
ಕಡಲ ದಂಡೆಯಲ್ಲಿ
ಅಂಗಾಲುಗಳ ಸೋಕಿದಾಗ
ಸಣ್ಣದೊಂದು ಕಣ್ಣಹನಿ
ಜಾರಿತು ಕೆಳಗೆ ಅತಿ ವೇಗ

ಅಲೆದೆಲೆದು ಬಂದು
ಭೋರ್ಗೆರೆದು ಅಲೆಗಳು
ಎಳೆಎಳೆಯಾಗಿ ಸುರುಳಿ
ಬಿಚ್ಚಿಟ್ಟಿತ್ತು ನಿನ್ನ ನೆನಪುಗಳು
ಆ ಕಡೆಯ ಕಲ್ಲು ಬಂಡೆ
ದಿಟ್ಟಿಸುತ್ತಿತ್ತು ನನ್ನೇ
ನಾ ಮೇಲೆಳದೆ ಮುಳಿಗಿಳಿಯುತ್ತಿದ್ದೆ
ಉಸಿರಾಡಿ ಭಾವಗಳನ್ನೇ
ಮನಸಾರೆ ಬಿಡಿಸಿಟ್ಟ
ಪ್ರೇಮ ಹೆಜ್ಜೆಗಳ ಚಿತ್ರಣ
ಅಳಿಯಲೊಲ್ಲದು ಮಾಡಿದರೂ
ಮರೆಯುವ ನೂರು ಯತ್ನ
ತೋಯ್ದೆದ್ದ ಮರಿ ಮೀನುಗಳು
ಗಿಲಿಗಿಲಿಯಿಕ್ಕಿ ಮಾತಿಗೆಳೆದಿತ್ತು
ಏನಿಲ್ಲದ ಏನೆಲ್ಲಾ ಇರುವ
ಮೌನದ ಪರಿಚಯವಾಗಿ ಹಿಂತಿರುಗಿತ್ತು
ಹೇಳಿ ಹೋಗುವ ಮುನ್ನ
ಮಡುಗಟ್ಟಿ ಮನದಲ್ಲೇ
ಅಳು ಬಂಧಿಯಾಗುವ ಕಲೆ
ಸಿದ್ದಿಸಲು ಕಲಿಸಬೇಕಿತ್ತು ಓ ನಲ್ಲೆ
ಸಪ್ಪೆ ಮೊಗದ ನೋವುಗಳಿಗೆ
ಕಾರಣಗಳ ಕೇಳ ಬಯಸಿ
ಬಂದಿದ್ದವು ಜಲಚರಗಳೆಲ್ಲಾ
ಬೆಂದೋದವು ಬಿಕ್ಕಳಿಕೆಗೆ ಆಗಿ ಬಿಸಿ
ಎದೆಯ ಒಡಲಾ ಕಾವು
ನಲುಗಿಸುವಂತೆ ವಸುಂಧರೆಯ ಮಡಿಲು
ಆವಿಯಾಗಿ ಹರಡಿತು ಆಗಸದಲ್ಲೆಲ್ಲಾ
ನಡುಕದಿಂದ ಕವಿಯಲು ಕತ್ತಲು
ಸಾವಿರ ಸಾವಿರ ದಿನಗಳ
ಸವಿ ಒಲವಾ ಮೆರವಣಿಗೆ
ಕಹಿಯಾಗಿ ತಡೆರಹಿತ ಪಯಣ
ಜೀವಿಸುವಾಸೆ ಇದರಲ್ಲೇ ಹೀಗೆ
*ಬಸವರಾಜ ಕಾಸೆ*
7829141150
pradeepbasu68@gmail.com
ReplyForward |
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
