ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ

ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ
ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22 ರ ವರೆಗೆ ಮೂರ್ನಾಲ್ಕು ತಂಡಗಳಲ್ಲಿ ಸಮೀಕ್ಷೆ ನಡೆಸಿವೆ. ಇಂದುಕೂಡಾ ಈ ಸಮೀಕ್ಷಾ ತಂಡದ ಮೂರ್ನಾಲ್ಕು ಗುಂಪುಗಳು ಪ್ರತ್ಯೇಕವಾಗಿ ತಾಲೂಕಿನ ನಾನಾ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದವು. ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಆಯಾ ಪಂಚಾಯತ್ ವ್ಯಾಪ್ತಿಯ ಗ್ರಾಮಲೆಕ್ಕಿಗರೊಂದಿಗೆ ತಾಲೂಕಿನ ಕೃಷಿಕ್ಷೇತ್ರಗಳಾದ ಭತ್ತದ ಗದ್ದೆ ಮತ್ತು ತೋಟಗಾರಿಕಾ ಕ್ಷೇತ್ರಗಳನ್ನು ಸಂದರ್ಶಿಸಿದರು.
ಕಾಳಪ್ಪ ನೇತೃತ್ವದ ತಂಡ ನೆಜ್ಜೂರು. ಕಾವಂಚೂರು, ಕಲ್ಯಾಣಪುರ, ಕಲ್ಲೂರು ಸೇರಿದಂತೆ ಕೆಲವೆಡೆ ಸಮೀಕ್ಷೆ ನಡೆಸಿತು. ಈ ಭಾಗದ ಬಹುತೇಕ ಕಡೆ ಭತ್ತದ ಬೆಳೆಗೆ ತೊಂದರೆಯಾಗಿದೆ. ಕೆಲವೆಡೆ ಎರಡು, ಮೂರನೇ ಬಾರಿ ಕೂಡಾ ನಾಟಿ ಮಾಡಿದ್ದಾರೆ.ತಾಲೂಕಿನ ದೊಡ್ಡ ಭತ್ತದ ಕ್ಷೇತ್ರ ನೆಜ್ಜೂರು ಬೈಲ್ ನಲ್ಲಿ ಹೊಳೆಯ ಪಕ್ಕದ ಭತ್ತದ ಗದ್ದೆ ಬೆಳೆಗಳೆಲ್ಲಾ ತೊಳೆದು ಹೋಗಿವೆ. ಹೊಸಳ್ಳಿಯಲ್ಲಿ ತೋಟದ ಬೆಳೆಗಳಾದ ಅಡಿಕೆ ಕೊಳೆಯಿಂದ ಉದುರಿದ್ದರೆ, ಕಾಳುಮೆಣಸು ಕೊಳೆಯಿಂದ ಸತ್ತಿರುವ ದೃಶ್ಯ ಗಮನ ಸೆಳೆಯಿತು. ಅಕ್ಕುಂಜಿ,ಗೋಳಗೋಡು,ಕಲ್ಯಾಣಪುರ ಸೇರಿದಂತೆ ಹಲವೆಡೆ ಭತ್ತದ ಗದ್ದೆಗಳು ಕೆಸರುತುಂಬಿಕೊಂಡು ವ್ಯವಸಾಯ, ಬೆಳೆಗೆ ಯೋಗ್ಯವಲ್ಲದಂತಾಗಿರುವವಾಸ್ತವ ಕಂಡುಬಂತು. ಮುಳುಗಿದ್ದ ಬೆಳೆ, ಭತ್ತದ ಕ್ಷೇತ್ರಗಳೆಲ್ಲಾ ಮೇಲ್ನೋಟಕ್ಕೆ ಹಸಿರುಸೂಸುವಂತೆ ಕಂಡರೂ ಬುಡದಲ್ಲಿ ಬಂತು ಕೂತಿರುವ ಕೆಸರು ಬೆಳೆಗಿಂತ ಕಳೆಗೆ ಅನುಕೂಲಮಾಡಿಕೊಡುವ ಸಾಧ್ಯತೆಯನ್ನು ಪ್ರತಿಬಿಂಬಿಸಿತು.
ಸಮೀಕ್ಷಾ ಕಾರ್ಯದಲ್ಲಿದ್ದ ಅಧಿಕಾರಿಗಳು ಎಲ್ಲಾ ರೈತರೂ ತಮ್ಮ ಬೆಳೆಹಾನಿ ಬಗ್ಗೆ ಆಯಾ ಗ್ರಾಮಪಂಚಾಯತ್ ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಶೀಘ್ರ ಅರ್ಜಿ ನೀಡಲು ವಿನಂತಿಸಿದರು. ತಾಲೂಕಿನ ಐದುಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಬಹುತೇಕ ಕಡೆ ಪ್ರತಿಶತ 75 ಹಾನಿಯಾಗಿದ್ದರೆ, ಕೆಲವೆಡೆ 50% ಮತ್ತೂ ಕೆಲವೆಡೆ 100% ಹಾನಿಯಾಗಿರುವ ವರದಿ ಇದೆ. ತಾಲೂಕಿನಲ್ಲಿ ಅಡಿಕೆ, ಬಾಳೆ, ಶುಂಠಿ ಮತ್ತು ಕಾಳುಮೆಣಸು ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳೂ ಹಾನಿಗೊಳಗಾಗಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *