ಟೇಲರ್ ಗಳಿಗೂ ಪಿಂಚಣಿ ನೀಡಲು ಆಗ್ರಹ

ಸಿದ್ಧಾಪುರ ಇಂದು-
ಸಿದ್ದಾಪುರ: ಕೊರೋನಾ ಸಂದರ್ಭದಲ್ಲಿ ಲಾಕ್‍ಡೌನ್ ನಿಂದಾಗಿ ಅನೇಕ ಕಾರ್ಮಿಕರು ಕೆಲಸವಿಲ್ಲದೆಜೀವನ ನಿರ್ವಹಣೆ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದ್ದ ಸಮಯದಲ್ಲಿ ಟೈಲರ್‍ಗಳು ಸಹ ತೊಂದರೆಯಲ್ಲಿ ಸಿಲುಕಿದ್ದರು. ಅಂತೆಯೇಇತ್ತೀಚಿಗೆ ಟೈಲರ್‍ಗಳಿಗೆ ಕಾರ್ಮಿಕಇಲಾಖೆಯಿಂದ ದಿನ ನಿತ್ಯದಆಹಾರ ಸಾಮಗ್ರಿಗಳ ಕಿಟ್ಟ್ ವಿತರಿಸಲಾಯಿತು.
ಈ ಅನುಕೂಲ ಪಡೆದ ಟೈಲರ್ ಗಳು ‘ನಮ್ಮನ್ನು ಗುರುತಿಸಿ ಕಿಟ್ಟ್ ವಿತರಸಿ ನಮ್ಮ ಕಷ್ಟಕ್ಕೆ ಸ್ಪಂದಿಸಿದ ಇಲಾಖೆಗೆ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಎಂದು ತಾಲೂಕಾಟೈಲರ್ ಅಸೋಸಿಯೆಷನ್ ಅಧ್ಯಕ್ಷಅಣ್ಣಪ್ಪ ನಾಯ್ಕ ಹಣಜಿಬೈಲ್, ಪ್ರಧಾನ ಕಾರ್ಯದರ್ಶಿ ಎಚ್.ಟಿ.ವಾಸುಕಡಕೇರಿಅಭಿನಂದನೆ ಸಲ್ಲಿಸಿದರು.
ಕೊರೋನಾ ಭೀತಿಯಲ್ಲಿಜನರು ಬಟ್ಟೆ ಹೊಲಿಯಲಿಕ್ಕೆಕೊಡುವುದನ್ನುಕಡಿಮೆ ಮಾಡಿದ್ದಾರೆ. ಮದುವೆ, ಹಬ್ಬ ಮುಂತಾದ ಕಾರ್ಯಕ್ರಮಗಳು ಕಡಿಮೆಯಾಗಿರುವುದರಿಂದ ಹೊಲಿಗೆಯನ್ನೇ ನಂಬಿಕೊಂಡಿರುವನಮ್ಮ ಮುಂದಿನ ಜೀವನಕಷ್ಟವಾಗಿದೆ. ನಮ್ಮನ್ನುಕಾರ್ಮಿಕರೆಂದು ಪರಿಗಣಿಸಿ ಪಿಂಚಣಿ ನೀಡಿನಮ್ಮ ಮುಂದಿನ ಜೀವನ ನಿರ್ವಹಣೆಗೆ ಅನುಕೂಲಮಾಡಿಕೊಡಬೇಕೆಂದು ಈ ಮೂಲಕ ಅವರು ಮನವಿ ಮಾಡಿದ್ದಾರೆ.

ಕಲಾವಿದ ಭೀಮರಾಜ್ ಹೆಗಡೆ ನಿಧನ
ಸಿದ್ದಾಪುರ-: ಕಾಡು ಚಲನಚಿತ್ರ ಕಲಾವಿದ, ಯಕ್ಷಗಾನ ನಟ, ನಾಟಕ ಕಲಾವಿದ, ಸಾಮಾಜಿಕ ಕಾರ್ಯಕರ್ತ, ಹಣಜೀಬೈಲದ ಭೀಮರಾಜ್ ಹೆಗಡೆ ಅವರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಅವರು ಅಮೃತೇಶ್ವರಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿ ಯಕ್ಷನಟರೂ ಸಹ ಆಗಿದ್ದರು. ನಾಟಕ ಮಂಡಳಿಗಳಲ್ಲಿ ಕಲಾವಿದರಾಗಿ ಸೇವೆ ನೀಡಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರೂ ಸಹ ಆಗಿದ್ದರು.
ಮಹಾಗಣಪತಿ ವಿದ್ಯಾವರ್ಧಕ ಸಂಘ ಹಾಳದಕಟ್ಟಾದ ಅಧ್ಯಕ್ಷರಾಗಿ ಸಂಸ್ಕೃತ ವಿದ್ಯಾ ಪ್ರಸಾರಕ್ಕಾಗಿ ಶ್ರಮಿಸುತ್ತಿದ್ದರು. ಶಿರಳಗಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ 2 ಬಾರಿ ಕೆಲಸ ನಿರ್ವಹಿಸಿದ ಹಿರಿಯ ಸಾಮಾಜಿಕ ಕಾರ್ಯಕರ್ತ. ಸ್ವಾತಂತ್ರ್ಯ ಯೋಧ ಹಣಜೀಬೈಲು ಸಣ್ಣಪ್ಪ ಹೆಗಡೆ ಅವರ ಪುತ್ರರಾಗಿದ್ದರು.
ಶಿರಸಿಯ ಕೆ.ಪಿ.ಟಿ.ಸಿ.ಎಲ್. ನೌಕರರ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಅಕ್ಷರಕುಮಾರ್ ಹೆಗಡೆ ಅವರನ್ನು ಒಳಗೊಂಡು 2 ಜನ ಗಂಡು, 2 ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಶೋಕ : ಭೀಮರಾಜ್ ಹೆಗಡೆ ಹಣಜೀಬೈಲ್ ಅವರ ನಿಧನ ಪ್ರಯುಕ್ತ ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಡಾ|| ಕೆ. ಶ್ರೀಧರ ವೈದ್ಯ, ಯಕ್ಷಭಾಗವತ ಕೇಶವ ಹೆಗಡೆ ಕೊಳಗಿ, ಜಿ.ಜಿ. ಹೆಗಡೆ ಬಾಳಗೋಡ ಮುಂತಾದವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಶಾಂತಿ ಕೋರಿದರು.

ನುಡಿನಮನ-

ಇತ್ತೀಚೆಗೆ ನಿಧನರಾದ ಉಪನ್ಯಾಸಕ ಹಸ್ವಂತೆ ಎಲ್.ಎಂ. ನಾಯ್ಕರಿಗೆ ನುಡಿನಮನ ಕಾರ್ಯಕ್ರಮ ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ನಡೆಯಿತು.
ಎಲ್.ಎಂ.ನಾಯ್ಕ ಮಹಾತ್ವಾಕಾಂಕ್ಷಿ,ಜನಪರ ವ್ಯಕ್ತಿಯಾಗಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು ಎಂದು ಈ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ವೀರಭದ್ರನಾಯ್ಕ ಸ್ಮರಿಸಿದರು.
ನಾಯ್ಕರಿಗೆ ನುಡಿನಮನ ಸಲ್ಲಿಸಿದ ಕನ್ನೇಶ್ ಕೋಲಶಿರ್ಸಿ ಮಾತನಾಡಿ ದಶಕಗಳ ಕಾಲ ಅರೆಕಾಲಿಕ, ಹಂಗಾಮಿ ನೌಕರರಾಗಿ ಆತ್ಮವಿಶ್ವಾಸದಿಂದಿರುವುದು ಕಷ್ಟ. ಆದರೆ ಎಲ್.ಎಂ. ನಾಯ್ಕ ಎಲ್ಲಾ ಅನಿಶ್ಚಿತತೆ, ಅಭದ್ರತೆಗಳ ನಡುವೆ ಕೂಡಾ ಸ್ವಾಭಿಮಾನಿಯಾಗಿ ಮಾದರಿಯಾಗಿದ್ದರು ಎಂದರು.
ಸಂತಾಪ ಸಭೆಯ ಸಂಘಟಕರೂ ನಾಯ್ಕರ ಆತ್ಮೀಯರೂ ಆಗಿದ್ದ ರತ್ನಾಕರ ನಾಯ್ಕ, ಎನ್.ಟಿ.ನಾಯ್ಕ, ದಿವಾಕರ ಮಂಡಗಳೆ ಮತ್ತು ದಿವಾಕರ ನಾಯ್ಕ ಹಸ್ವಂತೆ ಅವರ ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದರು.
ಸಹಪಾಠಿಗಳಾಗಿದ್ದ ಜಿ.ಕೆ.ನಾಯ್ಕ ತಮ್ಮ ಬಾಂಧವ್ಯದ ಬಗ್ಗೆ ಹೇಳಿದರು, ರುಜಾರಿಯೋ,ಕಮಲಾಕರ ಭಂಡಾರಿ ಸೇರಿದಂತೆ ಕೆಲವರು ಎಲ್.ಎಂ.ನಾಯ್ಕರಿಗೆ ನುಡಿನಮನ ಸಲ್ಲಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ : 24-06-2020ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿ 32899 36889 33899
2 ತಟ್ಟಿಬೆಟ್ಟೆ 22699 29899 26099
3 ಕೆಂಪಗೋಟು 19899 21689 21089
4 ಬಿಳಿಗೋಟು 17899 25308 23789
5 ಚಾಲಿ 27369 31422 30899
7 ಕೋಕಾ 13399 20199 18299
8 ಕಾಳುಮೆಣಸು 29799 29989 29899

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *