ಮಾಟ,ಮಂತ್ರದ ತಂತ್ರ-

ಇಂದಿನ ಸುದ್ದಿ ವಿಶೇಶ-
ಅಣ್ಣಾಮಲೈ ರಾಜೀನಾಮೆ, ಬ.ಜೆ.ಪಿ. ಜಿಲ್ಲಾಧ್ಯಕ್ಷರ ವಾರ್ಡ್‍ನಲ್ಲಿ ಮಾಟ,ಮಂತ್ರದ ತಂತ್ರ! ನಾಳೆ ಸಂತೆ ಇಲ್ಲ.
ಅಣ್ಣಾ ರಾಜೀನಾಮೆ- ಕರ್ನಾಟಕದ ಕಡಕ್ ಪೊಲೀಸ್ ಅಧಿಕಾರಿ ತಮಿಳುನಾಡಿನ ಅಣ್ಣಾಮಲೈ ರಾಜಕೀಯ ಪಕ್ಷ ಸೇರಿ ಜನಸೇವೆ ಮಾಡುವ ಉದ್ಧೇಶದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ಬಿ.ಜೆ.ಪಿ.ಆಹ್ವಾನ ತಿರಸ್ಕರಿಸಿರುವ ರಿಯಲ್ ಸಿಂಗಂ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ರಾಜಕೀಯ ಶೈಲಿ ಇಷ್ಟಪಟ್ಟಿದ್ದು, ತನ್ನ ಪ್ರಾಮಾಣಿಕ ಸೇವೆಗೆ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸಹಕಾರ ಕಾರಣ ಎಂದ ಅವರು ತನ್ನ ಪ್ರಾಮಾಣಿಕ ಸೇವೆ ಗುರುತಿಸಿದ ಕನ್ನಡಿಗರು ನನ್ನ ಅಭಿಮಾನದ ಜನರು ಎಂದಿದ್ದಾರೆ.
ತಮಿಳುನಾಡಿನ ಡಿ.ಎಂ.ಕೆ. ಪಕ್ಷದಿಂದ ರಾಜಕಾರಣ ಪ್ರಾರಂಭಿಸುವ ಸುಳಿವು ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಮನೆಮಾತಾಗಿದ್ದ ದಿಟ್ಟ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ವಿಶ್ರಾಂತಿ ನಂತರ ಜನಸೇವೆಗಾಗಿ ಬದುಕು ಮುಡಿಪಿಡುವುದಾಗಿ ನಿರ್ಧರಿಸಿರುವ ದಿಟ್ಟತನದ ತೀರ್ಮಾನದ ಬಗ್ಗೆ ಹೇಳಿಕೊಂಡಿದ್ದಾರೆ.
ಬದುಕಿನ ಕಠಿಣ ತೀರ್ಮಾನದ ನಂತರ ನಾನೊಬ್ಬ ಮತ್ತೆ ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ನನ್ನ ಮಗನಿಗೆ ಒಬ್ಬ ಒಳ್ಳೆಯ ತಂದೆಯಾಗುವ ಅವಕಾಶ ನನ್ನೆದುರಿಗಿದೆ. ಪತ್ನಿ, ಮಕ್ಕಳು ನನ್ನ ನಿರ್ಧಾರ ಬೆಂಬಲಿಸುತ್ತಾರೆ. ಮರಳಿ ಗ್ರಾಮಕ್ಕೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳಲಿದ್ದೇನೆ. ನನ್ನ ಪ್ರಾಮಾಣಿಕಸೇವೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಮಾಟ,ಮಂತ್ರದ ತಂತ್ರ-
ಉತ್ತರ ಕನ್ನಡ ಜಿಲ್ಲೆಯ ಬಿ.ಜೆ.ಪಿ. ಅಧ್ಯಕ್ಷರು ಸ್ಫರ್ಧಿಸಿರುವ ಪಟ್ಟಣ ಪಂಚಾಯತ್ ಚುನಾವಣೆಯ ಸಿದ್ದಾಪುರ ಪ.ಪಂ. ನ 11 ನೇ ವಾರ್ಡ್‍ನಲ್ಲಿ ಪ್ರತ್ಯೇಕ ಮೂರ್ನಾಲ್ಕು ಕಡೆ ಲಿಂಬು,ಕುಂಕುಮ ಎಸೆದು ವಾಮಾಚಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಕೊಂಡ್ಲಿ,ಹಾಳದಕಟ್ಟಾ ಭಾಗದ ಈ ವಾರ್ಡ್‍ನಲ್ಲಿ ನಾಲ್ಕು ಜನ ಸ್ಫರ್ಧಿಗಳಿದ್ದಾರೆ. ಅವರಲ್ಲಿ ಉತ್ತರಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಒಬ್ಬರಾದರೆ, ಉಳಿದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮತ್ತು ಇನ್ನೊಬ್ಬರು ಜಾತ್ಯಾತೀತ ಜನತಾದಳದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಮಲಾಕರ.
ಹೀಗಿರುವ ಕ್ಷೇತ್ರಕ್ಕೆ ಮೇ,29 ರಂದು ಚುನಾವಣೆ ನಡೆಯುತ್ತಿದೆ. ಮೇ 27 ರ ರಾತ್ರಿ ಈ ವಾರ್ಡ್‍ನ ಮೂರ್ನಾಲ್ಕು ಕಡೆ ಲಿಂಬು ಮತ್ತು ಕುಂಕುಮ ಚೆಲ್ಲಿದ್ದು, ಇದು ಚುನಾವಣಾ ಗೆಲುವಿಗಾಗಿ ಮಾಡಿದ ವಾಮಾಚಾರ ಎನ್ನುವ ಶಂಕೆಗೆ ಆಸ್ಫದವಾಗಿದೆ.
ವಿಚಿತ್ರವೆಂದರೆ ಈ ಮಾಟ,ಮಂತ್ರ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕರ ಗೆಲುವು ತಡೆಯಲು ನಡೆಸಿದ ಪ್ರಯತ್ನ ಇದನ್ನು ತೆಗೆಯಲು ಸಾಧ್ಯ ಎಂದು ವೈದಿಕರೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಅದೆಲ್ಲಾ ಸುಮ್ನೆ, ಜನರ ಒಲುವು ಗಳಿಸಿ ಗೆಲ್ಲಬೇಕೆ ಹೊರತು, ಈ ಮಾಟ, ಮಂತ್ರ,ತಂತ್ರಗಳಿಂದ ಅಲ್ಲ. ಆ ಬಗ್ಗೆ ತನಗೆ ನಂಬಿಕೆಯೂ ಇಲ್ಲ ಎಂದಿದ್ದಾರೆ.
ನಾಳೆ ಸಂತೆ ಇಲ್ಲ-
ಸಿದ್ಧಾಪುರ ತಾಲೂಕಿನ ವಾರದ ಸಂತೆ ಬುಧವಾರ ನಡೆಯುವುದು ವಾಡಿಕೆ. ಆದರೆ ನಾಳೆ ಬುಧವಾರ ಪಟ್ಟಣಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರದ ವಾರದ ಸಂತೆ ನಡೆಯುತ್ತಿಲ್ಲ. ಮೇ 29 ರ ಬುಧವಾರ ನಡೆಯಬೇಕಿದ್ದ ವಾರದಸಂತೆ ಕಳೆದ ಸೋಮುವಾರ ನಡೆದಿದೆ. ಪೂರ್ವಸೂಚನೆ ನಡುವೆ ಕೂಡಾ ನಿನ್ನೆಯ ಸೋಮುವಾರದ ವಿಶೇಶ ಸಂತೆ ಸಪ್ಪೆಯಾಗಿ ನಡೆದಿದ್ದು ಸಾರ್ವಜನಿಕರು ಬುಧವಾರದ ಸಂತೆಗೆ ಹೊಂದಿಕೊಂಡ ಪರಿಣಾಮ ಇದು ಎನ್ನಬಹುದಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *