ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ ಮೊದಲ ಪ್ರಜೆ ಭಾರತದ ರಾಷ್ಟ್ರಪತಿ ಆಗಿದ್ದಾರೆ. ಇದೆಲ್ಲಾ ಭಾರತದ ಸಂವಿಧಾನ ನೀಡಿರುವ ಸೌಲತ್ತು, ದೌಲತ್ತು. ಇದೇ ಸಾಲಿಗೆ ಸೇರುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬೇಡ್ಕಣಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಉಲ್ಲಾಸ್‌ ಗೌಡರ್.‌

ಯುವಕ ಉಲ್ಲಾಸ್‌ ಗೌಡರ್‌ ಇನ್ನೂ ಮೂವತ್ತು ವರ್ಷ ಮೀರದ ಯುವಕ. ಪಿ.ಯು.ಸಿ. ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಾ ಸ್ವಂತ: ಗ್ರಾಮ ತ್ಯಾರಸಿ ಊರಲ್ಲಿ ಕೃಷಿ ಮಾಡಿಕೊಂಡಿದ್ದಾಗ ಜೀವನೋಪಾಯಕ್ಕಾಗಿ ನಗರದ ಪೆಟ್ರೋಲ್‌ ಬಂಕ್‌ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಇದಕ್ಕಿಂತ ಮೊದಲು ಈತ ದಂತವೈದ್ಯರ ಸಹಾಯಕ, ಬ್ಯಾಂಕಿನ ಭದ್ರತಾ ಸಿಬ್ಬಂದಿ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾತ.

ಈ ಚುರುಕು ಯುವಕ ನಗರದ ಪೆಟ್ರೋಲ್‌ ಬಂಕ್‌ ನಲ್ಲಿ ಕೆಲಸ ಮಾಡುತಿದ್ದಾಗ ಬಂದ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ೩ ಬಿ ಮೀಸಲಾತಿಯಿಂದ ತ್ಯಾರಸಿ ವಾರ್ಡನ ಗ್ರಾ.ಪಂ. ಸದಸ್ಯನಾಗಿ ಆಯ್ಕೆಯಾಗುತ್ತಾನೆ. ಗ್ರಾ.ಪಂ. ನ ಸಾಮಾನ್ಯ ಸದಸ್ಯನಾಗಿ ಆಯ್ಕೆಯಾದ ಈ ಯುವಕನಿಗೆ ಮತ್ತದೇ ಮೀಸಲಾತಿ ಅಧ್ಯಕ್ಷತೆಯ ಹುದ್ದೆಗೇರುವ ಅವಕಾಶ ಕಲ್ಫಸಿಕೊಡುತ್ತದೆ.

ಭಾರತದ ಪ್ರಜಾಪ್ರಭುತ್ವ, ಸಂವಿಧಾನ ನೀಡಿರುವ ಅವಕಾಶದಿಂದ ಬೇಡ್ಕಣಿ ಗ್ರಾಮ ಪಂಚಾಯತ್‌ ಅಧ್ಯಕ್ಷತೆಗೇರುವ ಉಲ್ಲಾಸ, ಗ್ರಾ.ಪಂ. ಅಧ್ಯಕ್ಷತೆಯ ಜೊತೆಗೆ ಹೊಟ್ಟೆಪಾಡಿನ ತನ್ನ ಪೆಟ್ರೋಲ್‌ ಬಂಕ್‌ ಕೆಲಸವನ್ನೂ ಖುಷಿಯಿಂದ ನಿರ್ವಹಿಸುತ್ತಾನೆ.

ಅಲ್ಪಸಂಖ್ಯಾತ ಲಿಂಗಾಯತ ಪ್ರತಿನಿಧಿ, ಯುವಕರ ಪ್ರತಿನಿಧಿಯಾಗಿರುವ ಉಲ್ಲಾಸ್‌ ಗೌಡರಿಗೆ ಆತನ ಪೆಟ್ರೋಲ್‌ ಬಂಕ್‌ ಮಾಲಿಕ ಮಾಜಿ ಸೈನಿಕ ಕುಮಾರ ಗೌಡರ್‌ ತನ್ನ ವೃತ್ತಿ ಮಾಡುತ್ತಾ ಗ್ರಾ.ಪಂ. ಜವಾಬ್ಧಾರಿ ನಿರ್ವಹಿಸಲು ಸಹಕರಿಸುತಿದ್ದಾರೆ.

ಹೊಟ್ಟೆಪಾಡಿನ ನೌಕರಿ ಅಗತ್ಯ, ಅಧ್ಯಕ್ಷತೆ, ಜನಪ್ರತಿನಿಧಿತ್ವ ಶಾಶ್ವತವಲ್ಲ ಯಾವ ಹುದ್ದೆಯಲ್ಲಿದ್ದರೂ ಕಾಯಕವೇ ಕೈಲಾಸ, ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಬಸವಣ್ಣನ ಸಿದ್ಧಾಂತ ತನ್ನದೆನ್ನುವ ಉಲ್ಲಾಸ, ಉತ್ಸಾಹದಿಂದ ಯುವಕರಿಗೆ ಮಾದರಿಯಾಗಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *