ದಾಯಾದಿಯನ್ನೇ ಬರ್ಬರವಾಗಿ ಕೊಂದ ಅಪ್ಪ ಮಗ ನೇರಿದ್ದು ಮುಂಬೈ

ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್
ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ ವಸಂತ ಕೊಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಿದೆ.
ಏಫ್ರಿಲ್ 24 ರಂದು ಮನೆಯಿಂದ ಹೊರಹೋಗಿದ್ದ ಕೃಷಿಕ, ಸಾಹಿತಿ ವಸಂತ ಶಾನಭಾಗ ನಾಪತ್ತೆಯಾಗಿದ್ದಾರೆಂದು ಅವರ ಕುಟುಂಬಸ್ಥರು ಏಫ್ರಿಲ್ 28 ರಂದು ನಾಪತ್ತೆ ದೂರು ದಾಖಲಿಸಿದ್ದರು.
ಇದಾಗಿ ಒಂದು ವಾರ ಕಳೆಯುವುದರೊಳಗಾಗಿ ಇದು ನಾಪತ್ತೆ ಪ್ರಕರಣವಲ್ಲ ಅಪಹರಣ ಎಂದು ಹಿಂದಿನ ದೂರುದಾರರಿಂದಲೇ ಮತ್ತೊಂದು ಪ್ರಕರಣ ದಾಖಲಾಗುತ್ತದೆ.
ಈ ದೂರುಗಳನ್ನು ಅನುಸರಿಸಿ, ತನಿಖೆ ನಡೆಸಿದ ಉತ್ತರಕನ್ನಡ ಪೊಲೀಸರಿಗೆ ಒಂದೊಂದೇ ಹೊಸ ವಿಷಯ ಕಲೆಹಾಕಲು ಮೊಬೈಲ್ ಸಿಗ್ನಲ್ ಟ್ರಾಕಿಂಗ್ ನೆರವಾಗುತ್ತದೆ.
ಈ ತನಿಖೆಯನ್ನಾಧರಿಸಿ ಬೆಂಗಳೂರು ಕನಕಪುರದ ಲೋಕಿ ಬಂಧನಕ್ಕೊಳಗಾಗುತ್ತಾನೆ.
ಆತನನ್ನು ಬಾಯಿಬಿಡಿಸಿದ ಪೊಲೀಸರಿಗೆ ವಸಂತ ಶಾನಭಾಗ ಕೊಲೆಯಲ್ಲಿ ವಸಂತರ ಅಣ್ಣ ಮತ್ತು ಅಣ್ಣನ ಮಗನ ಪಾತ್ರ ಸಾಬೀತಾಗುತ್ತದೆ. ಆದರೆ ಕೊಲೆಗೆ ನೆರವಾದ ಲೋಕಿ ಬಂಧನಕ್ಕೊಳಗಾಗುವ ಮೊದಲೇ ವೆಂಕಟೇಶ್ ಮತ್ತು ವಿನಯ್ ತಲೆಮರೆಸಿಕೊಳ್ಳುತ್ತಾರೆ! ಒಂದೊಂದೇ ಸುಳಿವಿನ ಜಾಡು ಹಿಡಿದ ಪೊಲೀಸರಿಗೆ ಕೊಲೆ ಆರೋಪಿಗಳಾದ ಅಪ್ಪ, ಮಗ ಮೊದಲು ಶಿರಸಿಯಲ್ಲಿದ್ದು, ನಂತರ ಅಲ್ಲಿಂದ ಮುಂಬೈಗೆ ಓಡಿಹೋದ ಸುಳಿವಿ ದೊರೆಯುತ್ತದೆ.
ತಿಂಗಳುಗಟ್ಟಲೆ ಕೊಲೆಗಾರರನ್ನು ಚೇಸ್ ಮಾಡಿದ ಪೊಲೀಸರಿಗೆ ಕಳೆದ ಶನಿವಾರ ಅಪ್ಪ-ಮಗ ಸಿಕ್ಕಿಬೀಳುತ್ತಾರೆ.
ಹೀಗೆ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುವಂತೆ ಕಳ್ಳ ಪೊಲೀಸ್ ಆಟ ಆಡಿಸಿದ ಕೊಲೆಗಾರರು ಮೊದಲು ಮುತ್ತಿಗೆ ಗೋಳಗೋಡಿನಿಂದ ವಸಂತರನ್ನು ಅಪಹರಿಸುತ್ತಾರೆ.ಹೀಗೆ ಲೋಕಿ ಅಲಿಯಾಸ್ ಲೋಕನಾಥನ ನೆರವಿನಿಂದ ಸ್ವಂತ: ದಾಯಾದಿ ವಸಂತರನ್ನು ಏಫ್ರಿಲ್ 24 ರ ಮಧ್ಯಾಹ್ನ 3.30 ರ ಸುಮಾರಿಗೆ ವಾಹನದಲ್ಲಿ ಹೊತ್ತೊಯ್ಯುವ ಮೂವರು ದೊಡ್ಮನೆ ಬಳಿಯ ದಟ್ಟಾರಣ್ಯದಲ್ಲಿ ಚಾಕುವಿನಿಂದ ವಸಂತರ ತಲೆಯನ್ನು ಮುಂಡದಿಂದ ಬೇರ್ಪಡಿಸುತ್ತಾರೆ. ಹೀಗೆ ನುರಿತ ಕೊಲೆಗಾರರಂತೆ ಅಪ್ಪಮಗ ವಸಂತರ ಕೊಲೆಮಾಡಿದ ನಂತರ ಮುಂಡವನ್ನು ಒಂದೆಡೆ ಎಸೆದರೆ, ರುಂಡವನ್ನು ಚಾಕುವಿನೊಂದಿಗೆ ಕೈಚೀಲದಲ್ಲಿ ಹಾಕಿ ಬೇರೆ ಜಾಗದಲ್ಲಿ ಎಸೆಯುತ್ತಾರೆ.
ಇಂಥ ಭೀಕರ ಕೊಲೆಮಾಡಿದ ನಂತರ ಲೋಕಿ ಬೆಂಗಳೂರಿಗೆ ತೆರಳಿ ಹಾಯಾಗಿದ್ದರೆ ವೆಂಕಟೇಶ್ ಮತ್ತು ವಿನಯ ಶಿರಸಿಯ ತಮ್ಮ ಬಾಡಿಗೆ ಮನೆಯಿಂದ ರಾತ್ರೊ ರಾತ್ರಿ ಕಾಲ್ಕೀಳುತ್ತಾರೆ. ಇದಾಗಿ ತಿಂಗಳೊಪ್ಪತ್ತು ಕಳೆದರೂ ಈ ಮೂವರೂ ಪರಸ್ಫರ ಸಂದಿಸುವುದಿಲ್ಲ! ನಂತರ ಉತ್ತರಕನ್ನಡ ಪೊಲೀಸ್ ತಂಡ ಕನಕಪುರದ ಲಕ್ಷ್ಮೀಪುರದ ಲೋಕಿಯನ್ನು ಪತ್ತೆ ಮಾಡಿ ರಿಪೇರಿ ಮಾಡಿದರೂ ಪ್ರಮುಖ ಕೊಲೆಗಾರರಾದ ಅಪ್ಪಮಗ ಪೊಲೀಸರಿಗೆ ಸಿಗುವುದಿಲ್ಲ. ಆನಂತರ ಅಂತೂ ಇಂತೂ ಕೊಲೆಗಾರರನ್ನು ಹುಡುಕಿ ದಸ್ತಗಿರಿ ಮಾಡುವ ಪೊಲೀಸರಿಗೆ ಮೂವರು ಸೆರೆ ಸಿಕ್ಕಂತಾಗಿದೆ.
ಈಗ ಈಮೂವರು ಜುಲೈ 14 ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮನೆಯ ಆಸ್ತಿ, ಅದರ ಮಾರಾಟದ ಹಣದ ತಕರಾರು ಕೊಲೆ ನಂತರ ಕೊಲೆಗಾರರ ಬಂಧನದೊಂದಿಗೆ ಬಹುತೇಕ ಮುಗಿದಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *