ಬೀಳುವ ಮರಗಳಿವೆ ಎಚ್ಚರಿಕೆ!

ಸಿದ್ಧಾಪುರದಲ್ಲಿ
ಭಯಹುಟ್ಟಿಸುತ್ತಿರುವ ಮರಗಳು
ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಹಳೆ ಮರ ಬಿದ್ದು ಮೃತರಾದ ನಂತರ ತಾಲೂಕಿನೆಲ್ಲೆಡೆ ಅಪಾಯದ ಮರಗಳ ಬಗ್ಗೆ ಮಾತು, ಚರ್ಚೆ ಪ್ರಾರಂಭವಾಗಿದೆ. ಕಾಡು,ಜಮೀನು, ಮನೆಗಳ ಸಮೀಪದ ಮರಗಳ ಅಪಾಯಕ್ಕೆ ಆಯಾ ಪ್ರದೇಶ, ಜವಾಬ್ದಾರಿಯ ಜನರೇ ಕಾರಣ. ಆದರೆ, ರಸ್ತೆ ಅಕ್ಕಪಕ್ಕದ ಮರಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಪ್ರದೇಶ,ಸರ್ಕಾರಿ ಕಛೇರಿಗಳ ವ್ಯಾಪ್ತಿಯ ಮರಗಳ ಬಗ್ಗೆ ಸಂಬಂಧಿಸಿದವರೇ ಜವಾಬ್ಧಾರರಾಗಬೇಕಾಗುತ್ತದೆ.
ನಗರದ ನಿರ್ಮಾಣ ಹಂತದ ಮಿನಿವಿಧಾನ ಸೌಧದ ಆವರಣದ ಒಂದು ಮರ, ಹಾಳದಕಟ್ಟಾದ ಅಂಧರಶಾಲೆ ಬಳಿಯ ಹೆಸ್ಕಾಂ ಟಿ.ಸಿ. ಮೇಲೇ ಚಾಚಿರುವ ಮರ. ಹೀಗೆ ನಗರದಲ್ಲಿ ಅನೇಕ ಕಡೆ ಅಪಾಯದ ಮರಗಳಿವೆ ಎಂದು ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಆದರೆ ಅವುಗಳನ್ನು ತೆಗೆಯುವವರ್ಯಾರು? ಈ ಮಳೆಗಾಲದ ಮೊದಲು ಕಂದಾಯ ಇಲಾಖೆ ನೀಡಿದ ಪಟ್ಟಿಯಂತೆ ನಗರದ ಅಪಾಯದ ಮರಗಳನ್ನು ಅರಣ್ಯ ಇಲಾಖೆ ಕಡಿದು ತೆಗೆದಿದೆ. ಆದರೆ ಸರ್ಕಾರಿ ಇಲಾಖೆಗಳ ಆವರಣ, ಪ.ಪಂ. ವ್ಯಾಪ್ತಿಯ ಒಳಗಿರುವ ಅಪಾಯದ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಅನುಮತಿ ಕೇಳಿದರೆ ಕೊಡಬಹುದು ಆದರೆ ಅರಣ್ಯ ಇಲಾಖೆಯೇ ಅವುಗಳನ್ನು ತೆಗೆಯುವುದು ಕಷ್ಟ ಎನ್ನುವುದು ಇಲಾಖೆಯ ಅಭಿಪ್ರಾಯ.
ಸೊರಬ ರಸ್ತೆಯಲ್ಲಿ ಟಿ.ಸಿ. ಮೇಲೆರಗಬಹುದಾದ ಅಂಧರ ಶಾಲೆಯ ಆವರಣದ ಮರ, ಅದಕ್ಕೆ ತಾಕಿಕೊಂಡಿರುವ ವಿದ್ಯುತ್ ಮಾರ್ಗ ಅಲ್ಲಿಯ ವಿದ್ಯಾರ್ಥಿಗಳು, ನೆರೆಹೊರೆಯವರಿಗೆ ಅಪಾಯ ತರುವ ಸಾಧ್ಯತೆ ಹೆಚು.್ಚ ಅದೇ ರಸ್ತೆಯಲ್ಲಿ ಕೆಲವು ಮರಗಳು ರಸ್ತೆಗೆ ವಾಲಿಕೊಂಡಿರುವುದರಿಂದ ಸಾಯಂಕಾಲ ಬೀದಿ ದೀಪ ಕಾಣದ ಸಮಸ್ಯೆ ಇದೆ ಎನ್ನುವುದು ಈ ಭಾಗದ ಸಾಮಾಜಿಕ ಕಾರ್ಯಕರ್ತ ಇಲಿಯಾಸ್ ಶೇಖ್ ಅಭಿಪ್ರಾಯ.
ಹೀಗೆ ನಗರದಲ್ಲಿ ಮತ್ತು ತಾಲೂಕಿನಾದ್ಯಂತ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ನ ವ್ಯಾಪ್ತಿಯಲ್ಲಿ ಅನೇಕ ಮರಗಳು ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತರುವಂತಿವೆ ಎನ್ನುವ ಸಾರ್ವಜನಿಕರು ಅವುಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಹೇಳದೆ ಸಂಬಂಧಿಸಿದವರು ಪರವಾನಗಿ ಪಡೆದು ಮರಗಳನ್ನು ತೆರವು ಮಾಡುವ ಅಗತ್ಯವಂತೂ ಈಗ ಅನಿವಾರ್ಯತೆಯಾಗಿದೆ.
ಮಳೆಗಾಲಪೂರ್ವ ಕಂದಾಯ ಇಲಾಖೆಯ ಮನವಿಯಂತೆ ಅಪಾಯದ ಮರಗಳನ್ನು ಕತ್ತರಿಸಿ ತೆಗೆದಿದ್ದೇವೆ. ಈಗಲೂ ಇಲಾಖೆಯ ಹಿರಿಯ ಅಧಿಕಾರಿಗಳು ತಾಲೂಕಿನಲ್ಲಿರುವ ಅಪಾಯದ ಮರಗಳ ಬಗ್ಗೆ ವರದಿ ಕೇಳಿದ್ದಾರೆ. ನಾನಾ ಇಲಾಖೆಗಳು ತಮ್ಮ ವ್ಯಾಪ್ತಿಯ ಅಪಾಯದ ಮರಗಳ ತೆರವಿಗೆ ಅನುಮತಿ ಪಡೆದು ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
– ಅಜೀಜ್ ಅಹಮದ್
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ಧಾಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *