ವಿಸ್ಮಯ- ಕನ್ನೇಶ್ ಕೋಲಶಿರ್ಸಿ ಬರೆದ ಕವಿತೆ

ವಿಸ್ಮಯ

ಎಲ್ಲಿಯದೋ ಕಲ್ಲು, ಯಾರದೋ ಉಳಿ ಕಲೆತು
ಕಟಿದು ಒಂದಾದ ಮೇಲಲ್ಲವೆ?
ಬೆರಗಾಗಿ
ನಾವದಕೆ ವಿರಾಗಿ, ಬಾಹುಬಲಿ
ಎಂದು ಹೆಸರಿಟ್ಟಿದ್ದು.
ಆಳ ಕಡಲಿನ ಲವಣ,
ದೂರದ ಸೂರ್ಯನ ಕಿರಣ
ಕಲೆತು ಬಡಿದಾಡಿ ಗಾಳಿ- ಬಿಸಿಗೆ ತಾಗಿ
ರುಚಿಯ ಮೂಲವಾದ ಮೇಲಲ್ಲವೆ?
ನಾವದಕೆ ಉಪ್ಪೆಂದು ನಾಮಕರಣ ಮಾಡಿದ್ದು
ಉತ್ತಿ-ಬಿತ್ತಿ ತಿಂಗಳು ಕಳೆದು
ಮಳೆ-ಬಿಸಿಲು, ಗಾಳಿಗೆ ತಲೆಯೊಡ್ಡಿ
ವರ್ಷದೊಳಗೆ ಸಸಿಯ ತುದಿಗೆ ಬಂದ
ಹೂವಿನ ಮಗನಲ್ಲವೆ ನಮ್ಮ ಭತ್ತ-ಅಕ್ಕಿ?
ಭೂಮಿಯ ಚರ್ಮವನ್ನೇ ಸೀಳಿ
ಅದರ ಅಂಗವನ್ನೇ ಕಡಿದು,
ಅಡಿಪಾಯ ಮೇಲ್ಮೈ ಆಗಿ ಬಸಿದು
ಅದಕ್ಕೇ ರಸಾಯನ, ತಂಪು ಅಮೃತವ ಎರೆದು
ರೂಪ ಬಂದ ಮೇಲಲ್ಲವೆ?
ನಾವು ಅದಕೆ ರಸ್ತೆಯೆಂದು ಕರೆದದ್ದು.
ಲೋಕ ಹೀಗೂ ಉಂಟು, ಹಾಗೂ ಉಂಟು
ಅಂಕೋ? ಡೊಂಕೊ?
ಉಪ್ಪು,ಹುಳಿ-ಒಗರು.
ಸಾಧಿಸುವವನಿಗೆ ಲೋಕವೇ ಬಯಲು
ಮೇಲು-ಕೀಳಿನ ಮಲಿನ ಸಾಗಿ
ನಾ ಶ್ರೇಷ್ಠ, ನೀ ಕನಿಷ್ಠ
ಎಲ್ಲಾ ಕನಿಷ್ಟ ಮತಿಗಳ ಸೃಷ್ಟಿ
ಎತ್ತಿಕೋ ನಿನ್ನ ಪಾಲಿನ ಕತ್ತಿ
ತುಂಡರಿಸಿ ಬಿಡು,
ಮೂರು ಎಳೆಯ ಬಂಧನ
ಕೀಳರಿಮೆ, ಮೇಲರಿಮೆ ಅವವರದೇ ಕರ್ಮ
ದೂರಾಗಿ, ಬೋರಲಾಗಿ, ಬಯಲಾಗಿ ಸೇರಲಿ ಗಮ್ಯ
-ಕನ್ನೇಶ್ ಕೋಲಶಿರ್ಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *