ದಾಯಾದಿಯನ್ನೇ ಬರ್ಬರವಾಗಿ ಕೊಂದ ಅಪ್ಪ ಮಗ ನೇರಿದ್ದು ಮುಂಬೈ

ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್
ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ ವಸಂತ ಕೊಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಿದೆ.
ಏಫ್ರಿಲ್ 24 ರಂದು ಮನೆಯಿಂದ ಹೊರಹೋಗಿದ್ದ ಕೃಷಿಕ, ಸಾಹಿತಿ ವಸಂತ ಶಾನಭಾಗ ನಾಪತ್ತೆಯಾಗಿದ್ದಾರೆಂದು ಅವರ ಕುಟುಂಬಸ್ಥರು ಏಫ್ರಿಲ್ 28 ರಂದು ನಾಪತ್ತೆ ದೂರು ದಾಖಲಿಸಿದ್ದರು.
ಇದಾಗಿ ಒಂದು ವಾರ ಕಳೆಯುವುದರೊಳಗಾಗಿ ಇದು ನಾಪತ್ತೆ ಪ್ರಕರಣವಲ್ಲ ಅಪಹರಣ ಎಂದು ಹಿಂದಿನ ದೂರುದಾರರಿಂದಲೇ ಮತ್ತೊಂದು ಪ್ರಕರಣ ದಾಖಲಾಗುತ್ತದೆ.
ಈ ದೂರುಗಳನ್ನು ಅನುಸರಿಸಿ, ತನಿಖೆ ನಡೆಸಿದ ಉತ್ತರಕನ್ನಡ ಪೊಲೀಸರಿಗೆ ಒಂದೊಂದೇ ಹೊಸ ವಿಷಯ ಕಲೆಹಾಕಲು ಮೊಬೈಲ್ ಸಿಗ್ನಲ್ ಟ್ರಾಕಿಂಗ್ ನೆರವಾಗುತ್ತದೆ.
ಈ ತನಿಖೆಯನ್ನಾಧರಿಸಿ ಬೆಂಗಳೂರು ಕನಕಪುರದ ಲೋಕಿ ಬಂಧನಕ್ಕೊಳಗಾಗುತ್ತಾನೆ.
ಆತನನ್ನು ಬಾಯಿಬಿಡಿಸಿದ ಪೊಲೀಸರಿಗೆ ವಸಂತ ಶಾನಭಾಗ ಕೊಲೆಯಲ್ಲಿ ವಸಂತರ ಅಣ್ಣ ಮತ್ತು ಅಣ್ಣನ ಮಗನ ಪಾತ್ರ ಸಾಬೀತಾಗುತ್ತದೆ. ಆದರೆ ಕೊಲೆಗೆ ನೆರವಾದ ಲೋಕಿ ಬಂಧನಕ್ಕೊಳಗಾಗುವ ಮೊದಲೇ ವೆಂಕಟೇಶ್ ಮತ್ತು ವಿನಯ್ ತಲೆಮರೆಸಿಕೊಳ್ಳುತ್ತಾರೆ! ಒಂದೊಂದೇ ಸುಳಿವಿನ ಜಾಡು ಹಿಡಿದ ಪೊಲೀಸರಿಗೆ ಕೊಲೆ ಆರೋಪಿಗಳಾದ ಅಪ್ಪ, ಮಗ ಮೊದಲು ಶಿರಸಿಯಲ್ಲಿದ್ದು, ನಂತರ ಅಲ್ಲಿಂದ ಮುಂಬೈಗೆ ಓಡಿಹೋದ ಸುಳಿವಿ ದೊರೆಯುತ್ತದೆ.
ತಿಂಗಳುಗಟ್ಟಲೆ ಕೊಲೆಗಾರರನ್ನು ಚೇಸ್ ಮಾಡಿದ ಪೊಲೀಸರಿಗೆ ಕಳೆದ ಶನಿವಾರ ಅಪ್ಪ-ಮಗ ಸಿಕ್ಕಿಬೀಳುತ್ತಾರೆ.
ಹೀಗೆ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುವಂತೆ ಕಳ್ಳ ಪೊಲೀಸ್ ಆಟ ಆಡಿಸಿದ ಕೊಲೆಗಾರರು ಮೊದಲು ಮುತ್ತಿಗೆ ಗೋಳಗೋಡಿನಿಂದ ವಸಂತರನ್ನು ಅಪಹರಿಸುತ್ತಾರೆ.ಹೀಗೆ ಲೋಕಿ ಅಲಿಯಾಸ್ ಲೋಕನಾಥನ ನೆರವಿನಿಂದ ಸ್ವಂತ: ದಾಯಾದಿ ವಸಂತರನ್ನು ಏಫ್ರಿಲ್ 24 ರ ಮಧ್ಯಾಹ್ನ 3.30 ರ ಸುಮಾರಿಗೆ ವಾಹನದಲ್ಲಿ ಹೊತ್ತೊಯ್ಯುವ ಮೂವರು ದೊಡ್ಮನೆ ಬಳಿಯ ದಟ್ಟಾರಣ್ಯದಲ್ಲಿ ಚಾಕುವಿನಿಂದ ವಸಂತರ ತಲೆಯನ್ನು ಮುಂಡದಿಂದ ಬೇರ್ಪಡಿಸುತ್ತಾರೆ. ಹೀಗೆ ನುರಿತ ಕೊಲೆಗಾರರಂತೆ ಅಪ್ಪಮಗ ವಸಂತರ ಕೊಲೆಮಾಡಿದ ನಂತರ ಮುಂಡವನ್ನು ಒಂದೆಡೆ ಎಸೆದರೆ, ರುಂಡವನ್ನು ಚಾಕುವಿನೊಂದಿಗೆ ಕೈಚೀಲದಲ್ಲಿ ಹಾಕಿ ಬೇರೆ ಜಾಗದಲ್ಲಿ ಎಸೆಯುತ್ತಾರೆ.
ಇಂಥ ಭೀಕರ ಕೊಲೆಮಾಡಿದ ನಂತರ ಲೋಕಿ ಬೆಂಗಳೂರಿಗೆ ತೆರಳಿ ಹಾಯಾಗಿದ್ದರೆ ವೆಂಕಟೇಶ್ ಮತ್ತು ವಿನಯ ಶಿರಸಿಯ ತಮ್ಮ ಬಾಡಿಗೆ ಮನೆಯಿಂದ ರಾತ್ರೊ ರಾತ್ರಿ ಕಾಲ್ಕೀಳುತ್ತಾರೆ. ಇದಾಗಿ ತಿಂಗಳೊಪ್ಪತ್ತು ಕಳೆದರೂ ಈ ಮೂವರೂ ಪರಸ್ಫರ ಸಂದಿಸುವುದಿಲ್ಲ! ನಂತರ ಉತ್ತರಕನ್ನಡ ಪೊಲೀಸ್ ತಂಡ ಕನಕಪುರದ ಲಕ್ಷ್ಮೀಪುರದ ಲೋಕಿಯನ್ನು ಪತ್ತೆ ಮಾಡಿ ರಿಪೇರಿ ಮಾಡಿದರೂ ಪ್ರಮುಖ ಕೊಲೆಗಾರರಾದ ಅಪ್ಪಮಗ ಪೊಲೀಸರಿಗೆ ಸಿಗುವುದಿಲ್ಲ. ಆನಂತರ ಅಂತೂ ಇಂತೂ ಕೊಲೆಗಾರರನ್ನು ಹುಡುಕಿ ದಸ್ತಗಿರಿ ಮಾಡುವ ಪೊಲೀಸರಿಗೆ ಮೂವರು ಸೆರೆ ಸಿಕ್ಕಂತಾಗಿದೆ.
ಈಗ ಈಮೂವರು ಜುಲೈ 14 ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮನೆಯ ಆಸ್ತಿ, ಅದರ ಮಾರಾಟದ ಹಣದ ತಕರಾರು ಕೊಲೆ ನಂತರ ಕೊಲೆಗಾರರ ಬಂಧನದೊಂದಿಗೆ ಬಹುತೇಕ ಮುಗಿದಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *