ಸದ್ದಾಗದ ಸಂತೆ

ಪಕ್ಕದ ಜನತಾ ಬಜಾರ್ ಭಣಗುಡುತ್ತಿತ್ತು ಸದ್ದು ಗದ್ದಲದ ಸಂತೆಯೊಳಗೆ/
ಮನವೊಂದು ಬಿಕೋ ಎನ್ನುತ್ತಿತ್ತು ಉತ್ಸಾಹ ನೆರೆದಿದ್ದ ಸಂತಸದೊಳಗೆ//

ಎರಡು ಪದಗಳ ಒಂದೇ ತರಹದ ಅರ್ಥ ಬೇರೆ ಬೇರೆ ಭಾವ ಹುದುಗಿದ ಅಂತರಂಗ/
ಬೆಂಬಿಡದ ಒಂಟಿತನ ಬೇಸರ ಕಾಡದು ಬಯಸಿ ಒಂದಾದ ಏಕಾಂತದೊಳಗೆ//

ರೂಪಾಯಿ ಕಟ್ಟಿನ ಮೇಲೆ ದುಂಡು ಎಸೆದು ಆಟ ಪ್ರತಿ ಬಾರಿ ತಪ್ಪುವ ಗುರಿ/
ಏಕಾಗ್ರತೆಯೆ ಇಲ್ಲ ನನ್ನಲ್ಲಿ ಕಳೆದು ಹೋಗಿರುವೆ ಚಂಚಲದ ನಡುಕದೊಳಗೆ//

ಮೇಲೆ ಕೆಳಗೆ ಸುತ್ತುವ ಚಕ್ರಗಳ ಬಂಡಿ ಎಲ್ಲೂ ಹೊತ್ತು ಒಯ್ಯಲಿಲ್ಲ ನನ್ನ/
ತಲೆ ತಿರುಗಿ ಬಿದ್ದ ಅನುಭವ ಅರ್ಥ ಆಗಲಿಲ್ಲ ಅಲ್ಲಿಯ ಕಿರುಚಾಟದೊಳಗೆ//

ಭಾರವಾದ ಹೃದಯ ಹಾತೊರೆಯುತ್ತಿದೆ ಯಾವುದಕ್ಕೆ ಎನ್ನುವುದೆ ಇನ್ನೂ ಪ್ರಶ್ನೆ/
ಸದ್ದಿಲ್ಲದೆ ಹೊರ ಬಂದಾಗ ಏನೋ ಸಮಾಧಾನ ಒಂದಿಷ್ಟು ನಿರುತ್ಸಾಹದೊಳಗೆ//

*ಬಸವರಾಜ ಕಾಸೆ*
7829141150
pr***********@***il.com

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *