
ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/
ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ//

ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/
ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ//
ರೂಪಾಯಿ ಕಟ್ಟಿನ ಮೇಲೆ ದುಂಡು ಎಸೆದು ಆಟ ಪ್ರತಿ ಬಾರಿ ತಪ್ಪುವ ಗುರಿ/
ಏಕಾಗ್ರತೆಯೆ ಇಲ್ಲ ನನ್ನಲ್ಲಿ ಕಳೆದು ಹೋಗಿರುವೆ ಚಂಚಲದ ನಡುಕದೊಳಗೆ//
ಮೇಲೆ ಕೆಳಗೆ ಸುತ್ತುವ ಚಕ್ರಗಳ ಬಂಡಿ ಎಲ್ಲೂ ಹೊತ್ತು ಒಯ್ಯಲಿಲ್ಲ ನನ್ನ/
ತಲೆ ತಿರುಗಿ ಬಿದ್ದ ಅನುಭವ ಅರ್ಥ ಆಗಲಿಲ್ಲ ಅಲ್ಲಿಯ ಕಿರುಚಾಟದೊಳಗೆ//
ಭಾರವಾದ ಹೃದಯ ಹಾತೊರೆಯುತ್ತಿದೆ ಯಾವುದಕ್ಕೆ ಎನ್ನುವುದೆ ಇನ್ನೂ ಪ್ರಶ್ನೆ/
ಸದ್ದಿಲ್ಲದೆ ಹೊರ ಬಂದಾಗ ಏನೋ ಸಮಾಧಾನ ಒಂದಿಷ್ಟು ನಿರುತ್ಸಾಹದೊಳಗೆ//
*ಬಸವರಾಜ ಕಾಸೆ*
7829141150
pradeepbasu68@gmail.com
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
