7 ವರ್ಷಗಳ ನಂತರ ನಡೆದ ಕೋಲಶಿರ್ಸಿ ಹೊಳೆಹಬ್ಬ

ಸಿದ್ಧಾಪುರ ಸೇರಿದಂತೆ ಮಲೆನಾಡಿನಲ್ಲಿ ಹೊಳೆಹಬ್ಬ ಎಂಬ ಆಚರಣೆ ಒಂದಿದೆ.
ಕೆಲವು ಭಾಗಗಳಲ್ಲಿ ಪ್ರತಿವರ್ಷ ಹೊಳೆಹಬ್ಬ ಆಚರಿಸುವುದು ರೂಢಿ. ಆದರೆ ಸಿದ್ಧಾಪುರ ತಾಲೂಕಿನ ಕೋಲಶಿರ್ಸಿಯಲ್ಲಿ ಗ್ರಾಮದ ಮಾರಿಕಾಂಬಾ ಜಾತ್ರೆಯ ಹಿಂದಿನ ವರ್ಷ ಹೊಳೆಹಬ್ಬ ಆಚರಿಸುವುದು ಸಂಪ್ರದಾಯ.
ಕಳೆದ ಏಳುವರ್ಷಗಳ ಹಿಂದೆ ಹೊಳೆಹಬ್ಬ ನಡೆದು 6 ವರ್ಷಗಳ ಕೆಳಗೆ ಕೋಲಶಿರ್ಸಿಯಲ್ಲಿ ಮಾರಿಕಾಂಬಾ ಜಾತ್ರೆ ನಡೆದಿತ್ತು.
ಆ ಮಾರಿಕಾಂಬಾ ಜಾತ್ರೆಯ ಹಿಂದಿನ ವರ್ಷ 9 ವರ್ಷಗಳ ನಂತರ ಹೊಳೆಹಬ್ಬ ಆಚರಿಸಲಾಗಿತ್ತು. ಇಂಥ ಹಿನ್ನೆಲೆಯ ಈ ದಶಕದ ಮೊದಲ ಹೊಳೆಹಬ್ಬ ಇಂದು ಸಂಪನ್ನವಾಯಿತು.
ಊರ ಹೊರಗಿನ ಕಬ್ಬಿನಹೊಳೆ ಸೇತುವೆ ಬಳಿ ಬಂದ ಗ್ರಾಮಸ್ಥರು ಮತ್ತವರ ಹಿತೈಶಿಗಳು ಶಾಸ್ತ್ರೋಕ್ತವಾಗಿ ಹೊಳೆಯಲ್ಲಿ ಬಡಿಗರ ಮೂಲಕ ಮಣ್ಣಿನ ಮೂರ್ತಿ ಮಾಡಿಸಿ ಪೂಜೆ ನೆರವೇರಿಸಿದರು. ಹೊಳೆಅಮ್ಮನನ್ನು ಪೂಜಿಸಲು ಶೃಂಗರಿಸಿದ್ದ ಕಟ್ಟೆಯಲ್ಲಿ ರೂಢಿ-ಸಂಪ್ರದಾಯಗಳಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಲಾಯಿತು.
ಸಹಸ್ರಾರು ಜನರು ಸೇರಿದ್ದ ಈ ಹೊಳೆಹಬ್ಬದ ನಂತರ ಮುಂದಿನ ಮಾರಿಕಾಂಬಾ ಜಾತ್ರೆಗೆ ತಯಾರಿ, ಸಿದ್ಧತೆ ಪ್ರಾರಂಭವಾಗುತ್ತದೆ. ಸಾಮೂಹಿಕ ಅನ್ನಸಂತರ್ಪಣೆಯ ನಂತರ ಮುಕ್ತಾಯವಾಗುವ ಇಂದಿನ ಕಾರ್ಯಕ್ರಮ ಮತ್ತೆ ಕನಿಷ್ಟ 5 ವರ್ಷಗಳಿಗೊಮ್ಮೆ ಅಥವಾ 7,9 ವರ್ಷಗಳ ನಡುವೆ ಮುಂದುವರಿಯುವುದೂ ಸಾಮಾನ್ಯ. ಕೋಲಶಿರ್ಸಿಯ ಗ್ರಾಮಸ್ಥರು, ಪರ ಊರುಗಳಲ್ಲಿರುವ ಉದ್ಯೋಗಿಗಳು, ಹೆಣ್ಣುಮಕ್ಕಳು ಎಲ್ಲಾ ಸಂಬಂಧಿಗಳು ಬಂದು ಸಂಬ್ರಮಿಸುವ ಹೊಳೆಹಬ್ಬ ಇಂದು ವಿದ್ಯುಕ್ತವಾಗಿ ಮುಕ್ತಾಯವಾಗಿದೆ.
ಈ ಹೊಳೆಹಬ್ಬದ ಅಂಗವಾಗಿ ಕಲ್ಲೂರಿನ ಡೊಳ್ಳಿನ ತಂಡ ಹಾಗೂ ಕೋಲಶಿರ್ಸಿಯ ಆಸಕ್ತರು ಡೊಳ್ಳುಕುಣಿತ ಮಾಡಿ ಜನರನ್ನು ರಂಜಿಸಿದರು.

ಪ್ರಭಾಕರಭಟ್ ಹೇಳಿಕೆಗೆಮಹತ್ವವಿಲ್ಲ,
ಪೊಲೀಸ್ ವೈಫಲ್ಯ ಆಗಿಲ್ಲ
ಮಂಗಳೂರಿನ ಘಟನೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲ ಹೀಗೆ ಪೊಲೀಸರ ಮೇಲೆ ಗೂಬೆ ಕೂಡ್ರಿಸುವವರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವ ಅಪಾಯವಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಕೊರ್ಲಕೈ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದ ಅವರು ಗೊಂದಲ ಹುಟ್ಟಿಸುವ ಉದ್ದೇಶದ ಕೆಲವರು ಇಂಥ ಕೃತ್ಯಗಳಲ್ಲಿ ತೊಡಗಿದ್ದಾರೆ ಅವರ ಹುಟ್ಟಡಗಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *