ಸಾಮಾನ್ಯ ಮನುಷ್ಯನಿಂದ ಪವರ್ ಟಿ.ವಿ. ವರೆಗೆ….. ಏನು ನಡೆಯುತ್ತಿದೆ.

ಸುಮಾರು ಒಂದೂವರೆ ವರ್ಷ, ಅದಕ್ಕಿಂತ ಹಿಂದೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕಿಂತ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಲೆಲ್ಲಾ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತಿತ್ತು, ಚರ್ಚೆ ನಡೆಯುತಿತ್ತು ಇಂದಿರಾ ಕ್ಯಾಂಟೀನ್ ಯಾಕೆ? ಬಡವರಿಗೆ ಅಕ್ಕಿ, ಹಾಲು, ಮೊಟ್ಟೆ, ಸಬ್ಸಿಡಿ ಎಲ್ಲವೂ ಯಾಕೆ ಎಂದು ಪರಿವಾರದ ಜನ ಪ್ರಶ್ನಿಸುತಿದ್ದರು. ಹಾಲು, ಮೊಟ್ಟೆ, ಅಕ್ಕಿ ಫಲಾನುಭವಿಗಳಿಗೆ ಕೂಡಾ ಅಂದಿನ ಸರ್ಕಾರ, ಮುಖ್ಯಮಂತ್ರಿ, ವ್ಯವಸ್ಥೆ ಬಗ್ಗೆ ಖಾರವಾಗಿ ಮಾತನಾಡುವಂತೆ ಉತ್ತೇಜಿಸಲಾಗುತಿತ್ತು. ಮುಂದೆ 2019 ರ ಮೊದಲು ಅನೇಕ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಲಾಯಿತು. ಆ ಅವಧಿಯಲ್ಲಿ ಸರ್ಕಾರಕ್ಕಾಗಿ ಪ್ರಯತ್ನಿಸಿದ ಪ್ರಮುಖರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರಮುಖರು. ಈ ವಿಜಯೇಂದ್ರ ಶಾಸಕರೋ? ಮಂತ್ರಿಯೋ? ಸರ್ಕಾರದ , ಪ್ರಜಾಪ್ರಭುತ್ವ ವ್ಯವಸ್ಥೆಯ ಯಾವ ಸ್ಥಾನ-ಮಾನದಲ್ಲಿದ್ದಾರೋ ತಿಳಿದಿಲ್ಲ. ಆದರೆ ಪ್ರತಿದಿನದ ವಿದ್ಯಮಾನದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ.

ಇಂಥ ಬೇನಾಮಿ, ಅತಿಪ್ರಮುಖ ವ್ಯಕ್ತಿಗಳು ಎಸ್.ಎಂ. ಕೃಷ್ಣ, ದೇವೇಗೌಡ, ಬಂಗಾರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ, ರಾಮಕೃಷ್ಣ ಹೆಗಡೆ ಇವರೆಲ್ಲಾ ಮುಖ್ದಯಮಂತ್ರಿಗಳಿದ್ದಾಗಲೂ ಇರುತಿದ್ದರೊ? ಇದ್ದರೊ ಬಹುಶ: ಯಾರಿಗೂ ಗೊತ್ತಿಲ್ಲ. ಆದರೆ ಸ್ವಯಂ ಘೋಷಿತ ರಾಷ್ರೀಯವಾದಿಗಳೂ, ದೇಶಭಕ್ತರೂ, ಹಿಂದುತ್ವವಾದಿಗಳೂ ಆಗಿರುವ ಬಿ.ಜೆ.ಪಿ. ಆಡಳಿತದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಅವರ ಮಗ ವಿಜಯೇಂದ್ರ ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಮಾತನಾಡುತ್ತಾರೆ. ಸಂಬರಗಿಯಂಥ ಯಡಿಯೂರಪ್ಪ ಪಾಳಯದ ವ್ಯಕ್ತಿಗಳು ಸರ್ಕಾರದ ಒಳ ಹೊರಗೆಲ್ಲಾ ವ್ಯವಹರಿಸುತ್ತಾರೆ. ಈ ವಿದ್ಯಮಾನ ನಡೆಯುತ್ತಿರುವಂತೆಯೇ ವಿಜಯೇಂದ್ರನವರ ಮೇಲೆ ಐದು ಸಾವಿರ ಕೋಟಿಯ ಆರೋಪ ಕೇಳಿ ಬರುತ್ತದೆ.

ನಂತರ ದಿಢೀರಾಗಿ ಸುದ್ದಿಯಾದ ಗಾಂಜಾ-ಡ್ರಗ್ಸ್ ವ್ಯವಹಾರದಲ್ಲಿ ಇದೇ ವಿಜಯೇಂದ್ರರ ಆಪ್ತರೆನ್ನುವ ಸಂಬರಗಿ, ಇಂದ್ರಜಿತ್ ರಂಥವರೆಲ್ಲಾ ಸುದ್ದಿಯ ಕೇಂದ್ರ ಬಿಂದುವಾಗುತ್ತಾರೆ. ಇದನ್ನೆಲ್ಲಾ ಬಹಿರಂಗಮಾಡುತಿದ್ದ ಪವರ್ ಟಿ.ವಿ. ಪ್ರಸಾರ ನಿಲ್ಲಿಸಲಾಗುತ್ತದೆ. ವಾಸ್ತವದಲ್ಲಿ ವಿಜಯೇಂದ್ರ ಯಡಿಯೂರಪ್ಪ ಶಕ್ತಿವಂತರು, ಇವರನ್ನು ಬೆಂಬಲಿಸುವ ಪರಿವಾರ ರಾಷ್ಟ್ರೀಯವಾದಿಗಳು, ದೇಶಭಕ್ತರು! ಇವರ ಬೆಂಬಲಕ್ಕೆ ಎಂದಿನಂತೆ ಮಾಧ್ಯಮಸಮೂಹ. ಇಂಥ ವ್ಯವಸ್ಥೆಯನ್ನು ರಾಮರಾಜ್ಯ,ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಇಂಥದ್ದೊಂದು ಫ್ಯಾಸಿಸ್ಟ್ ವ್ಯವಸ್ಥೆ ರೂಪಿಸಲು ಪ್ರಯತ್ನಿಸುತ್ತಿರುವ ಪರಿವಾರದ ಜನ ಸದಾ ಕಾಂಗ್ರೆಸ್, ನೆಹರೂ ವಿರೋಧ ಮಾಡುತ್ತಾ ಇರುತ್ತಾರೆ. ಇವರೆಲ್ಲರಿಗೆ ನಾಯಕ ಪ್ರಧಾನಿ ನರೇಂದ್ರಮೋದಿ.

ಈಗ ಜನ ಈ ವಿದ್ಯಮಾನವನ್ನೂ ಸೇರಿ ಕೃಷಿ ಉತ್ಫನ್ನ ಮಾರುಕಟ್ಟೆ ನಿಯಮ ತಿದ್ದುಪಡಿ ಯಾಕೆ? ಭೂಸುಧಾರಣೆ ಮಸೂದೆ ತಿದ್ದುಪಡಿ ರೈತರಿಗೆ ಹೇಗೆ ಪೂರಕ. ಕಾರ್ಮಿಕ ಕಾನೂನುಗಳ ತಿದ್ದುಪಡಿ ಯಾಕೆ ಬೇಕು? ಮುಂದುವರಿದು ಸರ್ಕಾರ, ಆಡಳಿತ ನಿಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ ಎಂದು ಪವರ್ ಟಿ.ವಿ. ಪ್ರಸಾರ ನಿಲ್ಲಿಸಿದರಲ್ಲ ಕರೋನಾ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ಕೇಳದ ಆಸ್ಫತ್ರೆಗಳನ್ನೂ ನಿಲ್ಲಿಸಿಬಿಡಿ ನಂತರ ರೇಷನ್,ಪೆಟ್ರೋಲ್ ಎಲ್ಲಾ… ಕಡೆಗೆ ರಾಮನ ರಾಮಾಯಣ, ಮಹಾಭಾರತ ಕಾಲದಲ್ಲಿ ಇವೆಲ್ಲಾ ಇತ್ತೆ? ಎಂದು ಕೇಳಿ.

ಅಂದಹಾಗೆ ಬಿ.ಜೆ.ಪಿ. ಒಳಜಗಳದಿಂದಾಗಿ, ಯಡಿಯೂರಪ್ಪ ಮತ್ತವರ ಕುಟುಂಬವನ್ನು ನಿಯಂತ್ರಿಸುವ ಕಾರಣಕ್ಕಾಗಿ ಬಿ.ಜೆ.ಪಿ.ಯ ಸನಾತನವಾದಿ ವಲಸೆ ಆರ್ಯರ ಗುಂಪು ಇಂಥ ಆಟಗಳನ್ನೆಲ್ಲಾ ಆಡುತ್ತಿದೆಯಾ? ಇಂಥ ಅನೇಕ ಸಂಕಟದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕನಿಷ್ಟ ಒಂದು ವರ್ಷದಿಂದ ಕಳೆಯುತ್ತಿರುವ ದುರ್ದಿನಗಳನ್ನು ವಿರೋಧಿಸುತ್ತಾ ಇಂಥ ಅವ್ಯವಸ್ಥೆಯ ಅಚ್ಚೆದಿನ, ರಾಮರಾಜ್ಯ ಭಾರತಕ್ಕೆ, ಕರ್ನಾಟಕಕ್ಕೆ ಬೇಕಿತ್ತಾ? ಎಂದು ಪ್ರಶ್ನಿಸುತ್ತಾ ಹೌದೆಂದಾದರೆ….. ತಾಲೂಕಾ ಮಟ್ಟದ ಅವ್ಯವಸ್ಥಿತ ಆಸ್ಫತ್ರೆ, ಬಸ್ ನಿಲ್ಧಾಣಗಳಿಂದ ಪ್ರಾರಂಭವಾಗಿ ಬೆಂಗಳೂರು, ದೆಹಲಿಯ ಶಕ್ತಿ ಕೇಂದ್ರಗಳು ಅಲ್ಲಿಯ 10 ಜನಪಥ್ ಗಳು ಎಲ್ಲವೂ ಸರಿ ಯಾಕೆಂದರೆ ಇಂಥ ವ್ಯವಸ್ಥೆಯನ್ನು ಶತಮಾನಗಳಷ್ಟು ಹಿಂದೆ ನೀಷೆ, ಬ್ರೆಕ್ಟ್ ಸೇರಿದಂತೆ ಅನೇಕ ಸಾಹಿತಿಗಳು, ಕವಿಗಳು ಪ್ರಶ್ನಿಸಿದ್ದರು. ಅಂದಹಾಗೆ ಈ ವ್ಯವಸ್ಥೆಯನ್ನೂ ಉಪಾಯದಿಂದ ಸಮರ್ಥಿಸುತ್ತಾ ಮತ್ತೆ ಇವರೇ ಧರ್ಮವಂತರು, ದೇಶಪ್ರೇಮಿಗಳು, ರಾಷ್ಟ್ರೀಯವಾದಿಗಳೆಂದು ಪ್ರಚಾರ ಕೊಡುವವರು ಅಂಥವರನ್ನು ಬೆಂಬಲಿಸುವವರನ್ನು ಜನ ಎಲ್ಲಿಡಬೇಕು? ಎಂಥಾ ಗೌರವ ಕೊಡಬೇಕು ಎನ್ನುವುದನ್ನು ಮತಗಳಿಂದ ನಿರ್ಧರಿಸಬೇಕು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *