ಕಾಗೋಡು ಹೋರಾಟಗಾರ ತಿಮ್ಮಪ್ಪ@ 89

ಇಂದು ಕಾಗೋಡು ತಿಮ್ಮಪ್ಪ ತಮ್ಮ 89 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ತಿಮ್ಮಪ್ಪ ಕಾಗೋಡು ತಿಮ್ಮಪ್ಪ ಎಂದು ಖ್ಯಾತರಾಗುವ ಮೊದಲು ನಮ್ಮಂತೆ ಹಳ್ಳಿಗಾಡ ಹುಡುಗ. ಛಲದಿಂದ ವಿದ್ಯೆ ಕಲಿಯುತ್ತಾ ವಕೀಲರಾಗುವವರೆಗೆ ತಿಮ್ಮಪ್ಪ ಸಮಾಜದ ಎಲ್ಲಾ ಸೊಗಸು ಅಪಸವ್ಯಗಳನ್ನು ನೋಡುತ್ತಾ ಬೆಳೆದವರು. ಇವರ ಗುರು ಎಚ್. ಗಣಪತಿಯಪ್ಪ ಗಾಂವಟಿಶಾಲೆ ಮಾಸ್ತರ್ ಆಗಿ ಹಿರೆನೆಲ್ಲೂರಿನಲ್ಲಿ ಮಕ್ಕಳಿಗೆ ಪಾಠ ಮಾಡುತಿದ್ದವರು. ಜಮೀನ್ಧಾರರ ದಬ್ಬಾಳಿಕೆ ಬಗ್ಗೆ ತನ್ನ ವಿದ್ಯಾರ್ಥಿಗಳಿಗೆ ಹೇಳುವುದು, ಕೇಳುವುದನ್ನು ಅರಿತ ಮೇಲ್ವರ್ಗದವರು ಗಣಪತಿಯಪ್ಪನವರಿಗೆ ಶಾಲೆಗೆ ಸ್ಥಳ ನಿರಾಕರಿಸುತ್ತಾರೆ. ವಾಸ್ತವದಲ್ಲಿ ಶಿಕ್ಷಕ ಹೋರಾಟಕ್ಕೆ ಬೀಜಬಿತ್ತುವುದನ್ನು ಒಪ್ಪದ ಜಮೀನ್ಧಾರರು ಗಣಪತಿಯಪ್ಪನವರಿಗೆ ಜಾಗ ಇಲ್ಲ ಎಂದಾಗ ಆ ಭಾಗದ ಜನ ಸಾಮಾನ್ಯ ಗೇಣಿದಾರರು ಗಣಪತಿಯಪ್ಪನವರನ್ನು ಶಿಕ್ಷಕ ಎಂದು ಒಪ್ಪಿಕೊಳ್ಳತ್ತಾರೆ. ಮತ್ತು ಹೊಸ ಜಾಗ ಮಾಡಿಕೊಡುತ್ತಾರೆ.

ಈ ಅವಧಿಯಲ್ಲಿ ವಿದ್ಯಾರ್ಥಿ, ಶ್ರೀಸಾಮಾನ್ಯನಾಗಿರಬಹುದಾದ ತಿಮ್ಮಪ್ಪ ನಂತರ ವಕೀಲಿಕೆ ಕಲಿತು ಮತ್ತೆ ಗಣಪತಿಯಪ್ಪ, ಗೋಪಾಲಗೌಡ, ಲೋಹಿಯಾರ ವಿದ್ಯಾರ್ಥಿಯಾಗುತ್ತಾರೆ. ಹೀಗೆ ಸಮಾಜವಾದ, ಹೋರಾಟವನ್ನು ಚಿಕ್ಕಂದಿನಿಂದಲೇ ನೋಡುತ್ತಾ, ಮಾಡುತ್ತಾ ಬೆಳೆದ ಕಾಗೋಡು ತಿಮ್ಮಪ್ಪ ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರು ಹಲವು ಬಾರಿ ಮಂತ್ರಿಯಾದರೂ ಮುಖ್ಯಮಂತ್ರಿಯಾಗಲೇ ಇಲ್ಲ. ಸಾಗರವನ್ನು ಸ್ವಾತಂತ್ರ್ಯ ನಂತರ ಅತಿ ಹೆಚ್ಚುಬಾರಿ ಪ್ರತಿನಿಧಿಸಿದ ಕಾಗೋಡು ಹುಡುಗ ಯಾನೆ ಕಾಗೋಡು ಅಜ್ಜ ತಿಮ್ಮಪ್ಪ ಸಮಾಜವಾದಿಯಾಗಿ ಕೂಟ ಕಟ್ಟಲಿಲ್ಲ. ತಮ್ಮ ಓರಗೆಯವರೆಲ್ಲಾ ರಾಜಕೀಯದ ಹೊಸ ಪಟ್ಟು,ರೀತಿ-ನೀತಿಗಳನ್ನು ಕಲಿತು ಏಣಿ ಹತ್ತುವ ಕಸರತ್ತು ಮಾಡುತಿದ್ದಾಗ ತಿಮ್ಮಪ್ಪ ಜನಪರವಾಗಿ ಯೋಚಿಸುತ್ತಾ ಸಮಾಜವಾದಕ್ಕೆ ಗೌರವ ಬರುವಂತೆ ನಡೆದುಕೊಂಡರು.

ಈಗ ರಾಜ್ಯದ ಹಿರಿಯ ರಾಜಕಾರಣಿಯಾಗಿ ಜನರ ನಡುವೆ ಇರುವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್, ಪ್ರಜಾಸಮಾಜವಾದಿ ಪಕ್ಷ, ಜನತಾ ಪಕ್ಷ ಹೀಗೆ ತಮ್ಮ ಓಡಾಟ, ಒಡನಾಟವನ್ನು ಜನಪರ ಜಾತ್ಯಾತೀತರ ಜೊತೆ ಇಟ್ಟುಕೊಂಡರೇ ಹೊರತು ಎಲ್ಲಿಯೂ ಮತೀಯವಾದಿಗಳೊಂದಿಗೆ ಕೈ ಜೋಡಿಸಲಿಲ್ಲ. ಲೋಕೋಪಯೋಗಿ, ಸಮಾಜಕಲ್ಯಾಣ, ಕಂದಾಯಗಳಂಥ ಮಹತ್ವದ ಖಾತೆಗಳ ಸಚಿವರಾಗಿ ತಿಮ್ಮಪ್ಪ ಮಾಡಿದ ಕೆಲಸ ಇತರರಿಗೆ ಅನುಕರಣೀಯ. ಸಾಗರ-ಶಿವಮೊಗ್ಗ ಗಳಲ್ಲಿ ಸರ್ಕಾರಿ ಸಂರಚನೆ, ಜನರ ಕೆಲಸ, ಬಗರಹುಖುಂ. ಅಕ್ರಮ ಸಕ್ರಮ ಯಾವುದೇ ಕೆಲಸದ ಹಿಂದೆ ಅವರ ಬದ್ಧತೆ,ನಿಷ್ಠೂರತೆ ಕಣ್ಣಿಗೆ ರಾಚುವಷ್ಟು ಪ್ರಖರ.

ಪಂಚೆ ಉಡುವ ಜನಸಾಮಾನ್ಯ ಹಳ್ಳಿಗನಿಂದ ಹಿಡಿದು ಮಂತ್ರಿ ಮಹೋದಯರು, ಅಧಿಕಾರಿಗಳು ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುವ ಕಾಗೋಡು ಅಜ್ಜ ಕೆಲಸ, ವೈಚಾರಿಕತೆಯ ವಿಚಾರದಲ್ಲಿ ಹಿರಿಯಜ್ಜ. ರಾಜ್ಯದ ಮೌಢ್ಯ ನಿಷೇಧ ಕಾಯಿದೆ ರಚನೆ ಇರಲಿ, ಸಿಗಂದೂರಿನ ವಿಚಾರವಿರಲಿ ಹೇಳಬೇಕಾದ್ದನ್ನು ನೇರವಾಗಿ ಹೇಳುವ ಛಾತಿಯ ಈ ಹೋರಾಟಗಾರ ಮತೀಯವಾದಿ ಮಾತಿನ ಅನಂತಕುಮಾರ ಹೆಗಡೆಯವರನ್ನು ಯಾವನ? ಎಂದು ಗತ್ತಿನಿಂದ ಛೇಡಿಸಿದಂತೆ ಶಾಸಕ ಕಾಗೇರಿಯವರನ್ನು ಏ ಕಾಗೇರಿ ನಂಗೊತ್ತಿಲ್ಲನ ನಿನ್ನ ಕ್ಷೇತ್ರದ್ ಕತೆ ಎನ್ನುವವರೆಗೆ. ದೇಶಪಾಂಡೆ, ಧರ್ಮಸಿಂಗ್, ಖರ್ಗೆಯವರಂಥ ಹಿರಿಯರಿಗೂ ಏಕವಚನದಲ್ಲೇ ಮಾತನಾಡಿಸಿ ತಿವಿಯುವ ಕಾಗೋಡು ಮಾತಿನಲ್ಲಿ, ನಡತೆಯಲ್ಲಿ, ನಡವಳಿಕೆಯಲ್ಲಿ ಎಲ್ಲೂ ರಾಜಿ ಇಲ್ಲದ ಧೀರ, ಇವರಲ್ಲಿ ನಾ ಟಕೀಯತೆ ಕಾಣಲೂ ಸಾಧ್ಯವಿಲ್ಲ. ಇಂಥ ಹಿರಿಯಜ್ಜ ತೀನಾ ಶ್ರೀನಿವಾಸರೊಂದಿಗೆ ನನ್ನ ಕಛೇರಿಯ ಎದುರು ಬಂದು ಏನಾದರೂ ಮಾಡುತಿರು ಮಂಕುತಿಮ್ಮ ಎಂದು ಆಶೀರ್ವದಿಸಿದ್ದು ಎಂದಿಗೂ ಮರೆಯದ ನೆನಪು.

ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಾಲದಿಂದ ಅರಸು, ಬಂಗಾರಪ್ಪ,ಎಸ್.ಎಂ.ಕೃಷ್ಣ, ಕುಮಾರಸ್ವಾಮಿಯವರವರೆಗೆ ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು, ಪ್ರಭಾವಿಗಳು ಎಲ್ಲರೊಂದಿಗೆ ಕೆಲಸ ಮಾಡಿದರೂ ಯಾರೊಂದಿಗೂ ರಾಜಿ ಮಾಡಿಕೊಳ್ಳದ ತಿಮ್ಮಪ್ಪ 90 ದಶಕಗಳಲ್ಲಿ 70 ದಶಕಗಳನ್ನು ಹೋರಾಟ, ಅಧಿಕಾರ, ಜನನೇತೃತ್ವ, ಜನಹೋರಾಟ, ಜನಪರತೆಗಾಗಿ ಮುಡಿಪಾಗಿಟ್ಟಿದ್ದಾರೆ. ಈಗಲೂ ಹೊಸ ಹುಡುಗನಂಥ ಉತ್ಸಾಹದ ಕಾಗೋಡು ಅಜ್ಜ ಎಲ್ಲರಿಗೂ ಮಾದರಿ. ನೂರಾರು ವರ್ಷ ಉಳಿಯಬಹುದಾದ ಕೆಲಸ, ಅಭಿವೃದ್ಧಿ, ಸಾಧನೆ ಮಾಡಿರುವ ಕಾಗೋಡು ತಿಮ್ಮಪ್ಪ ನೂರಾರು ವರ್ಷ ಬದುಕಿ ಬಾಳುವಂತಾಗಲಿ ಎನ್ನುವ ಶುಭ ಹಾರೈ ಕೆಗಳೊಂದಿಗೆ ಅವರಿಗೆ ಸಮಾಜಮುಖಿಯ ಹುಟ್ಟುಹಬ್ಬದ ಶುಭಾಶಯ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *