ಗೋಸ್ವರ್ಗ,ಗೋಹತ್ಯೆ ಒಂದು ಮೀಮಾ(ವೆಂ)ಸೆ

ನನಗೆ ಗೊತ್ತಿಲ್ಲ, ಈ ರೀತಿ ವಿಶ್ಲೇಷಿಸಿದರೆ ತಪ್ಪಾಗುತ್ತದೆಯೇ, ತಿಳಿದವರು ಹೇಳಬೇಕು. ರಾಜ್ಯ ಸರ್ಕಾರ ಗೋ ಹತ್ಯಾ ನಿಷೇಧ ಕಾಯಿದೆಯನ್ನು ಜಾರಿ ಮಾಡುವ ಹಂತದಲ್ಲಿದೆ. ಈ ಕುರಿತಾಗಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದ ಹೊಸನಗರದ ರಾಮಚಂದ್ರಾಪುರ ಮಠ ಅದನ್ನು ಸಹಜವಾಗಿಯೇ ಸ್ವಾಗತಿಸಿದೆ.ಈ ಮಠದ ಅನುಯಾಯಿಗಳಾಗಿ, ಗ್ರಾಮೀಣ ಭಾಗದ ಹವ್ಯಕ ರೈತರಾಗಿ ನಾವು ಕೊಟ್ಟಿಗೆಗಳನ್ನೇ ಕಳೆದುಕೊಳ್ಳುತ್ತಿರುವುದರಿಂದ, ಗೋವುಗಳನ್ನು ಸಾಕದೆ ಆ ಮೂಲಕ ಗೋ ಹತ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡಿದ್ದೇವೆ ಎಂದು ಕಟುವಾಸ್ತವವನ್ನು ಹೇಳಬಹುದು.

ಹಿಂಸೆ ಅಸಹನೀಯವಾಗಿರುವ ಗೋ ಹತ್ಯೆ ನಮಗೆ ಸಮ್ಮತವಲ್ಲ. ಗೋವನ್ನು ಸಾಕಿ ಕಟುಕರಿಗೆ ನಾವು ಕೊಡಲಾರೆವು. ಆದರೆ ಮಾಂಸಾಹಾರಿಗಳಿಗೆ ಅದನ್ನು ಸಾಕಿ, ಅದನ್ನು ಸಾಕುವಂತಿಲ್ಲ ಎಂದು ನಾವು ನಿರ್ದೇಶಿಸುವುದು ಸರಿಯೇ, ನನಗೆ ಗೊತ್ತಿಲ್ಲ. ನಾವು ಸಾಕುವ ಹಸುಗಳನ್ನು ಕದ್ದು ಆಹಾರಕ್ಕೆ ಬಳಸುವ ಪ್ರಯತ್ನ ಮಾಡುತ್ತಿದ್ದರೆ ಅದನ್ನು ಪರಿಣಾಮಕಾರಿಯಾಗಿ ತಡೆಯಲು ಈಗಾಗಲೇ ನಮ್ಮಲ್ಲಿ ಕಾನೂನುಗಳಿಲ್ಲವೇ? ನನಗೆ ಗೊತ್ತಿಲ್ಲ.

ಹೊಸನಗರದ ರಾಮಚಂದ್ರಾಪುರ ಮಠ ಗೋವುಗಳ ಮಹತ್ವ, ಅದರಲ್ಲೂ ಹಳ್ಳಿಕಾರು ಗೋವುಗಳ ಮಹತ್ವವನ್ನು ವಿಶೇಷವಾಗಿ ಪ್ರಚಾರ ಮಾಡಿದೆ. ವಿಶ್ವ ಗೋ ಸಮ್ಮೇಳನವೇ ಒಂದು ಕಾಲದಲ್ಲಿ ನಡೆದಿತ್ತು. ಆನಂತರದಲ್ಲಿ ಮಠದ ಸದಸ್ಯರಲ್ಲಿ ಮತ್ತು ಒಟ್ಟಾರೆ ಸಮಾಜದಲ್ಲಿ ಗೋವುಗಳ ಸಾಕಾಣಿಕೆ ಹೆಚ್ಚಾಗಿದೆಯೋ, ಕಡಿಮೆಯಾಗಿದೆಯೋ ಎಂಬುದರ ಕುರಿತು ಖುದ್ದು ಮಠ ಸಮೀಕ್ಷೆ ನಡೆಸಿ ವರದಿ ನೀಡಬೇಕಾಗಿತ್ತು. ನನ್ನ ಮಟ್ಟಿಗೆ, ಗೋ ಸಮ್ಮೇಳನದ ಯಶಸ್ಸು, ಗೋವುಗಳನ್ನು ಅರ್ಥಾತ್ ಮಲೆನಾಡು ಗಿಡ್ಡ ತರಹದ ಸ್ಥಳೀಯ ಜಾತಿಯ ಹಸುಗಳ ಸಾಕಾಣಿಕೆಯನ್ನು ಹೆಚ್ಚಿಸುವುದರಲ್ಲಿದೆ. ತಪ್ಪಿದ್ದರೆ ತಿಳಿಸಬಹುದು.ಅಷ್ಟಕ್ಕೂ ಪ್ರತಿ ಪ್ರಯತ್ನದಲ್ಲಿಯೂ ಸಫಲತೆಯೇ ಸಿಗಬೇಕೆಂದಿಲ್ಲ.

ಅದು ಹೊಸನಗರದ ಮಠದ ಗೋ ಸಮ್ಮೇಳನಕ್ಕೂ ಅನ್ವಯ. ಅವತ್ತಿನ ಪ್ರಯತ್ನ ಸಫಲ ಅಲ್ಲ ಎಂತಾದರೆ ಆ ಹೋರಾಟವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡುಹೋಗಬೇಕಾಗುತ್ತದೆ. ಜನರ ಮನಸ್ಸಿನಲ್ಲಿ, ಊಹ್ಞೂ, ತನ್ನ ಹತ್ತಿರದ ಸದಸ್ಯ ಬಳಗ ಗೋ ಸಾಕಾಣಿಕೆಯನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. ಅದರಲ್ಲಿ ಯಶಸ್ಸು ಪಡೆಯಬೇಕು. ಆಗ ಅದು ಒಂದು ಆಂದೋಲನದ ರೂಪ ಪಡೆಯುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯದೆ, ಗೋ ಸ್ವರ್ಗದ ಯೋಜನೆಯ ಜಾರಿ ವೈಫಲ್ಯವನ್ನು ಒಪ್ಪಿಕೊಂಡಿದ್ದರ ದ್ಯೋತಕವೇ? ಏಕೆ ಹೇಳುತ್ತೇನೆಂದರೆ, ಗೋವುಗಳನ್ನು ಸಾಕಿದವರು, ಸಾಕಾಣಿಕೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿ ಗೋ ಸ್ವರ್ಗಕ್ಕೆ ಅವನ್ನು ದಾಟಿಸುವುದು ಸುಲಭದ ಕೆಲಸ. ಅಂದರೆ ಗೋ ಸಾಕಾಣಿಕೆಯನ್ನು ಪ್ರೋತ್ಸಾಹಿಸಬೇಕಾದ ವ್ಯವಸ್ಥೆ ಅದನ್ನು ನಿರುತ್ತೇಜನಕಗೊಳಿಸುವ ಕೆಲಸ ಮಾಡಿದಂತೆ. ಗೋ ಸ್ವರ್ಗ ನಮಗೆ ಪಿಕ್ನಿಕ್ ಸ್ಪಾಟ್ ಆಗುವುದು, ನಮ್ಮ ಗೋ ಪ್ರೇಮವನ್ನು ವ್ಯಕ್ತಪಡಿಸುವ ಕೇಂದ್ರವಾಗುವುದು, ಒಂದಿಷ್ಟು ಹಣ ಕೊಟ್ಟು, ಆ ಹಣ ಕೊಟ್ಟಿದ್ದೇನೆನ್ನವ ಮೂಲಕ ನಾನೂ ಗೋ ಸೇವೆಯಲ್ಲಿ ಭಾಗಿ ಎನ್ನುವುದು ಲಾಜಿಕಲ್ ಆಗುತ್ತದಾ ಎನ್ನುವುದು ನನ್ನ ಪ್ರಶ್ನೆ.

ನಾನಂತೂ ಈ ಮಾತುಗಳನ್ನು ವ್ಯಂಗ್ಯವಾಗಿ ಆಡುತ್ತಿಲ್ಲ. ತಲೆಯಲ್ಲಿ ಓಡಾಡುತ್ತಿದ್ದ ವಿಷಯವನ್ನು ಜಿಜ್ಞಾಸೆಯ ಸ್ವರೂಪದಲ್ಲಿ ಇಟ್ಟಿದ್ದೇನೆ. ಚರ್ಚೆಗೆ ಸ್ವಾಗತ.

….ಟಿಪ್ಪಣಿ: ಗೋ ಸಮ್ಮೇಳನಕ್ಕೆ ಹೋಗಿದ್ದೆ. ನಾವಂತೂ ಕೊಟ್ಟಿಗೆ ಕ್ಲೋಸ್ ಮಾಡಿದ್ದೇವೆ. ಗೋ ಸೇವೆ ಕಲ್ಪನೆಗೆ ಮಾಡಬೇಕು, ಮಾಡಬಾರದು ಎಂಬ ತರ್ಕ ತಲೆಯಲ್ಲಿಲ್ಲ.

….ಮಾವೆಂಸ ಪ್ರಸಾದ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *