ಗೋಸ್ವರ್ಗದ ರಸ್ತೆ ನರಕಸದೃಶ, ವಡ್ನಗದ್ದೆ ಸುಂದರರಸ್ತೆಗೆ ತ್ಯಾಜ್ಯದ ನಾಕ

ಜನಪ್ರತಿನಿಧಿಗಳೇ ಇದು ನಿಮಗೆ ಗೊತ್ತೆ?
ಗೋಸ್ವರ್ಗದ ರಸ್ತೆ ನರಕಸದೃಶ,
ವಡ್ನಗದ್ದೆ ಸುಂದರರಸ್ತೆಗೆ ತ್ಯಾಜ್ಯದ ನಾಕ
ಸಿದ್ಧಾಪುರ ತಾಲೂಕಿನ ಬೇಡ್ಕಣಿ ಪಂಚಾಯತ್ ವ್ಯಾಪ್ತಿಯ ಬಾನ್ಕುಳಿಮಠದ ಗೋಸ್ವರ್ಗದ ರಸ್ತೆ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಬೇಸರಿಸುವುದು ನಿತ್ಯದ ವರ್ತಮಾನವಾಗಿದೆ. ಇಲ್ಲಿಯ ಭಾನ್ಕುಳಿ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಮಠದ ತೊಂದರೆಯ ಸಂದರ್ಭದಲ್ಲಿ ಹೊಸನಗರದ ಶ್ರೀರಾಮಚಂದ್ರಪುರ ಮಠಕ್ಕೆ ವರ್ಗಾವಣೆಯಾದ ಇಲ್ಲಿಯ ಆಡಳಿತಾತ್ಮಕ ಜವಾಬ್ಧಾರಿಯ ನಂತರ ಭಾನ್ಕುಳಿಮಠದ ಹೆಸರು ಜನರಿಗೆ ತಿಳಿಯತೊಡಗಿತಾದರೂ ಗೋಸ್ವರ್ಗ ನಿರ್ಮಾಣದ ನಂತರ ಈ ಮಠಕ್ಕೆ ಬರುವ ಸಾರ್ವಜನಿಕರು, ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
ಪ್ರತಿನಿತ್ಯ, ಕಾರ್ಯಕ್ರಮಗಳ ದಿನಗಳಲ್ಲಿ ಕ್ರಮವಾಗಿ ನೂರಾರು, ಸಾವಿರಾರು ಜನರು ಭೇಟಿನೀಡುವ ಈ ಮಠಕ್ಕೆ ಹೋಗುವ ರಸ್ತೆ ವ್ಯವಸ್ಥಿತವಾಗಿರದಿರುವುದು ಇಲ್ಲಿಯ ಮುಖ್ಯ ಕೊರತೆಯಾಗಿದೆ. ಕುಮಟಾ ಮುಖ್ಯ ರಸ್ತೆಯಿಂದ ಒಂದೂವರೆ ಕಿ.ಮೀ ಅಂತರದ ಮಣ್ಣು ರಸ್ತೆಯನ್ನು ಸರ್ವಋತು ರಸ್ತೆ ಮಾಡಲು ಇಲ್ಲಿಯ ಮಠದ ಆಡಳಿತಮಂಡಳಿ ಪ್ರಯತ್ನಿಸಿದರೂ ಅಧಿಕಾರಿಗಳು, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಸೋಸ್ವರ್ಗದ ರಸ್ತೆಯನ್ನು ನರಕಸದೃಶವಾಗಿಸಿದೆ.
ಸಾವಿರಾರು ಪ್ರವಾಸಿಗರು, ನೂರಾರು ಪ್ರಮುಖರು ನಿತ್ಯ ಭೇಟಿ ನೀಡುವ ಈ ರಸ್ತೆ ಸುವ್ಯವಸ್ಥಿತವಾಗಿರದ ಹಿಂದೆ ಮಠಗಳ ನಡುವಿನ ಮೇಲಾಟ ಕಾರಣವಾಗಿರಬಹುದೆ ಎನ್ನುವ ಶಂಕೆ ಮೂಡಿದ್ದು 25 ವರ್ಷಗಳ ನಿರಂತರ ಜನಪ್ರತಿನಿಧಿತ್ವ, ಅಧಿಕಾರ ಅನುಭವಿಸಿದ ಸಂಸದ, ಶಾಸಕರು ಈ ಕೆಲಸ ಮಾಡದವರು ಸಾರ್ವಜನಿಕ ಒಳತಿನ ಇತರ ಕೆಲಸಮಾಡಬಲ್ಲರೆ? ಎಂದು ಜನರು ಪ್ರಶ್ನಿಸುವಂತಾಗಿದೆ.
ಮಠದ ಆಡಳಿತ ವ್ಯವಸ್ಥೆ ಸ್ಥಳಿಯ ಗ್ರಾಮ ಪಂಚಾಯತ್ ಜೊತೆಗೆ ಉತ್ತಮ ಸಂಪರ್ಕ, ಸಂಬಂಧ ಹೊಂದಿರದಿರುವುದು,ಈ ಮಠ ಸಾರ್ವಜನಿಕ ಮಠವಾಗದೆ ಏಕಜಾತಿಯ ಮಠವಾಗಿರುವುದು ಈ ರಸ್ತೆ ಅವ್ಯವಸ್ಥೆ,ಸ್ಥಳಿಯರು, ಸ್ಥಳಿಯ ಆಡಳಿತದ ಅಸಹಕಾರದ ಹಿಂದಿನ ಅಸಲೀ ಕಾರಣ ಎನ್ನುವ ದೂರುಗಳಿರುವ ಬಗ್ಗೆಯೂ ಸಾರ್ವಜನಿಕರ ಅಸಮಧಾನವಿದೆ ಎನ್ನಲಾಗಿದೆ.
ತ್ಯಾಜ್ಯದ ನರಕವಾಗಿರುವ ವಡ್ನಗದ್ದೆ ರಸ್ತೆ-
ನಗರದ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಡ್ನಗದ್ದೆಯ ಬಾಲಿಕೊಪ್ಪ-ಬಳ್ಳಟ್ಟೆ ರಸ್ತೆಯ ಒಂದೆರಡು ಕಡೆ ತ್ಯಾಜ್ಯ ಎಸೆದು ಕಸದ ದುರ್ಗಂಧ ಸೃಷ್ಟಿಸಿರುವ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಬಳಕೆಗೆ ನಿರ್ಬಂಧವಿರುವ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು, ವೈದ್ಯಕೀಯ ತ್ಯಾಜ್ಯ ಸೇರಿದ ಕಸದ ರಾಶಿ ಈ ರಸ್ತೆಯ ಇಕ್ಕೆಲಗಳನ್ನು ಕಸದ ಗುಡ್ಡೆಯಾಗಿಸಿವೆ. ಈ ಬಗ್ಗೆ ಸಾರ್ವಜನಿಕರು ಬೇಸರಿಸುತಿದ್ದು ಈ ಅವ್ಯವಸ್ಥೆಯ ಬಗ್ಗೆ ಹೇಳುವುದ್ಯಾರಿಗೆ ಎನ್ನುವ ಸಂದಿಗ್ಧ ಎದುರಾಗಿದೆ. ಮುಸ್ಸಂಜೆ, ರಾತ್ರಿ ವೇಳೆ ತ್ಯಾಜ್ಯ ಎಸೆಯುವವರು, ಮದ್ಯಪಾನ ಮಾಡುವ ಜನರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಥರವಾಗಿದ್ದರೆ, ಇಲ್ಲಿಯ ತ್ಯಾಜ್ಯ ಈ ರಸ್ತೆಯನ್ನು ನಗರದ ದುರ್ಗಂಧದ ರಸ್ತೆಯನ್ನಾಗಿಸಿದೆ. ಈ ಬಗ್ಗೆ ಸ್ಥಳಿಯ ಪ.ಪಂ. ಸದಸ್ಯರು ಮತ್ತು ಪ.ಪಂ. ಆಡಳಿತ ನಿಗಾ ವಹಿಸಬೇಕೆಂಬ ಸಾರ್ವಜನಿಕರ ಬೇಡಿಕೆಯೂ ವ್ಯಕ್ತವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *