ಸಾಹಿತ್ಯದ ಪ್ರೇಮ ಪತ್ರ

ಜಯಂತರ ಸಾಹಿತ್ಯದ ಪ್ರೇಮ ಪತ್ರ
(ಪ್ರೀತಿಯಷ್ಟೇ ಅಲ್ಲ)
ಗೆಳತಿ,
ಪುಣ್ಯ
ಮಂತ್ರಿ ಮಹಾಶಯರ ಕಾರಿನ
ಹಿಂದಿನ ಸೀಟಿನಲ್ಲಿ
ಮುದುಡಿ ಕೂತಿದ್ದವು
ಹಾರದ ಹೂ
ಕಲ್ಲು ದೇವರ ಗುಡಿಗೋ ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ ಸಲ್ಲಲೂ ಪುಣ್ಯ ಬೇಕು!
(ಕೋಟಿತೀರ್ಥ)
ಇದೊಂದು ಚಿಕ್ಕ ಕವಿತೆ.
ಚಿಕ್ಕ ಕವಿತೆಗಳನ್ನು ಬರೆಯುವುದನ್ನು ಸೇರದ ಪ್ರಸಿದ್ದ ಸಾಹಿತಿಯೊಬ್ಬರ ಇನ್ನೊಂದು ಚಿಕ್ಕ ಕವನ ಕೇಳು (ಓದು)
ಅರ್ಥ
ನಿನ್ನ
ಮೈ ತುಂಬ
ಶಬ್ಧಾಕ್ಷರ ಚಿನ್ಹ ಪ್ರಶ್ನಾರ್ಥಕಗಳ
ಮುಳ್ಳು ಚುಚ್ಚಿ,
ಅರ್ಥಕ್ಕಾಗಿ ಕಾದು ಕೂತೆ
ಏನೂ ಹೊರಡಲಿಲ.್ಲ
ತಾಳ್ಮೆಗೆಟ್ಟು ಎಲ್ಲ
ಕಿತ್ತೊಗೆದು
ನಿನ್ನ
ಬೋಳು ಮೈ ತೊಳೆದು
ಚೊಕ್ಕ ಒರೆಸಿ,
ಹಗುರಾಗಿ ಮೀಟಿದೆ
ಹೌದೆ ಕವಿತಾ !!
ಒಮ್ಮೆಗೇ ಹೊಳೆದು ಹೋಯಿತು
ನಿನ್ನದೆ
ಅಥವಾ ನನ್ನದೆ?
ಈ ಕವಿತೆ ಓದಿದ ಮೇಲೂ ಈ ಕವಿ, ಸಾಹಿತಿ ಯಾರೆಂದು ಅರ್ಥವಾಗಲಿಲ್ಲವಲ್ಲ!
ಹೋಗಲಿ, ಅವರ ‘ದಗಡೂ ಪರಬನ’ ಕಥೆ ಓದಿದ್ದೀಯಾ?
ಕನ್ನಡದ ರೋಮಾಂಚಕ ಕಥೆಗಳಲ್ಲಿ ಒಂದದು. ಇರಲಿ, ಈ ಹಾಡು ಕೇಳು, ನನ್ನ ಪ್ರೀತಿಯ ಹಾಡಿದು’
ತುಟಿಗಳಾ ಹೂವಲಿ, ಆಡದ
ಮಾತಿನ ಸಿಹಿ ಇದೆ.
ಮನಸಿನಾ ಪುಟದಲಿ,
ಕೇವಲ ನಿನ್ನದೆ ಸಹಿ ಇದೆ.
ಹಣÉಯಲಿ ಬರೆಯದ ನಿನ್ನಯ ಹೆಸರನು
ಹೃದಯದಿ ನಾನೇ ಕೊರೆದಿರುವೆ. ನಿನಗುಂಟೆ ಇದರ ಕಲ್ಪನೆ
ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ………
ಅನಿಸುತಿದೆ ಯಾಕೋ ಇಂದು
ನೀನೇನೆ ನನ್ನವಳೆಂದು
ಮಾಯದ ಲೋಕದಿಂದ
ನನಗಾಗೇ ಬಂದವಳೆಂದು.
ಆಹಾ.. ಎಂಥ ಮಧುರ ಯಾತನೆ, ಕೊಲ್ಲು ಹುಡುಗಿ ಒಮ್ಮೆ ನನ್ನಾ ಹಾಗೆ ಸುಮ್ಮನೆ……
ಸುರಿಯುವ ಸೋನೆಯು, ಸೂಸಿದೆ ನಿನ್ನದೆ ಪರಿಮಳ.
ಇನ್ಯಾರ ಕನಸಿಗೂ, ನೀನು ಹೋದರೆ ತಳಮಳ.
ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ.
ನಾ ಖೈದಿ ನೀನೇ ಸೆರೆಮನೆ
ತಪ್ಪಿ ನನ್ನ ಅಪಿÀ್ಪಕೊ ಒಮ್ಮೆ ಹಾಗೇ ಸುಮ್ಮನೆ…….
ಈ ಹಾಡು ಕೇಳದವರುಂಟೇನೆ?
ಸ್ವಪ್ನ ಸುಂದರಿ.
ನಾನು ಆಗತಾನೇ ಪತ್ರಿಕೋದ್ಯಮಕ್ಕೆ ಎಂಟ್ರಿಹೊಡೆದಿದ್ದೆ. ಜಯಂತರ ಮಾತು, ಕಥೆ – ಕವಿತೆಗಳೆಂದರೆ….. ನನಗೆ ಕುತೂಹಲ, ಪ್ರೀತಿ- ಸೆಳೆತ, ಅಸಂಖ್ಯ ಅಭಿಮಾನಿಗಳಂತೆ ನಾನೂ ಜಯಂತರನ್ನು ಪರಿಚಯಿಸಿಕೊಂಡೆ. ಸಭÉ ಸಮಾರಂಭದಲ್ಲಿ ಹೀಗೇ ಸಿಕ್ಕು ಹಾಗೇ (ಮಾಯವಾಗಿದೆ…. ಮನಸು ಹಾಗೆ ಸು..ಮ್ಮನೆ!) ಮರೆಯಾಗುತ್ತಿದ್ದ ಜಯಂತ್ ಈ ಟಿ.ವಿಯ ನನ್ನ ವರದಿಗಳನ್ನು ಗಮನಿಸಿದ್ದರು, ನಮ್ಮ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷರಾದ ರೋಹಿದಾಸ ನಾಯಕ, ಜಯಂತಣ್ಣ ಸೇರಿದಂತೆ ಬಹುತೇಕ ನನ್ನ ಹಿರಿಯ ಮಿತ್ರರಿಗೆ ಈ ಟಿ,ವಿಯೇ ನನ್ನನ್ನು ಪರಿಚಯಿಸಿದ್ದು.
ನಮ್ಮ ಪತ್ರಿಕೋದ್ಯಮದ ಆರಂಭಿಕ ಆಸಕ್ತಿಯ ದಿನಗಳಲ್ಲೇ ಗೌರೀಶ್ ಕಾಯ್ಕಿಣಿ, ಆರ್, ವಿ ಭಂಡಾರಿ, ಬಿ.ವಿ ನಾಯಕರೆಲ್ಲಾಕಾಲವಾದರು. ಈ ಎಲ್ಲರÀ ಬಗ್ಗೆ ಜಯಂತರಿಂದ ಕೇಳಿದೆ. ಅವರ ಕಥೆ- ಅಂಕಣ ಬರಹಗಳನ್ನು ಓದಿದೆ, ಅವರ ನಿರೂಪಣೆ-ಸಂದರ್ಶನಗಳ ಕಾರ್ಯಕ್ರಮಗಳನ್ನೆಲ್ಲಾ ನೋಡಿದೆ, ಜಯಂತ್ ಎಲ್ಲಾ ಕಡೆ ತಾಜಾತಾಜಾ
ನಾನು ಕೂಡಾ ಅವರ ಹಾಡು- ಕಥೆಗಳ ಹುಚ್ಚು ಅಭಿಮಾನಿ.
ಹೊನ್ನಾವರದ ಕಾರ್ಯಕ್ರಮದಲ್ಲಿ ಜಯಂತರಿಗೆ ಅಭಿಮಾನದಿಂದ ‘ಸರ್ ನೀವು 50+ಆದರೆ, ನಿಮ್ಮ ಪ್ರೇಮಗೀತೆ! ಅದ್ಹೇಗೆ ಸಾಧ್ಯ ಸಾರ್? ಎಂದು ಪೆದ್ದುಪೆದ್ದಾಗಿ ಪ್ರಶ್ನಿಸಿದ್ದೆ. ಅದಕ್ಕುತ್ತರಿಸಿದ ಜಯಂತ್ ಯಾರಿಗೂ ಹೇಳ್ಬೇಡ ಎನ್ನುವ ರೀತಿಯಲ್ಲಿ
‘ಪ್ರೇಮ, ಈಗೆಲ್ಲಾ ನೀವು ಅದನ್ನು ಮಾಡೋದು, ನಾವು ಬರಿಯೋದು…. ಕೊರೆಯೋದು’ ಎಂದು ಸಹಜವಾಗಿ ನಕ್ಕಿದ್ದರು.
ಪ್ರೀಯೆ,
ಜಯಂತರ ಅಸಂಖ್ಯ ಹಾಡುಗಳನ್ನು ಕೇಳಿರುವ ನಿನಗೆ ಏನೆನಿಸುತ್ತಿದೆ ಅವರ ಬU.É್ಗ ಮಳೆ ಬರುವ ಹಾಗಿದೆ….! ಈ ಸಂಜೆ ಯಾಕಾಗಿದೆ ಅಂತೂ ಇಂತೂ… ಪ್ರೀತಿ ಬಂತು,,,,,,,,,, !
ಹೀಗೆ ಅವರು ಬರೆದ ಹಾಡುಗಳಲ್ಲೆಲ್ಲಾ ಪ್ರೀತಿಯ ಝಲಕ್, ಪ್ರೇಮಾರಾಧನೆಯ ಸೊಗಸು ವಿಜೃಂಭಿಸುತ್ತದೆ, ಇಂಥ ಜಯಂತರ ಇನ್ನೊಂದು ಹಾಡು ಓದು,(ಕೇಳು)ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೆ ಮಾತೇ ಮರೆವೆನು.
ಕ್ಷಮಿಸು ನೀ ಕಿನ್ನರೀ…. ನುಡಿಸಲೆ ನಿನ್ನನು.
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು.
ನಿನ್ನ ಮನದ ಕವಿತೆ ಸಾಲ
ಪಡೆವ ನಾನು ಸಾಲಗಾರ. ಕನ್ನ ಕೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾg.À
ನನ್ನದೀ ವೇದನೆ, ನಿನಗೆ ನಾ ನೀಡೆನು.
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು.
ಮಿಂಚಾಗಿ ನೀನು ಬರಲು
ನಿಂತಲ್ಲಿಯೇ ಮಳೆಗಾಲ.
ಬೆಚ್ಚಗೆ ನೀ ಜೊತೆಗಿರಲು
ಕೂತಲ್ಲಿಯೇ ಚಳಿಗಾಲ.
ವಿರಹದಾ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ. ಇನ್ನೆಲ್ಲಿ ನನಗೆ ಉಳಿಗಾಲ?
ಕೇಳದ್ಯಾ ಎಂಥಾ ಕಲ್ಪನೆ, ಏನೇನು ಯೋಚನೆ. ಅಕ್ಷರ ವ್ಯವಹಾರದ ನನಗೆ ನಿನ್ನಂಥವರು ಬಹಳ ಜನ ಚಂದಾದಾರರು. ಆದರೆÀ ಚಂದಾ ಬಾಕಿ ನೀಡಲು ಬಂದೇ ಬರುವೆ ಎನ್ನುವ ಭರವಸೆ ನಿನ್ನದು ಮಾತ್ರ ! ನಾನಂತೂ ನೇರ (ಹೃದಯದ) ವರದಿಗಾರ. ನಿನ್ನ ಕಂಡ ಕ್ಷಣದಲ್ಲಂತೂ ಮಾತು-ಕತೆ ಎಲ್ಲವನ್ನೂ ಮರೆಯುತ್ತೇನೆ. ಇಂಥ ನನ್ನ ಅನುಭವಗಳನ್ನು ಜಯಂತ್ ಅದ್ಹೇಗೆ ಗ್ರಹಿಸಿದರೇ?
ಮುಂಗಾರು ಮಳೆಯ ವಿಚಾರದಲ್ಲೂ ಹಾಗೇ ಸುರಿಯುವ ಸೋನೆ ಮಳೆ ನಿನ್ನ ಪರಿಮಳವನ್ನೇ ಸೂಸುತ್ತೆ, ಹಾಗೇ ಪ್ರಪಂಚದಲ್ಲಿ ಅನುಮಾನವಿಲ್ಲದ
ಪ್ರೀತಿಯೇ ಇಲ್ಲವಂತೆ, ನೀನೂ ನನಗೆ ಅನುಮಾನದ ಪ್ರಾಣಿ, ದುಷ್ಟ! ಅಂದೆಲ್ಲಾ ಅದೆಷ್ಟು ಬಾರಿ ಬೈದು ಮುನಿಸಿ ಕೊಂಡಿದ್ದೀಯೋ?
ಕೇಳು, ಸಂಶಯ,ಅನುಮಾನ, ಪ್ರೀತಿಯ ರೋಗಗಳು, ಬಾಧೆಗಳು ಎಂಬುದನ್ನು ನಮ್ಮ ಕವಿ ಹೇಗೆ ಚಿತ್ರಿಸುತ್ತಾರೆ.
ಇನ್ನ್ಯಾರ ಕನಸಿಗೂ ನೀನು ಹೋದರೆ ತಳಮಳ. ಹಣೆಯಲಿ ಬರೆಯದ ನಿನ್ನಯ ಹೆಸರನು ಹೃದಯದಿ ನಾನೇ ಕೊರೆದಿರುವೆ…. ನನ್ನ ಹೆಸರ ಕೂಗೆ ಒಮ್ಮೆ ಹಾಗೆಸುಮ್ಮನೆ…..!
ಜಾನು,
ಜಯಂತಣ್ಣನ ಇನ್ನೊಂದು ಕವನ ಓದು.
ಅಣ್ಣಾ ನೆನಪಿದೆಯೆ ಅಂತ ಕೇಳಬೇಡ ತಾಯೀ ಪದವಿಲ್ಲದಾಗಲೇ ಕದವಿಲ್ಲದಾಗಲೇ ಒಂದಾಗಿದ್ದೇವೆ. ಎಲ್ಲ
ಮೌನ ಅಂದಾಕ್ಷಣ ಮೌನ ಇಲ್ಲ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Pak ಸೇನಾಧಿಕಾರಿಗಳು ಸೇರಿ 40 ಸೈನಿಕರು, 100ಕ್ಕೂ ಹೆಚ್ಚು ಉಗ್ರರ ಹತ್ಯೆ: Operation Sindoor ಬಗ್ಗೆ ಭಾರತದ DGMO ಕ್ಷಣ ಕ್ಷಣದ ಮಾಹಿತಿ!

ಹತ್ಯೆಯಾದ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆ ಎಂದು ಡಿಜಿಎಂಒ ತಿಳಿಸಿದ್ದಾರೆ. ನವದೆಹಲಿ:...

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ ಅಂಥದ್ದೇ ಸಂಭವನೀಯ ದುರಂತದಿಂದ ಸಿದ್ಧಾಪುರ ಬಚಾವಾಗಿದೆ. ಸಿದ್ಧಾಪುರದಿಂದ ಸಾಗರ ಗ್ರಾಮೀಣ ಭಾಗದ ಮೂಲಕ ಹೊನ್ನಾಳಿಗೆ ತೆರಳುವ ಖಾಸಗಿ ಬಸ್‌ ಎಂದಿನಂತೆ ಇಂದು ಕೂಡಾ ಮಧ್ಯಾನ್ಹ ೨.೩೦ ರ ಸುಮಾರಿಗೆ...

Recommended For You

About the Author: Kanneshwar Naik

Leave a Reply

Your email address will not be published. Required fields are marked *