ಮರೆಯುವ ನೂರು ಯತ್ನ

ಕಡಲ ದಂಡೆಯಲ್ಲಿ
ಅಂಗಾಲುಗಳ ಸೋಕಿದಾಗ
ಸಣ್ಣದೊಂದು ಕಣ್ಣಹನಿ
ಜಾರಿತು ಕೆಳಗೆ ಅತಿ ವೇಗ

ಅಲೆದೆಲೆದು ಬಂದು
ಭೋರ್ಗೆರೆದು ಅಲೆಗಳು
ಎಳೆಎಳೆಯಾಗಿ ಸುರುಳಿ
ಬಿಚ್ಚಿಟ್ಟಿತ್ತು ನಿನ್ನ ನೆನಪುಗಳು

ಆ ಕಡೆಯ ಕಲ್ಲು ಬಂಡೆ
ದಿಟ್ಟಿಸುತ್ತಿತ್ತು ನನ್ನೇ
ನಾ ಮೇಲೆಳದೆ ಮುಳಿಗಿಳಿಯುತ್ತಿದ್ದೆ
ಉಸಿರಾಡಿ ಭಾವಗಳನ್ನೇ

ಮನಸಾರೆ ಬಿಡಿಸಿಟ್ಟ
ಪ್ರೇಮ ಹೆಜ್ಜೆಗಳ ಚಿತ್ರಣ
ಅಳಿಯಲೊಲ್ಲದು ಮಾಡಿದರೂ
ಮರೆಯುವ ನೂರು ಯತ್ನ

ತೋಯ್ದೆದ್ದ ಮರಿ ಮೀನುಗಳು
ಗಿಲಿಗಿಲಿಯಿಕ್ಕಿ ಮಾತಿಗೆಳೆದಿತ್ತು
ಏನಿಲ್ಲದ ಏನೆಲ್ಲಾ ಇರುವ
ಮೌನದ ಪರಿಚಯವಾಗಿ ಹಿಂತಿರುಗಿತ್ತು

ಹೇಳಿ ಹೋಗುವ ಮುನ್ನ
ಮಡುಗಟ್ಟಿ ಮನದಲ್ಲೇ
ಅಳು ಬಂಧಿಯಾಗುವ ಕಲೆ
ಸಿದ್ದಿಸಲು ಕಲಿಸಬೇಕಿತ್ತು ಓ ನಲ್ಲೆ

ಸಪ್ಪೆ ಮೊಗದ ನೋವುಗಳಿಗೆ
ಕಾರಣಗಳ ಕೇಳ ಬಯಸಿ
ಬಂದಿದ್ದವು ಜಲಚರಗಳೆಲ್ಲಾ
ಬೆಂದೋದವು ಬಿಕ್ಕಳಿಕೆಗೆ ಆಗಿ ಬಿಸಿ

ಎದೆಯ ಒಡಲಾ ಕಾವು
ನಲುಗಿಸುವಂತೆ ವಸುಂಧರೆಯ ಮಡಿಲು
ಆವಿಯಾಗಿ ಹರಡಿತು ಆಗಸದಲ್ಲೆಲ್ಲಾ
ನಡುಕದಿಂದ ಕವಿಯಲು ಕತ್ತಲು

ಸಾವಿರ ಸಾವಿರ ದಿನಗಳ
ಸವಿ ಒಲವಾ ಮೆರವಣಿಗೆ
ಕಹಿಯಾಗಿ ತಡೆರಹಿತ ಪಯಣ
ಜೀವಿಸುವಾಸೆ ಇದರಲ್ಲೇ ಹೀಗೆ

*ಬಸವರಾಜ ಕಾಸೆ*
7829141150
pradeepbasu68@gmail.com

ReplyForward

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *