

ಸಮಾಜಮುಖಿ ತಂಡಕ್ಕೆ ಬನವಾಸಿಯ ಇತಿಹಾಸ ದರ್ಶನ
ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು. ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ಉತ್ತರ ಕನ್ನಡದ ಬನವಾಸಿಗೆ ಶುಕ್ರವಾರ ಭೇಟಿ ನೀಡಿ ಇಲ್ಲಿನ ಕೃಷಿ, ಪರಿಸರ, ಬನವಾಸಿದ ಮಧುಕೇಶ್ವರ ದೇವಾಲಯ ಹಾಗೂ ಇತಿಹಾಸದ ದರ್ಶನ ಪಡೆದುಕೊಂಡಿತು.
ಕನ್ನಡದ ಪ್ರಥಮ ರಾಜಧಾನಿ ಬನವಾಸಿ ಪರಿಸರದಲ್ಲಿ ಮೂರು ದಿನಗಳ ನಡೆದು ನೋಡು ಕರ್ನಾಟಕ ಅಭಿಯಾನದ ಭಾಗವಾಗಿ ನಡಿಗೆಯ ತಂಡಕ್ಕೆ ಇತಿಹಾಸ ತಜ್ಞ ¯ಕ್ಷ್ಮೀಶ ಹೆಗಡೆ ಸೋಂದಾ ಮಾಹಿತಿ ನೀಡಿದರು.
ಬಳಿಕ ತಂಡವು ಗುಡ್ನಾಪುರದ ಬೃಹತ್ ಕೆರೆ, ರಾಣಿ ನಿವಾಸವನ್ನೂ ವೀಕ್ಷಿಸಿ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೂ ಭೇಟಿ ನೀಡಿತು.
ಪತ್ರಕರ್ತ ಚಂದ್ರಕಾಂತ ವಡ್ಡು ಸಂಯೋಜಿಸಿದ ಈ ನಡೆಗೆಯಲ್ಲಿ ರಾಯಚೂರು, ಬೆಂಗಳೂರು, ನಂಜನಗೂಡು, ಮೈಸೂರು ಸೇರಿದಂತೆ ವಿವಿಧೆಡೆಯ ಆಸಕ್ತರ ಜೊತೆ ಸಾಹಿತಿ ಸುಬ್ರಾಯ ಮತ್ತೀಹಳ್ಳಿ, ಗ್ರಾ.ಪಂ. ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣವರ್ ಹಾಗೂ ಇತರರು ಜೊತೆಯಾದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
