corona scam of karnataka govt- ರಾಜ್ಯ ಸರ್ಕಾರದ ದೊಡ್ಡ ಹಗರಣದ 2 ನೇ ಕಂತಿನ ವರದಿಯಿದು, ಶಾಸಕ ನಿರಾಣಿ ಹೇಳಿಕೆ ಮತ್ತು ರಾಜ್ಯದ 2 ಸಾವಿರ ಕೋಟಿ ಹಗರಣ!

ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ 2 ಸಾವಿರ ಕೋಟಿ ಕರೋನಾ ಹಗರಣದ ಬಗ್ಗೆ ಆರೋಪಿಸಿದ್ದಾರೆ. ಇದೇ ವಿಚಾರದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮೀತಿ ತನಿಖೆಗೆ ತಡೆಯಾಜ್ಞೆ ನೀಡಿದ ಪ್ರಾಮಾಣಿಕತೆ ಬಗ್ಗೆ ಕರ್ನಾಟಕ ರಾಷ್ಟ್ರಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸರ್ಕಾರಕ್ಕೆ ಸವಾಲು ಹಾಕಿದ್ದರು.
ಈ ನಡುವೆ ಶಿರಸಿಯ ಟಿ.ಎಸ್.ಎಸ್. ನಲ್ಲಿ ಖರೀದಿಮಾಡಿರುವ ಕಿಟ್ ಗಳಿಗೆ ಕಾರ್ಮಿಕ ಇಲಾಖೆ ನೂರುಪಟ್ಟು (ಮುದ್ರಿತ 1500 ವಾಸ್ತವ ಬೆಲೆಗಿಂತ)ಹೆಚ್ಚು ಬೆಲೆ ದಾಖಲಿಸಿದೆ ಎಂದು ಮಾಹಿತಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದರು. ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಖರೀದಿಸಿರುವ ಕರೋನಾ ಉಪಕರಣಗಳ ಮೇಲೆ ನೂರಾರು ಪಟ್ಟು ಹೆಚ್ಚುವರಿ ಬಿಲ್ ಮಾಡಿರುವ ಬಗ್ಗೆ ದಾಖಲೆ ಸಿಕ್ಕಿದೆ. ವಿಚಿತ್ರವೆಂದರೆ……
ಶಿರಸಿ ಟಿ.ಎಸ್.ಎಸ್. ನಿಂದ ಎಷ್ಟು ಆಹಾರದ ಕಿಟ್ ಗಳನ್ನು ಕಾರ್ಮಿಕ ಇಲಾಖೆ ಖರೀದಿಸಿದೆ, ಅದಕ್ಕೆ ಸರ್ಕಾರದಿಂದ ಪಾವತಿಸಿರುವ ಕಿಟ್ ಗಳ ಮೊತ್ತವೆಷ್ಟು? ಎಂದರೆ ಕಾರ್ಮಿಕ ಇಲಾಖೆ ‘ಮಾಹಿತಿಇಲ್ಲ-ದಾಖಲೆ ಇಲ್ಲ ಎಂದು ಉತ್ತರ ನೀಡಿದೆ.

ರಾಜ್ಯ ಸರ್ಕಾರ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಯಿಂದ ಖರೀದಿಸಿದ ವಸ್ತುಗಳ ವಾಸ್ತವದ ಬೆಲೆ ಎರಡು ನೂರರಿಂದ ಮೂರುನೂರು ಕೋಟಿ ರೂಪಾಯಿ ಆದರೆ ಸರ್ಕಾರದ ದಾಖಲೆಯಲ್ಲಿ ಈ ಖರೀದಿ ಮೊತ್ತ 2-3 ಸಾವಿರ ಕೋಟಿ!
ಅಲ್ಲಿಗೆ ರಾಜ್ಯ ಸರ್ಕಾರದ ಹಗಲು ದರೋಡೆ ಹಗರಣ ನಡೆದಿರುವುದಂತೂ ಸತ್ಯ. ಅದರಲ್ಲಿ ಹಳೆಯ ಗಣಿ ಸ್ನೇಹಿತರಾದ ಬಳ್ಳಾರಿ,ಕಾರವಾರ (ಉ.ಕ.)ದ ಹಳೆ ದೋಸ್ತಿಗಳ ಕೈವಾಡ ಪಕ್ಕಾ ಎನ್ನುವುದು ಸಾಬೀತಾಗಿದೆ.
ಈ ಹಗರಣದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತ ಅವರ ರಾತ್ರಿ ದೋಸ್ತಿಯ ಕಾಂಗ್ರೆಸ್ ಸಂಸ್ಥೆ ಟಿ.ಎಸ್.ಎಸ್. ಪಾತ್ರ ಪಕ್ಕಾ ಆಗಿದೆ. ಈ ಹಗರಣದ ಸಂಪೂರ್ಣ ವಿವರ ಮುರಗೇಶ್ ನಿರಾಣಿಯವರ ಬಳಿ ಇರುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಈ ಹಗರಣದ ಮಾಹಿತಿ ನನ್ನ ಬಳಿ ಇದೆ ಎನ್ನುವುದು ನಿರಾಧಾರ ಎಂದು ನಿರಾಣಿ ಹೇಳಿದ್ದಾರೆ.

ಇಷ್ಟೆಲ್ಲಾ ಹಸಿಬಿಸಿ ಚರ್ಚೆಗಳ ನಡುವೆ ಶಾಸಕ ಮುರಗೇಶ್ ನಿರಾಣಿ ಕಾರವಾರದ ಶಾಸಕಿ ರೂಪಾಲಿ ನಾಯ್ಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಏನು ಚರ್ಚಿಸಿದರು!? ಎನ್ನುವುದು ಅನುಮಾನಸ್ಫದ ಸಂಗತಿಯಾಗಿದೆ.
ಒಟ್ಟಾರೆ ಕರೋನಾ ಹೆಸರಲ್ಲಿ ಕಾರವಾರ, ಯಲ್ಲಾಪುರ ಶಿರಸಿಗಳಿಂದ ಪ್ರಾರಂಭವಾದ ಲಿಂಕ್ ಒಂದು ಬೆಂಗಳೂರಿನವರೆಗೆ ಸುತ್ತುಹೊಡೆಯುತ್ತಿದೆ. ಸಿದ್ಧರಾಮಯ್ಯ ಜೈಲಿಗೆ ಕಳಿಸಿದ ಗಣಿಧಣಿಗಳ ಆಪ್ತರು ಮುಂದೆ ಜೈಲುಪಾಲಾಗುವರೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ. ಬಿ.ಜೆ.ಪಿ.ಯ ಮಾಸ್ಟರ್ ಮೈಂಡ್ ಇರುವ ಉತ್ತರಕನ್ನಡದಲ್ಲಿ ಕಾಂಗ್ರೆಸ್ ಸದಸ್ಯಬಾಹುಳ್ಯದ ಸಂಸ್ಥೆಯೊಂದನ್ನೂ
ಬಳಸಿಕೊಂಡಿರುವುದು ದೇಶಪ್ರೇಮಿಗಳ ನಿರಂತರ ನಾಟಕದ ಪ್ರಮುಖ ಅಂಕ ಎನ್ನಲಾಗುತ್ತಿದೆ.
ಈ ಬಗೆಗಿನಒಂದು ಮಾಹಿತಿಗಾಗಿ ಈ ಲಿಂಕ್ ನೋಡಿ-https://www.youtube.com/watch?v=O6U7VI88LiQ @#samajamukhi ಸಮಾಜಮುಖಿ ಕನ್ನೇಶ್ youtube channel#

(one more news-) ಕುಮಟಾದಲ್ಲಿ ಅರ್ಧದಿನ ಲಾಕ್ಡೌನ್ ಗೆ ಸರ್ವಪಕ್ಷ ಮುಖಂಡರ ತೀರ್ಮಾನ
ಉತ್ತರ ಕಕನ್ನಡ ಜಿಲ್ಲೆಯಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಜಿಲ್ಲೆಯಲ್ಲಿ ದೃಢವಾಗುತ್ತಿರುವ 27 ಪ್ರಕರಣಗಳಲ್ಲಿ ಯಥಾ ಪ್ರಕಾರ ಭಟ್ಕಳಕ್ಕೆ ಸಿಂಹಪಾಲು ಉಳಿದಂತೆ ಕುಮಟಾ, ಶಿರಸಿ, ಹಳಿಯಾಳ ಸೇರಿದ ಪ್ರಕರಣಗಳಿವೆ. ಇದೇವಾರದಲ್ಲಿ ಒಂದು ಕಾಲು ಶತಕ ಕರೋನಾ ಸೋಂಕಿತರ ಸಂಖ್ಯೆ ದಾಖಲಿಸಿರುವ ಉತ್ತರಕನ್ನಡ ಜಿಲ್ಲೆ ಈ ವರೆಗೆ ಮೂರು ಸಾವುಗಳಿಗೂ ಸಾಕ್ಷಿಯಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *