್ಥಿ ಮಾತ್ರ ಈ ಸಮುದಾಯಕ್ಕೆ ನಿಷಿದ್ಧ. ತಮ್ಮ ಊರು ಕೇರಿಗಳಲ್ಲಿ ಗಣೇಶೋತ್ಸವದ ಎಷ್ಟೇ ಗೌಜಿ ಗಮ್ಮತ್ತು ನಡೆದರೂ ಕುಡುಬಿಗಳು ಮಾತ್ರ ಗಣೇಶ ಚತುರ್ಥಿ ದಿನ ಆ ಕಡೆ ತಲೆ ಹಾಕಲ್ಲ ಎಂಬುದು ಮಾತ್ರ ವಿಶೇಷವೇ ಸರಿ.

-baseer b.m.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *