ತಂಬಾಕು ಸೇವನೆ,ಮಾರಾಟ ಅಪರಾಧ, ಫಲಕ ಪ್ರದರ್ಶನಕ್ಕೆ ಸೂಚನೆ

ತಂಬಾಕು ನಿಷೇಧದ ಅಂಗವಾಗಿ ಅಂಗಡಿ ಮಾಲಕರು ತಂಬಾಕು ಸೇವನೆ ಅಪರಾಧ ಎನ್ನುವ ಬಿಳಿಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಲು ತಾಕೀತು ಮಾಡಲು ಇಂದು ಇಲ್ಲಿಯ ತಹಸಿಲ್ದಾರ ಕಚೇರಿಯಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶದ ಸಭೆ ಸೂಚಿಸಿದೆ.
ತಹಸಿಲ್ದಾರ ಗೀತಾ ಸಿ.ಜಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು, ತಂಬಾಕು ಉತ್ಫನ್ನಗಳನ್ನು ಸಂಗ್ರಹಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ತಿಳುವಳಿಕೆ ನೀಡಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಮಾನ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. 2003 ರ ಕೊಟ್ಪಾ ಕಾಯಿದೆ ಅನುಸಾರ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ತಹಸಿಲ್ದಾರ ಅಧ್ಯಕ್ಷತೆಯ ಈ ಸಭೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿಯ ಪ್ರತಿನಿಧಿಗಳು, ತಾಲೂಕಾ ತಂಬಾಕು ನಿಯಂತ್ರಣ ಕೋಶದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ನಂತರ ನಗರದ ಅಂಗಡಿ, ಹೋಟೆಲ್ ಗಳ ಮೇಲೆ ದಾಳಿ ನಡೆಸಿದ ತಂಡ ಕೆಲವರಿಗೆ ದಂಡ ವಿಧಿಸಿ, ತಿಳುವಳಿಕೆ ನೀಡಿತು. ಸಭೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಾಲಕ್ಷ್ಮಿ ಹೆಗಡೆ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.
ತಹಸಿಲ್ಧಾರ ನೇತೃತ್ವದಲ್ಲಿ ದಾಳಿ-
ಅಶುಚಿತ್ವ, ತಂಬಾಕುಮಾರಾಟ,ಕಾನೂನುಬಾಹೀರ ವಸ್ತುಗಳ ಸಂಗ್ರಹ ಮಾಡಿದವರ ಮೇಲೆ ಕಾನೂನು ಕ್ರಮ
ಸಿದ್ಧಾಪುರ ನಗರದ ಹೋಟೆಲ್,ಗೂಡಂಗಡಿ,ಪೆಟ್ಟಿ ಅಂಗಡಿಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿದ ತಹಸಿಲ್ಧಾರ ಗೀತಾ ಸಿ.ಜಿ. ನೇತೃತ್ವದ ತಂಬಾಕು ನಿಯಂತ್ರಣ ತನಿಖಾ ಕೋಶದ ತಂಡ ಕೆಲವೆಡೆ ತಂಪಾಕು ಉತ್ಫ್‍ನ್ನಗಳು, ಅಕ್ರಮ ಸಂಗ್ರಹಗಳನ್ನು ಪತ್ತೆ ಮಾಡಿ ದಂಡವಿಧಿಸಿದೆ.
ಇಂದು ಬೆಳಿಗ್ಗೆ ತಂಬಾಕು ನಿಯಂತ್ರಣ ತನಿಖಾ ಕೋಶದ ಸಭೆ ನಡೆಯಿತು. ಅಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಂಬಾಕು ನಿಯಂತ್ರಣಾ ತನಿಖಾ ಕೋಶ ಅದರ ಅಧ್ಯಕ್ಷರಾದ ತಹಸಿಲ್ಧಾರ ನೇತೃತ್ವದಲ್ಲಿ ಮಾಡಬಹುದಾದ ಕೆಲಸ, ಕಾನೂನುಕ್ರಮಗಳ ವಿವರ ನೀಡಿದರು.
ಈ ಸಭೆ ಮುಗಿಯುತಿದ್ದಂತೆ ಅದೇ ಅಧಿಕಾರಿಗಳ ತಂಡದೊಂದಿಗೆ ತೆರಳಿದ ತಹಸಿಲ್ಧಾರ ಮತ್ತು ಪ.ಪಂ. ಮುಖ್ಯಾಧಿಕಾರಿಗಳು ಸಾರಿಗೆ ಬಸ್ ನಿಲ್ಧಾಣದಿಂದ ಪ್ರಾರಂಭಿಸಿ ರಾಜ ಮಾರ್ಗದಲ್ಲಿ ಕೆಲವು ಅಂಗಡಿ, ಮುಂಗಟ್ಟುಗಳು ಹೋಟೆಲ್ ಗಳ ತಪಾಸಣೆ ನಡೆಸಿದರು.
ಬಹುತೇಕ ಅಂಗಡಿಗಳಲ್ಲಿ ತಂಬಾಕು ಉತ್ಫನ್ನಗಳ ಸಂಗ್ರಹಣೆ ಬೆಳಕಿಗೆ ಬಂತು. ತಂಬಾಕು ನಿಯಂತ್ರಣ ತನಿಖಾ ಕೋಶದ ಜಿಲ್ಲಾ ಸಲಹೆಗಾರ ಪ್ರೇಮ್ ಕುಮಾರ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು ಕೆಲವು ಅಂಗಡಿಕಾರರಿಗೆ ದಂಡ ವಿಧಿಸಿ,ಎಚ್ಚರಿಕೆ ನೀಡಿದರು. ಇದೇ ಸಮಯದಲ್ಲಿ ನಿರ್ಮಲಾ ಹೋಟೆಲ್ ಮತ್ತು ಅದರ ಎದುರಿಗಿನ ಗೂಡಂಗಡಿಕಾರರು ಶುಚಿತ್ವ ಕಾಪಾಡಿಲ್ಲ ಎಂದು ಅಧಿಕಾರಿಗಳಿಂದ ಎಚ್ಚರಿಕೆಯ ಸಂದೇಶ ಪಡೆದರು.
ನಂತರ ಮಾತನಾಡಿದ ಅಧಿಕಾರಿಗಳು ಅಕ್ರಮ ತಂಬಾಕು ಮಾರಾಟ, ಬಳಕೆ, ಅಶುಚಿತ್ವ ಮಾಡುವವರಿಗೆ ಪ್ರಾರಂಭಿಕವಾಗಿ ಕನಿಷ್ಟ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಮುಂದುವರಿದರೆ ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಪ.ಪಂ. ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಸೇರಿದಂತೆ ಕೆಲವರು ಉಸ್ಥಿತರಿದ್ದರು.

ತಹಸಿಲ್ಧಾರ ನೇತೃತ್ವದಲ್ಲಿ ದಾಳಿ-
ಅಶುಚಿತ್ವ, ತಂಬಾಕುಮಾರಾಟ,ಕಾನೂನುಬಾಹೀರ ವಸ್ತುಗಳ ಸಂಗ್ರಹ ಮಾಡಿದವರ ಮೇಲೆ ಕಾನೂನು ಕ್ರಮ
ಸಿದ್ಧಾಪುರ ನಗರದ ಹೋಟೆಲ್,ಗೂಡಂಗಡಿ,ಪೆಟ್ಟಿ ಅಂಗಡಿಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿದ ತಹಸಿಲ್ಧಾರ ಗೀತಾ ಸಿ.ಜಿ. ನೇತೃತ್ವದ ತಂಬಾಕು ನಿಯಂತ್ರಣ ತನಿಖಾ ಕೋಶದ ತಂಡ ಕೆಲವೆಡೆ ತಂಪಾಕು ಉತ್ಫ್‍ನ್ನಗಳು, ಅಕ್ರಮ ಸಂಗ್ರಹಗಳನ್ನು ಪತ್ತೆ ಮಾಡಿ ದಂಡವಿಧಿಸಿದೆ.
ಇಂದು ಬೆಳಿಗ್ಗೆ ತಂಬಾಕು ನಿಯಂತ್ರಣ ತನಿಖಾ ಕೋಶದ ಸಭೆ ನಡೆಯಿತು. ಅಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಂಬಾಕು ನಿಯಂತ್ರಣಾ ತನಿಖಾ ಕೋಶ ಅದರ ಅಧ್ಯಕ್ಷರಾದ ತಹಸಿಲ್ಧಾರ ನೇತೃತ್ವದಲ್ಲಿ ಮಾಡಬಹುದಾದ ಕೆಲಸ, ಕಾನೂನುಕ್ರಮಗಳ ವಿವರ ನೀಡಿದರು.
ಈ ಸಭೆ ಮುಗಿಯುತಿದ್ದಂತೆ ಅದೇ ಅಧಿಕಾರಿಗಳ ತಂಡದೊಂದಿಗೆ ತೆರಳಿದ ತಹಸಿಲ್ಧಾರ ಮತ್ತು ಪ.ಪಂ. ಮುಖ್ಯಾಧಿಕಾರಿಗಳು ಸಾರಿಗೆ ಬಸ್ ನಿಲ್ಧಾಣದಿಂದ ಪ್ರಾರಂಭಿಸಿ ರಾಜ ಮಾರ್ಗದಲ್ಲಿ ಕೆಲವು ಅಂಗಡಿ, ಮುಂಗಟ್ಟುಗಳು ಹೋಟೆಲ್ ಗಳ ತಪಾಸಣೆ ನಡೆಸಿದರು.
ಬಹುತೇಕ ಅಂಗಡಿಗಳಲ್ಲಿ ತಂಬಾಕು ಉತ್ಫನ್ನಗಳ ಸಂಗ್ರಹಣೆ ಬೆಳಕಿಗೆ ಬಂತು. ತಂಬಾಕು ನಿಯಂತ್ರಣ ತನಿಖಾ ಕೋಶದ ಜಿಲ್ಲಾ ಸಲಹೆಗಾರ ಪ್ರೇಮ್ ಕುಮಾರ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು ಕೆಲವು ಅಂಗಡಿಕಾರರಿಗೆ ದಂಡ ವಿಧಿಸಿ,ಎಚ್ಚರಿಕೆ ನೀಡಿದರು. ಇದೇ ಸಮಯದಲ್ಲಿ ನಿರ್ಮಲಾ ಹೋಟೆಲ್ ಮತ್ತು ಅದರ ಎದುರಿಗಿನ ಗೂಡಂಗಡಿಕಾರರು ಶುಚಿತ್ವ ಕಾಪಾಡಿಲ್ಲ ಎಂದು ಅಧಿಕಾರಿಗಳಿಂದ ಎಚ್ಚರಿಕೆಯ ಸಂದೇಶ ಪಡೆದರು.
ನಂತರ ಮಾತನಾಡಿದ ಅಧಿಕಾರಿಗಳು ಅಕ್ರಮ ತಂಬಾಕು ಮಾರಾಟ, ಬಳಕೆ, ಅಶುಚಿತ್ವ ಮಾಡುವವರಿಗೆ ಪ್ರಾರಂಭಿಕವಾಗಿ ಕನಿಷ್ಟ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಮುಂದುವರಿದರೆ ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಪ.ಪಂ. ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಸೇರಿದಂತೆ ಕೆಲವರು ಉಸ್ಥಿತರಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *