this,s notonly for nk are siddapur- ಮನ್ಮನೆ ಗ್ರಾಮಸಮೀತಿ ನಿರ್ಣಯದ ಹಿನ್ನೆಲೆ?- ಸಮಯ ಬದಲಾವಣೆ ಗೊಂದಲ, ನಾಳೆ ವಿದ್ಯುತ್ ಕಡಿತ, ಜಿಲ್ಲೆಯಾದ್ಯಂತ ಏಕರೂಪದ ನೀತಿ-ನಿಯಮ

ರಾಜ್ಯದಾದ್ಯಂತ ಲಾಕ್ ಡೌನ್ ತೆರವು ಮಾಡಲಾಗಿದ್ದು ಸರ್ಕಾರ ಲಾಕ್ ಡೌನ್ ನೀತಿಯಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಜಿಲ್ಲಾಡಳಿತದ ಗಮನಕ್ಕೆ ತಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತ ಬಂದ್, ಲಾಕ್ ಡೌನ್ ಮಾಡಲಾಗಿತ್ತು. ಆದರೆ ಈಗ ಜಿಲ್ಲಾವ್ಯಾಪ್ತಿಯಲ್ಲಿ ಏಕರೂಪದ ನೀತಿ-ನಿಯಮ ಜಾರಿಗೆ ಸರ್ಕಾರ ಆದೇಶಿಸಿದೆ ಎನ್ನಲಾಗಿದೆ. ಈ ಹೊಸ ನಿಯಮದ ಹಿನ್ನೆಲೆಯಲ್ಲಿ ಸಿದ್ಧಾಪುರ, ಉತ್ತರಕನ್ನಡ ಜಿಲ್ಲೆ, ಸೇರಿದಂತೆ ರಾಜ್ಯದಾದ್ಯಂತ ಜಿಲ್ಲಾ ವ್ಯಾಪ್ತಿಯಲ್ಲಿ ಏಕರೂಪದ ನೀತಿ-ರೀತಿ,ನಿಯಮ ಜಾರಿಮಾಡಲಾಗುತ್ತಿದೆ.
ಈ ಕಾರಣದಿಂದ ಇಂದು ಸಿದ್ಧಾಪುರ ಸೇರಿದಂತೆ ಬಹುತೇಕ ಕಡೆ ಇದ್ದ ಅರ್ಧದಿನ ಬಂದ್, ಸ್ವಯಂ ಪ್ರೇರಿತ ಲಾಕ್ ಡೌನ್ ತೆರವು ಮಾಡಲಾಗಿದೆ.

ಸಿದ್ಧಾಪುರದಲ್ಲಿ ವಾರದ ಸಂತೆಯ ದಿವಸವಾದ ಇಂದು ದಿನಕ್ಕಿಂತ ಹೆಚ್ಚು ಜನಸಂದಣಿ ಇತ್ತು. ಮಧ್ಯಾಹ್ನ 2 ಗಂಟೆಯ ಮೊದಲು ಖರೀದಿ ಮುಗಿಸಬೇಕೆಂದು ಧಾವಂತಕ್ಕೆ ಬಿದ್ದ ಜನ ಸಾಮಾಜಿಕ ಅಂತರ ಮರೆತು ಸಂತೆಯ ಸಾಮಾನು ಖರೀದಿ ಮಾಡಿದರು. ಆದರೆ ಮಧ್ಯಾಹ್ನ ಒಂದು ಗಂಟೆಯ ನಂತರ ನಗರದಲ್ಲಿ ಸ್ವಯಂ ಪ್ರೇರಿತ ಬಂದ್ ತೆರವುಮಾಡಿ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ವ್ಯಾಪಾರ ವಹಿವಾಟು ಮಾಡಬಹುದೆನ್ನುವ ಘೋಶಣೆ ಮಾಡಲಾಯಿತು. 2 ಗಂಟೆಯ ನಂತರ ಸ್ವಯಂ ಪ್ರೇರಿತ ಬಂದ್ ಎನ್ನುವ ಮನೋಸ್ಥಿತಿಯಲ್ಲಿದ್ದ ಜನರು ಈ ಘೋಷಣೆ ನಡುವೆ ಮನೆಯತ್ತ ಪಾದ ಬೆಳೆಸಿದರು.

ವ್ಯಾಪಾರಿಗಳು ಈ ಸ್ವಯಂಪ್ರೇರಿತ ಬಂದ್ ತೆರವಿನಿಂದ ವ್ಯಾಪಾರ ಮಾಡುವ ಮನಸ್ಥಿತಿಯಲ್ಲಿದ್ದರೂ ಜನರಿಲ್ಲದ ಸಂತೆಯಿಂದಾಗಿ ವ್ಯಾಪಾರ ಮಾಡಲಾಗಲಿಲ್ಲ. ಜಿಲ್ಲಾಡಳಿತ ದಿಢೀರನೇ ಈ ಪ್ರಕಟಣೆ ಮಾಡಿ ಘೋಶಿಸಿದ್ದರಿಂದ ಜನರಿಗೆ ಗೊಂದಲ ಉಂಟಾಯಿತು ಎನ್ನುವ ಅಭಿಪ್ರಾಯ ಕೇಳಿ ಬಂತು. ಜಿಲ್ಲೆಯ ಇತರ ತಾಲೂಕುಗಳಲ್ಲೂ ಇಂಥದ್ದೇ ಗೊಂದಲ ಆಗಿರುವ ಸುದ್ದಿಯಿದೆ.
ನಾಳೆ ವಿದ್ಯುತ್ ವ್ಯತ್ಯಯ-
ಕಳೆದ10 ದಿವಸಗಳಿಂದ ಅರ್ಧ ದಿನ ಬಂದ್ ಮಾಡಿದ್ದ ಸಿದ್ಧಾಪುರದ ಜನತೆಗೆ ಜುಲೈ 23 ರ ಗುರುವಾರ ಮತ್ತೆ ಸ್ವಯಂ ಪ್ರೇರಿತ ಬಂದ್ ಅನುಭವ ನೀಡಲಿದೆ. ಸ್ಥಳಿಯ ಹೆಸ್ಕಾಂ ಉಪವಿಭಾಗೀಯ ಕಛೇರಿ ನಾಳೆಯ ಗುರುವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ರ ವರೆಗೆ ವಿರ್ವಹಣೆ, ದುರಸ್ತಿ ಹಿನ್ನೆಲೆಯಲ್ಲಿ ವಿದ್ಯುತ್ ನಿಲುಗಡೆ ಮಾಡುತ್ತಿದೆ. ಸರ್ಕಾರಿ ರಜಾ ದಿನಗಳಲ್ಲಿ, ವಿದ್ಯುತ್ ವ್ಯತ್ಯಯದ
ದಿನ ಸಿದ್ಧಾಪುರ ಸ್ವಯಂ ಪ್ರೇರಿತ ಬಂದ್ ಸ್ಥಿತಿಯಲ್ಲಿರುವುದು ಇಲ್ಲಿಯ ವಾಸ್ತವ.

ಏಕರೂಪ ನೀತಿ-ನಿಯಮ- ಕರೋನಾ ಕಾರಣದಿಂದ ತಾಲೂಕಿಗೊಂದು ಜಿಲ್ಲೆಗೊಂದು ನಿಯಮಗಳಿಂದಾಗಿ ರಾಜ್ಯದಲ್ಲಿ ಅವ್ಯವಸ್ಥೆ ತಾಂಡವಾಡುವಂತಾಗಿದೆ. ಕರೋನಾ ಜಾಗೃತಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶ, ನಗರ, ತಾಲೂಕು, ಜಿಲ್ಲಾಸ್ಥಳಗಳ ಭೇದವಿಲ್ಲದೆ ನಾನಾ ಕಡೆ ವಿಭಿನ್ನ ನಿಯಮ ರೀತಿ- ನೀತಿ ಅನುಸರಿಸಲಾಗುತ್ತಿದೆ. ಇಂಥ ತಲಾಗೊಂದು ತೀರ್ಮಾನ, ನಿರ್ಧಾರಗಳಿಂದಾಗಿ ಗೊಂದಲ ಉಂಟಾಗುತಿದ್ದು ಇಂಥ ಗೊಂದಲ ನಿವಾರಿಸಲು ರಾಜ್ಯದಲ್ಲಿ ಸರ್ಕಾರ ಏಕರೂಪದ ನೀತಿ- ನಿಯಮಗಳಿಗೆ ಸೂಚಿಸಿದೆ.

ಸಿದ್ಧಾಪುರದ ಮನ್ಮನೆಯ ಗ್ರಾಮ ಸಮೀತಿ ಕಟ್ಟುಪಾಡು, ನೀತಿಸಂಹಿತೆ ಹಿನ್ನೆಲೆಯಲ್ಲಿ ಕರೋನಾಕ್ಕೆ ಸಂಬಂಧಿಸಿದಂತೆ ತೋಚಿದಂತೆ ಮಾಡಲು ಅವಕಾಶವಿಲ್ಲ. ಜಿಲ್ಲೆಯಲ್ಲಿ ಜಿಲ್ಲಾಡಳಿತದ ನಿಯಮಗಳು ಅನ್ವಯಿಸುತ್ತವೆ. ಜಿಲ್ಲಾಡಳಿತದ ನೀತಿ-ನಿರೂಪಣೆಗೆ ವ್ಯತಿರಿಕ್ತವಾಗಿ
ಸ್ಥಳಿಯ ನೀತಿ-ನಿಯಮ ರೂಪಿಸುವಂತಿಲ್ಲ ಎಂದು ಮಂಗಳವಾರ ಶಿರಸಿ ಉಪವಿಭಾಗಾಧಿಕಾರಿ ಸಿದ್ಧಾಪುರದಲ್ಲಿ ಸೂಚ್ಯವಾಗಿ ಹೇಳಿದ್ದರು. ಇಂದು ಈ ಬಗ್ಗೆಸರ್ಕಾರ ಮತ್ತು ಜಿಲ್ಲಾಡಳಿತದ ಅಧೀಕೃತ ಪ್ರಕಟಣೆ ಹೊರಬಿದ್ದಿದೆ ಎನ್ನಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಪರ್ಯಾಯವಾಗಿ ಸ್ಥಳೀಯ ಸಂಘಟನೆಗಳು ತೀರ್ಮಾನಿಸುತಿದ್ದ ರೀತಿ- ನೀತಿಗಳಿಗೆ ಈ ಹೊಸ ಆದೇಶದಿಂದ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *