ನೀನೇ ಕುಣಿಸುವೆ ಜೀವರನು……

ನೀನೇ ಕುಣಿಸುವೆ ಜೀವರನು
ಹೆಸರಿನ ಜೊತೆಗೇ ಭಾಗವತರಾಗಿದ್ದರು ನೆಬ್ಬೂರರು: ಕೆರೇಕೈ
(ಶಿರಸಿ:ಮೇ,20-) ನೆಬ್ಬೂರು ನಾರಾಯಣ ಭಾಗವತ್ ಅವರು ಹಾಡಿದ ಜನಪ್ರಿಯ ಪದ್ಯಗಳ ಪ್ರಸ್ತುತಿ, ಅವರ ಒಡನಾಟದ ಮೆಲಕು ಹಾಕುವ ಮೂಲಕ ನಗರದ ಯೋಗ ಮಂದಿರದಲ್ಲಿ ನೀನೆ ಕುಣಿಸುವೆ ಜೀವರನು ಗಾನ ಹಾಗೂ ವಚನ ನಮನ ಕಾರ್ಯಕ್ರಮ ಜರುಗಿತು.
ಅಗಲಿದ ಯಕ್ಷಗಾನದ ಮೇರು ಭಾಗವತ ನೆಬ್ಬೂರು ನಾರಾಯಣ ಭಾಗವತ ಅವರ ಸಂಸ್ಮರಣೆಯಲ್ಲಿ ರವಿವಾರ ಸಿದ್ದಾಪುರ, ಶಿರಸಿ, ಯಲ್ಲಾಪುರ ತಾಲೂಕಿನ ವಿವಿಧ ಸಂಘಟನೆಗಳಿಂದ ಕಲಾಭಿಮಾನಿಗಳು, ಒಡನಾಡಿಗಳು ಭಾವಪೂರ್ಣವಾಗಿ ನಮನ ಸಲ್ಲಿಸಿದರು.
ನುಡಿ ನಮನ ಸಲ್ಲಿಸಿದ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ನೆಬ್ಬೂರರ ಪ್ರೀತಿ, ಭಾಗವತರ ಕಲೆ ನಮಗೆ ಇಷ್ಟವಾಗಲು ಕಾರಣ. ಪ್ರೀತಿ ಇರಬೇಕು ಎಂಬ ನಿರ್ಬಂಧವಿಲ್ಲ. ನಿರ್ವಾಜ್ಯವಾಗಿ ಸಮಾಜವನ್ನು ಪ್ರೀತಿಸುವ ವಿಶಿಷ್ಟ ಅರ್ಹತೆ ಇತ್ತು. ಯಾವ ಕಾರಣಕ್ಕೆ ಒಡನಾಟಕ್ಕೆ ಬಂದರೂ ಪ್ರೀತಿಯಿಂದ ಕಟ್ಟು ಹಾಕುತ್ತಿತ್ತು. ಜಗಳ ಮಾಡಿದವರೂ ಭಾಗವತರನ್ನು ಮರೆಯಲು ಸಾಧ್ಯವಿಲ್ಲ. ಜೀವ ಕಲೆಯನ್ನು ತುಂಬಿಸುವ ಪ್ರೀತಿ ಅದು ಎಂದರು.
ಒಂದು ಮನೆಯ ಕೊರತೆಯನ್ನು ತೋರಿಸದೇ ಅದನ್ನು ದಾಟುವ ಇಂಥ ಆದರ್ಶ ಗೃಹಸ್ಥರನ್ನು ನಾನು ನೋಡಿಲ್ಲ. ಇದು ಅನುಕರಣೀಯ ಸಂಸ್ಕಾರ. ಜೀವನ ಮಾದರಿಯಾಗಿದ್ದವರು. ತುಂಬಾ ಜನರಿಗೆ ಅವರಾಗಿ ಸಹಾಯ ಮಾಡಿದ್ದರು ಎಂದ ಅವರು, ನೆಬ್ಬೂರು ಭಾಗವತರ ಭಾಗವತಿಕೆ ಬಗ್ಗೆ ಮಾತನಾಡಲು ಧೈರ್ಯ ಹಾಗೂ ಅನುಭವ ಬೇಕು. ಏಕೆಂದರೆ ಅವರು 2 ವರ್ಷ ಮಾತ್ರ ಸಂಗೀತ ಮಾಡಿ 63 ವರ್ಷ ಭಾಗವತಿಕೆ ಮಾಡಿದವರು. ಅವರ ಹೆಸರಿನ ಜೊತೆ ಭಾಗವತ ಎಂಬುದೂ ಸೇರುವಷ್ಟು ಒಂದಾಗಿದ್ದರು ಭಾಗವತಿಕೆಯಲ್ಲಿ. ಅವರ ಮಾದರಿ ಶ್ರೇಷ್ಠವಾದದ್ದು. ತೆರೆದ ಕಂಠದ ಭಾಗವತರು ಅವರು ಎಂದೂ ಬಣ್ಣಿಸಿದರು.
ಸಂಕಲ್ಪದ ಮುಖ್ಯಸ್ಥ ಪ್ರಮೋದ ಹೆಗಡೆ ಯಲ್ಲಾಪುರ ನೆಬ್ಬೂರರು ಸರಳ. ಭಾಗವತಿಕೆಯಲ್ಲಿ ಶ್ರೀಮಂತಿಕೆ ಇದ್ದವರು. ಅವರ ನೆನಪನ್ನು ಪ್ರತೀ ವರ್ಷ ಮಾಡಕೊಳ್ಳಬೇಕು. ನೆಬ್ಬೂರರು ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ನೆನಪಿಡುವ ಕಾರ್ಯ ಮಾಡಬೇಕು. ಅಗೋಚರ ಕುಟುಂಬ ಇದೆ. ಕಲಾವಿದರ, ಯಕ್ಷಗಾನ ಕುಟುಂಬ ಅದು. ನಮ್ಮ ಕುಟುಂಬದ ಹಬ್ಬ ಮಾಡಬೇಕು. ಜಬ್ದಾರಿಯುತವಾಗಿ ಯಕ್ಷಗಾನ ಕುಟುಂಬ ಒಂದಾಗಬೇಕು. ಹೊಸ ಸೃಷ್ಟಿ ಬಹಳ ಕಡಿಮೆ ಆಗಿದೆ. ಕಳೆದುಕೊಳ್ಳುವುದು ಹೆಚ್ಚಾಗಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೋ. ಎಂ.ಎ.ಹೆಗಡೆ ದಂಟ್ಕಲ್ ಮಾತನಾಡಿ, ನೆಬ್ಬೂರರ ನೆನಪೇ ಇಲ್ಲಾಗಬೇಕು. ಅದಕ್ಕೇ ಕಟುವಾಗಿ ಹೇಳಬೇಕು. ನಾನು ಅಲ್ಲ, ನಮ್ಮಂತಹ ಹಲವಾರು ಜನರನ್ನು ಸಿದ್ಧಗೊಳಿಸಿದ ಅವಿಸ್ಮರಣೀಯ ಎಂಬ ರೀತಿಯಲ್ಲಿ ಪ್ರಭಾವ ಬೀರಿದ ನೆಬ್ಬೂರರಗೆ ಕುಸುಮ ಅರ್ಪಿಸಬೇಕು. ಔಚಿತ್ಯ ಬಂಧಕ್ಕೆ ಕಟ್ಟು ಬಿದ್ದವರು. ಪದ್ಯವನ್ನು ಅನಗತ್ಯ ವಿಸ್ತಾರ ಮಾಡಿಲ್ಲ. ಭಾಗವತರಲ್ಲಿ ಎರಡು ಮಾದರಿ. ಬುದ್ಧಿಯಿಂದ ಭಾಗವತರು. ಹೃದಯದಿಂದ ಭಾಗವತರು. ಹೃದಯದ ಭಾಗವತಿಕೆಯಲ್ಲಿ ಗೆದ್ದವರು ಎಂದರು.
ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ ಉಪಸ್ಥಿತರಿದ್ದರು. ಜಯರಾಮ ಹೆಗಡೆ, ಆರ್.ಎಂ.ಹೆಗಡೆ ಕಾನಗೋಡ, ನೇತ್ರಾವತಿ ಹೆಗಡೆ, ವಿ.ಆರ್.ಹೆಗಡೆ, ಹಿತ್ಲಕೈ ಗಣಪತಿ ಹೆಗಡೆ, ಜಿ.ಎನ್.ಹೆಗಡೆ ಹಾವಳಿಮನೆ, ಇತರರು ನುಡಿ ನಮನ ಸಲ್ಲಿಸಿದರು. ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಸಂಘಟಕ ನಾಗರಾಜ್ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ದೀಕ್ಷಿತ ವಂದಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ವಂದಿಸಿದರು.
ಗಾನ ನಮನ:
ನೀನೇ ಕುಣಿಸುವೆ ಜೀವರನು, ನೋವು ನಲಿವಿನ ಜೀವನ ಕಂಡಾಯ್ತು, ಇಳಿದ ಪ್ರಶಾಂತದಲಿ.., ಚೆಲುವರನ್ನು ನೋಡಿದರೆ, ರಂಗ ನಾಯಕ ಸೇರಿದಂತೆ ನೆಬ್ಬೂರರ ಇಷ್ಟದ ಪದ್ಯಗಳನ್ನು ಹೆಸರಾಂತ ಭಾಗವತರಾದ ಕೇಶವ ಹೆಗಡೆ ಕೊಳಗಿ, ಶಂಕರ ಬ್ರಹ್ಮೂರು, ಶಂಕರ ಭಾಗವತ್, ಪ್ರಸನ್ನ ಹೆಗ್ಗಾರ ಸಹಕಾರ ನೀಡಿದರು.
ಯೋಗ ಮಂದಿರ, ಯಕ್ಷ ಶಾಲ್ಮಲಾ, ನೆಬ್ಬೂರು ಪ್ರತಿಷ್ಠಾನ, ವಿಶ್ವಶಾಂತಿ ಸೇವಾ ಟ್ರಸ್ಟ, ಹವ್ಯಕ ಕ್ಷೇಮಾಭಿವೃದ್ಧಿ ಟ್ರಸ್ಟ, ಸಂಕಲ್ಪ ಯಲ್ಲಾಪುರ, ಮಾತೃ ಮಂಡಳಿ ಸ್ವರ್ಣವಲ್ಲೀ, ಶಬರ ಸಂಸ್ಥೆ ಸೋಂದಾ, ಸಾಮ್ರಾಟ್ ಹೋಟೆಲ್, ಯಕ್ಷ ಸಂಭ್ರಮ, ನಾದ ಶಂಕರ, ಯಕ್ಷ ಭಾರತೀ, ಹೆಕ್ಷ ಗೆಜ್ಜೆ, ಅಂಕ ಸಂಸಾರ, ಯಕ್ಷ ಶುಭೋದಯ, ಗೆಳೆಯರ ಬಳಗ ಭೈರುಂಬೆ, ಯಕ್ಷಸಿರಿ ವಾನಳ್ಳಿ, ಯಕ್ಷ ಸಂಗಮ ಆದರ್ಶ ವನಿತಾ ಸಮಾಜ, ಯಕ್ಷ ಕಿರಣ ಕೋಳಿಗಾರ, ಅನಂತ ಯಕ್ಷಕಲಾ ಪ್ರತಿಷ್ಠಾನ ಸಿದ್ದಾಪುರ, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನ ಕಲಗದ್ದೆ, ಒಡ್ಡೋಲಗ, ಯಕ್ಷ ಚಂದನ ದಂಟ್ಕಲ್, ರಾಯಸಂ ಮಂಚಿಕೇರೆ ಇನ್ನಿತರ ಸಂಘಟನೆಗಳು ಸಹಕಾರ ನೀಡಿದ್ದವು.

ಭಾವ ಅರಿತು, ಸಂಕೀರ್ಣ ಸ್ಥಿತಿ ಅರಿತು ಹಾಡಿದವರು ನೆಬ್ಬೂರರು. ಇಡೀ ಸನ್ನಿವೇಶ ತುಂಬಿಕೊಂಡು ಹಾಡಿ ಜನ ಮಾನಸದಲ್ಲಿ ನಿಂತವರು. ನೆಬ್ಬೂರರಂತೆ ಹಾಡಲು ಸಾಧ್ಯವಿಲ್ಲ.

  • ಪ್ರೋ. ಎಂ.ಎ.ಹೆಗಡೆ ದಂಟ್ಕಲ್, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ ಭಾಗವತಿಕೆಯಲ್ಲಿ ಪ್ರತ್ಯೇಕತೆ ಮನಸ್ಸೇ ಹೊರತು ಪಾತ್ರದ ಭಾವ ತೋರಿಸುವದಿಲ್ಲ. ಯಕ್ಷಗಾನದ ಪಾರಂಪರಿಕ ಆಕರ ವ್ಯಕ್ತಿ ಆಗಿದ್ದವರು ನೆಬ್ಬೂರರು.- ವಿ.ಉಮಾಕಾಂತ ಭಟ್ಟ ಕೆರೇಕೈ, ವಿದ್ವಾಂಸ

ಯಕ್ಷಗಾನ ಕಲಾವಿದರನ್ನೂ ಜೋಡಿಸುವ ಕಾರ್ಯ ನೆಬ್ಬೂರರು ಮಾಡಿದ್ದರು.

  • ಪ್ರಮೋದ ಹೆಗಡೆ ಯಲ್ಲಾಪುರ, ಸಂಕಲ್ಪ

ನೆಬ್ಬೂರು ಪ್ರತಿಷ್ಠಾನದಿಂದ ನೆಬ್ಬೂರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಯೋಜಿಸಿದ್ದೇವೆ.

  • ಜಿ.ಎನ್.ಹೆಗಡೆ ಹಾವಳಿಮನೆ, ಪ್ರತಿಷ್ಠಾನದ ಅಧ್ಯಕ್ಷರು

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *