ವಿಸ್ಮಯ- ಕನ್ನೇಶ್ ಕೋಲಶಿರ್ಸಿ ಬರೆದ ಕವಿತೆ

ವಿಸ್ಮಯ

ಎಲ್ಲಿಯದೋ ಕಲ್ಲು, ಯಾರದೋ ಉಳಿ ಕಲೆತು
ಕಟಿದು ಒಂದಾದ ಮೇಲಲ್ಲವೆ?
ಬೆರಗಾಗಿ
ನಾವದಕೆ ವಿರಾಗಿ, ಬಾಹುಬಲಿ
ಎಂದು ಹೆಸರಿಟ್ಟಿದ್ದು.
ಆಳ ಕಡಲಿನ ಲವಣ,
ದೂರದ ಸೂರ್ಯನ ಕಿರಣ
ಕಲೆತು ಬಡಿದಾಡಿ ಗಾಳಿ- ಬಿಸಿಗೆ ತಾಗಿ
ರುಚಿಯ ಮೂಲವಾದ ಮೇಲಲ್ಲವೆ?
ನಾವದಕೆ ಉಪ್ಪೆಂದು ನಾಮಕರಣ ಮಾಡಿದ್ದು
ಉತ್ತಿ-ಬಿತ್ತಿ ತಿಂಗಳು ಕಳೆದು
ಮಳೆ-ಬಿಸಿಲು, ಗಾಳಿಗೆ ತಲೆಯೊಡ್ಡಿ
ವರ್ಷದೊಳಗೆ ಸಸಿಯ ತುದಿಗೆ ಬಂದ
ಹೂವಿನ ಮಗನಲ್ಲವೆ ನಮ್ಮ ಭತ್ತ-ಅಕ್ಕಿ?
ಭೂಮಿಯ ಚರ್ಮವನ್ನೇ ಸೀಳಿ
ಅದರ ಅಂಗವನ್ನೇ ಕಡಿದು,
ಅಡಿಪಾಯ ಮೇಲ್ಮೈ ಆಗಿ ಬಸಿದು
ಅದಕ್ಕೇ ರಸಾಯನ, ತಂಪು ಅಮೃತವ ಎರೆದು
ರೂಪ ಬಂದ ಮೇಲಲ್ಲವೆ?
ನಾವು ಅದಕೆ ರಸ್ತೆಯೆಂದು ಕರೆದದ್ದು.
ಲೋಕ ಹೀಗೂ ಉಂಟು, ಹಾಗೂ ಉಂಟು
ಅಂಕೋ? ಡೊಂಕೊ?
ಉಪ್ಪು,ಹುಳಿ-ಒಗರು.
ಸಾಧಿಸುವವನಿಗೆ ಲೋಕವೇ ಬಯಲು
ಮೇಲು-ಕೀಳಿನ ಮಲಿನ ಸಾಗಿ
ನಾ ಶ್ರೇಷ್ಠ, ನೀ ಕನಿಷ್ಠ
ಎಲ್ಲಾ ಕನಿಷ್ಟ ಮತಿಗಳ ಸೃಷ್ಟಿ
ಎತ್ತಿಕೋ ನಿನ್ನ ಪಾಲಿನ ಕತ್ತಿ
ತುಂಡರಿಸಿ ಬಿಡು,
ಮೂರು ಎಳೆಯ ಬಂಧನ
ಕೀಳರಿಮೆ, ಮೇಲರಿಮೆ ಅವವರದೇ ಕರ್ಮ
ದೂರಾಗಿ, ಬೋರಲಾಗಿ, ಬಯಲಾಗಿ ಸೇರಲಿ ಗಮ್ಯ
-ಕನ್ನೇಶ್ ಕೋಲಶಿರ್ಸಿ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *