ಗೋಸ್ವರ್ಗದ ರಸ್ತೆ ನರಕಸದೃಶ, ವಡ್ನಗದ್ದೆ ಸುಂದರರಸ್ತೆಗೆ ತ್ಯಾಜ್ಯದ ನಾಕ

ಜನಪ್ರತಿನಿಧಿಗಳೇ ಇದು ನಿಮಗೆ ಗೊತ್ತೆ?
ಗೋಸ್ವರ್ಗದ ರಸ್ತೆ ನರಕಸದೃಶ,
ವಡ್ನಗದ್ದೆ ಸುಂದರರಸ್ತೆಗೆ ತ್ಯಾಜ್ಯದ ನಾಕ
ಸಿದ್ಧಾಪುರ ತಾಲೂಕಿನ ಬೇಡ್ಕಣಿ ಪಂಚಾಯತ್ ವ್ಯಾಪ್ತಿಯ ಬಾನ್ಕುಳಿಮಠದ ಗೋಸ್ವರ್ಗದ ರಸ್ತೆ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಬೇಸರಿಸುವುದು ನಿತ್ಯದ ವರ್ತಮಾನವಾಗಿದೆ. ಇಲ್ಲಿಯ ಭಾನ್ಕುಳಿ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ಮಠದ ತೊಂದರೆಯ ಸಂದರ್ಭದಲ್ಲಿ ಹೊಸನಗರದ ಶ್ರೀರಾಮಚಂದ್ರಪುರ ಮಠಕ್ಕೆ ವರ್ಗಾವಣೆಯಾದ ಇಲ್ಲಿಯ ಆಡಳಿತಾತ್ಮಕ ಜವಾಬ್ಧಾರಿಯ ನಂತರ ಭಾನ್ಕುಳಿಮಠದ ಹೆಸರು ಜನರಿಗೆ ತಿಳಿಯತೊಡಗಿತಾದರೂ ಗೋಸ್ವರ್ಗ ನಿರ್ಮಾಣದ ನಂತರ ಈ ಮಠಕ್ಕೆ ಬರುವ ಸಾರ್ವಜನಿಕರು, ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
ಪ್ರತಿನಿತ್ಯ, ಕಾರ್ಯಕ್ರಮಗಳ ದಿನಗಳಲ್ಲಿ ಕ್ರಮವಾಗಿ ನೂರಾರು, ಸಾವಿರಾರು ಜನರು ಭೇಟಿನೀಡುವ ಈ ಮಠಕ್ಕೆ ಹೋಗುವ ರಸ್ತೆ ವ್ಯವಸ್ಥಿತವಾಗಿರದಿರುವುದು ಇಲ್ಲಿಯ ಮುಖ್ಯ ಕೊರತೆಯಾಗಿದೆ. ಕುಮಟಾ ಮುಖ್ಯ ರಸ್ತೆಯಿಂದ ಒಂದೂವರೆ ಕಿ.ಮೀ ಅಂತರದ ಮಣ್ಣು ರಸ್ತೆಯನ್ನು ಸರ್ವಋತು ರಸ್ತೆ ಮಾಡಲು ಇಲ್ಲಿಯ ಮಠದ ಆಡಳಿತಮಂಡಳಿ ಪ್ರಯತ್ನಿಸಿದರೂ ಅಧಿಕಾರಿಗಳು, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಸೋಸ್ವರ್ಗದ ರಸ್ತೆಯನ್ನು ನರಕಸದೃಶವಾಗಿಸಿದೆ.
ಸಾವಿರಾರು ಪ್ರವಾಸಿಗರು, ನೂರಾರು ಪ್ರಮುಖರು ನಿತ್ಯ ಭೇಟಿ ನೀಡುವ ಈ ರಸ್ತೆ ಸುವ್ಯವಸ್ಥಿತವಾಗಿರದ ಹಿಂದೆ ಮಠಗಳ ನಡುವಿನ ಮೇಲಾಟ ಕಾರಣವಾಗಿರಬಹುದೆ ಎನ್ನುವ ಶಂಕೆ ಮೂಡಿದ್ದು 25 ವರ್ಷಗಳ ನಿರಂತರ ಜನಪ್ರತಿನಿಧಿತ್ವ, ಅಧಿಕಾರ ಅನುಭವಿಸಿದ ಸಂಸದ, ಶಾಸಕರು ಈ ಕೆಲಸ ಮಾಡದವರು ಸಾರ್ವಜನಿಕ ಒಳತಿನ ಇತರ ಕೆಲಸಮಾಡಬಲ್ಲರೆ? ಎಂದು ಜನರು ಪ್ರಶ್ನಿಸುವಂತಾಗಿದೆ.
ಮಠದ ಆಡಳಿತ ವ್ಯವಸ್ಥೆ ಸ್ಥಳಿಯ ಗ್ರಾಮ ಪಂಚಾಯತ್ ಜೊತೆಗೆ ಉತ್ತಮ ಸಂಪರ್ಕ, ಸಂಬಂಧ ಹೊಂದಿರದಿರುವುದು,ಈ ಮಠ ಸಾರ್ವಜನಿಕ ಮಠವಾಗದೆ ಏಕಜಾತಿಯ ಮಠವಾಗಿರುವುದು ಈ ರಸ್ತೆ ಅವ್ಯವಸ್ಥೆ,ಸ್ಥಳಿಯರು, ಸ್ಥಳಿಯ ಆಡಳಿತದ ಅಸಹಕಾರದ ಹಿಂದಿನ ಅಸಲೀ ಕಾರಣ ಎನ್ನುವ ದೂರುಗಳಿರುವ ಬಗ್ಗೆಯೂ ಸಾರ್ವಜನಿಕರ ಅಸಮಧಾನವಿದೆ ಎನ್ನಲಾಗಿದೆ.
ತ್ಯಾಜ್ಯದ ನರಕವಾಗಿರುವ ವಡ್ನಗದ್ದೆ ರಸ್ತೆ-
ನಗರದ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಡ್ನಗದ್ದೆಯ ಬಾಲಿಕೊಪ್ಪ-ಬಳ್ಳಟ್ಟೆ ರಸ್ತೆಯ ಒಂದೆರಡು ಕಡೆ ತ್ಯಾಜ್ಯ ಎಸೆದು ಕಸದ ದುರ್ಗಂಧ ಸೃಷ್ಟಿಸಿರುವ ಅವ್ಯವಸ್ಥೆ ಬೆಳಕಿಗೆ ಬಂದಿದೆ. ಬಳಕೆಗೆ ನಿರ್ಬಂಧವಿರುವ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು, ವೈದ್ಯಕೀಯ ತ್ಯಾಜ್ಯ ಸೇರಿದ ಕಸದ ರಾಶಿ ಈ ರಸ್ತೆಯ ಇಕ್ಕೆಲಗಳನ್ನು ಕಸದ ಗುಡ್ಡೆಯಾಗಿಸಿವೆ. ಈ ಬಗ್ಗೆ ಸಾರ್ವಜನಿಕರು ಬೇಸರಿಸುತಿದ್ದು ಈ ಅವ್ಯವಸ್ಥೆಯ ಬಗ್ಗೆ ಹೇಳುವುದ್ಯಾರಿಗೆ ಎನ್ನುವ ಸಂದಿಗ್ಧ ಎದುರಾಗಿದೆ. ಮುಸ್ಸಂಜೆ, ರಾತ್ರಿ ವೇಳೆ ತ್ಯಾಜ್ಯ ಎಸೆಯುವವರು, ಮದ್ಯಪಾನ ಮಾಡುವ ಜನರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಥರವಾಗಿದ್ದರೆ, ಇಲ್ಲಿಯ ತ್ಯಾಜ್ಯ ಈ ರಸ್ತೆಯನ್ನು ನಗರದ ದುರ್ಗಂಧದ ರಸ್ತೆಯನ್ನಾಗಿಸಿದೆ. ಈ ಬಗ್ಗೆ ಸ್ಥಳಿಯ ಪ.ಪಂ. ಸದಸ್ಯರು ಮತ್ತು ಪ.ಪಂ. ಆಡಳಿತ ನಿಗಾ ವಹಿಸಬೇಕೆಂಬ ಸಾರ್ವಜನಿಕರ ಬೇಡಿಕೆಯೂ ವ್ಯಕ್ತವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *