ದಾಯಾದಿಯನ್ನೇ ಬರ್ಬರವಾಗಿ ಕೊಂದ ಅಪ್ಪ ಮಗ ನೇರಿದ್ದು ಮುಂಬೈ

ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್
ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ ವಸಂತ ಕೊಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸ್ ವ್ಯವಸ್ಥೆ ಯಶಸ್ವಿಯಾಗಿದೆ.
ಏಫ್ರಿಲ್ 24 ರಂದು ಮನೆಯಿಂದ ಹೊರಹೋಗಿದ್ದ ಕೃಷಿಕ, ಸಾಹಿತಿ ವಸಂತ ಶಾನಭಾಗ ನಾಪತ್ತೆಯಾಗಿದ್ದಾರೆಂದು ಅವರ ಕುಟುಂಬಸ್ಥರು ಏಫ್ರಿಲ್ 28 ರಂದು ನಾಪತ್ತೆ ದೂರು ದಾಖಲಿಸಿದ್ದರು.
ಇದಾಗಿ ಒಂದು ವಾರ ಕಳೆಯುವುದರೊಳಗಾಗಿ ಇದು ನಾಪತ್ತೆ ಪ್ರಕರಣವಲ್ಲ ಅಪಹರಣ ಎಂದು ಹಿಂದಿನ ದೂರುದಾರರಿಂದಲೇ ಮತ್ತೊಂದು ಪ್ರಕರಣ ದಾಖಲಾಗುತ್ತದೆ.
ಈ ದೂರುಗಳನ್ನು ಅನುಸರಿಸಿ, ತನಿಖೆ ನಡೆಸಿದ ಉತ್ತರಕನ್ನಡ ಪೊಲೀಸರಿಗೆ ಒಂದೊಂದೇ ಹೊಸ ವಿಷಯ ಕಲೆಹಾಕಲು ಮೊಬೈಲ್ ಸಿಗ್ನಲ್ ಟ್ರಾಕಿಂಗ್ ನೆರವಾಗುತ್ತದೆ.
ಈ ತನಿಖೆಯನ್ನಾಧರಿಸಿ ಬೆಂಗಳೂರು ಕನಕಪುರದ ಲೋಕಿ ಬಂಧನಕ್ಕೊಳಗಾಗುತ್ತಾನೆ.
ಆತನನ್ನು ಬಾಯಿಬಿಡಿಸಿದ ಪೊಲೀಸರಿಗೆ ವಸಂತ ಶಾನಭಾಗ ಕೊಲೆಯಲ್ಲಿ ವಸಂತರ ಅಣ್ಣ ಮತ್ತು ಅಣ್ಣನ ಮಗನ ಪಾತ್ರ ಸಾಬೀತಾಗುತ್ತದೆ. ಆದರೆ ಕೊಲೆಗೆ ನೆರವಾದ ಲೋಕಿ ಬಂಧನಕ್ಕೊಳಗಾಗುವ ಮೊದಲೇ ವೆಂಕಟೇಶ್ ಮತ್ತು ವಿನಯ್ ತಲೆಮರೆಸಿಕೊಳ್ಳುತ್ತಾರೆ! ಒಂದೊಂದೇ ಸುಳಿವಿನ ಜಾಡು ಹಿಡಿದ ಪೊಲೀಸರಿಗೆ ಕೊಲೆ ಆರೋಪಿಗಳಾದ ಅಪ್ಪ, ಮಗ ಮೊದಲು ಶಿರಸಿಯಲ್ಲಿದ್ದು, ನಂತರ ಅಲ್ಲಿಂದ ಮುಂಬೈಗೆ ಓಡಿಹೋದ ಸುಳಿವಿ ದೊರೆಯುತ್ತದೆ.
ತಿಂಗಳುಗಟ್ಟಲೆ ಕೊಲೆಗಾರರನ್ನು ಚೇಸ್ ಮಾಡಿದ ಪೊಲೀಸರಿಗೆ ಕಳೆದ ಶನಿವಾರ ಅಪ್ಪ-ಮಗ ಸಿಕ್ಕಿಬೀಳುತ್ತಾರೆ.
ಹೀಗೆ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುವಂತೆ ಕಳ್ಳ ಪೊಲೀಸ್ ಆಟ ಆಡಿಸಿದ ಕೊಲೆಗಾರರು ಮೊದಲು ಮುತ್ತಿಗೆ ಗೋಳಗೋಡಿನಿಂದ ವಸಂತರನ್ನು ಅಪಹರಿಸುತ್ತಾರೆ.ಹೀಗೆ ಲೋಕಿ ಅಲಿಯಾಸ್ ಲೋಕನಾಥನ ನೆರವಿನಿಂದ ಸ್ವಂತ: ದಾಯಾದಿ ವಸಂತರನ್ನು ಏಫ್ರಿಲ್ 24 ರ ಮಧ್ಯಾಹ್ನ 3.30 ರ ಸುಮಾರಿಗೆ ವಾಹನದಲ್ಲಿ ಹೊತ್ತೊಯ್ಯುವ ಮೂವರು ದೊಡ್ಮನೆ ಬಳಿಯ ದಟ್ಟಾರಣ್ಯದಲ್ಲಿ ಚಾಕುವಿನಿಂದ ವಸಂತರ ತಲೆಯನ್ನು ಮುಂಡದಿಂದ ಬೇರ್ಪಡಿಸುತ್ತಾರೆ. ಹೀಗೆ ನುರಿತ ಕೊಲೆಗಾರರಂತೆ ಅಪ್ಪಮಗ ವಸಂತರ ಕೊಲೆಮಾಡಿದ ನಂತರ ಮುಂಡವನ್ನು ಒಂದೆಡೆ ಎಸೆದರೆ, ರುಂಡವನ್ನು ಚಾಕುವಿನೊಂದಿಗೆ ಕೈಚೀಲದಲ್ಲಿ ಹಾಕಿ ಬೇರೆ ಜಾಗದಲ್ಲಿ ಎಸೆಯುತ್ತಾರೆ.
ಇಂಥ ಭೀಕರ ಕೊಲೆಮಾಡಿದ ನಂತರ ಲೋಕಿ ಬೆಂಗಳೂರಿಗೆ ತೆರಳಿ ಹಾಯಾಗಿದ್ದರೆ ವೆಂಕಟೇಶ್ ಮತ್ತು ವಿನಯ ಶಿರಸಿಯ ತಮ್ಮ ಬಾಡಿಗೆ ಮನೆಯಿಂದ ರಾತ್ರೊ ರಾತ್ರಿ ಕಾಲ್ಕೀಳುತ್ತಾರೆ. ಇದಾಗಿ ತಿಂಗಳೊಪ್ಪತ್ತು ಕಳೆದರೂ ಈ ಮೂವರೂ ಪರಸ್ಫರ ಸಂದಿಸುವುದಿಲ್ಲ! ನಂತರ ಉತ್ತರಕನ್ನಡ ಪೊಲೀಸ್ ತಂಡ ಕನಕಪುರದ ಲಕ್ಷ್ಮೀಪುರದ ಲೋಕಿಯನ್ನು ಪತ್ತೆ ಮಾಡಿ ರಿಪೇರಿ ಮಾಡಿದರೂ ಪ್ರಮುಖ ಕೊಲೆಗಾರರಾದ ಅಪ್ಪಮಗ ಪೊಲೀಸರಿಗೆ ಸಿಗುವುದಿಲ್ಲ. ಆನಂತರ ಅಂತೂ ಇಂತೂ ಕೊಲೆಗಾರರನ್ನು ಹುಡುಕಿ ದಸ್ತಗಿರಿ ಮಾಡುವ ಪೊಲೀಸರಿಗೆ ಮೂವರು ಸೆರೆ ಸಿಕ್ಕಂತಾಗಿದೆ.
ಈಗ ಈಮೂವರು ಜುಲೈ 14 ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮನೆಯ ಆಸ್ತಿ, ಅದರ ಮಾರಾಟದ ಹಣದ ತಕರಾರು ಕೊಲೆ ನಂತರ ಕೊಲೆಗಾರರ ಬಂಧನದೊಂದಿಗೆ ಬಹುತೇಕ ಮುಗಿದಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *