chits drama-1-(pil) ಕಂಪನಿ ಕಮೀಷನ್ ನೆಪದಲ್ಲಿ ಹೂಡಿಕೆದಾರರಿಗೆ ಮೋಸ, ಜನಸಾಮಾನ್ಯರ ಹಣ ಪೀಕುವ ಚಿಟ್ಸ್ ಗಳಿವೆ ಎಚ್ಚರ

ಸಿದ್ಧಾಪುರ ಸೇರಿದಂತೆ ಉತ್ತರಕನ್ನಡ ಜಿಲ್ಲೆ ರಾಜ್ಯದಾದ್ಯಂತ ಅನೇಕ ಚಿಟ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತವೆ.ಈ ಕಂಪನಿಗಳ ನಿಯಮದ ಪ್ರಕಾರ ಚಿಟ್ಸ್ ಭಾಗಿದಾರ ಕಂಪನಿ ಚಿಟ್ಸ್ನಲ್ಲಿ ಹಣ ತೊಡಗಿಸಬೇಕು. ಹೀಗೆ ತೊಡಗಿಸಿದ ಹಣಕ್ಕೆ ಕಂಪನಿ ಯಾವುದೇ ಭದ್ರತೆ,ಗ್ಯಾರಂಟಿ ನೀಡುವುದಿಲ್ಲ. ಆದರೆ ಚಿಟ್ಸ್ ನ ಹಣ ಪಡೆಯಲು ಭದ್ರತೆಗೆ ಈಗಾಗಲೇ ಹೂಡಿಕೆಮಾಡಿದ ವ್ಯಕ್ತಿ ಸರ್ಕಾರಿ ನೌಕರರು ಅಥವಾ ಹೆಚ್ಚಿನ ಆಸ್ತಿ ಇರುವವರ ಭದ್ರತೆ ಗ್ಯಾರಂಟಿ ಕೊಡಬೇಕು.ಈ ಬಗ್ಗೆ ನಿಮ್ಮಿಂದ ಹೂಡಿಕೆ ಬಯಸುವ ವ್ಯಕ್ತಿಗಳು ಮೊದಲು ಯಾವುದೇ ತಿಳುವಳಿಕೆ ನೀಡುವುದಿಲ್ಲ. ಅನಿವಾರ್ಯವಾಗಿ ಇವರ ನೀರಿ-ರೀತಿ, ನಿಯಮ ಅರಿಯದೆ ಹೂಡಿಕೆಮಾಡುವ ಜನಸಾಮಾನ್ಯ ಭದ್ರತೆ ವಿಚಾರದಲ್ಲಿ, ಸೇವಾಶುಲ್ಕ, ಕಂಪನಿ ಕಮೀಷನ್,ಜಿ.ಎಸ್.ಟಿ. ಎಂದೆಲ್ಲಾ ಹಣ ಪೀಕಿಕೊಂಡು ಉಳಿದಿದ್ದನ್ನು ನಿಮ್ಮ ಖಾತೆಗೆ ಹಾಕಿದಾಗ ಹಾನಿ ಬಗ್ಗೆ ಪ್ರಶ್ನಿಸಲೂ ಅವಕಾಶವಿಲ್ಲ.
ಹೀಗೆ ವ್ಯವಹರಿಸುವ ಚಿಟ್ ಕಂಪನಿಗಳು ತಮ್ಮ ವಿವರಗಳನ್ನು, ರೀತಿ-ನೀತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿರುವುದಿಲ್ಲ. ಇಂಥ ಚಿಟ್ಸ್ ಕಂಪನಿಗಳ ಲಾಭ, ಸುಲಿಗೆಗಳಿಂದಾಗಿ ಸಾವಿರಾರು ಜನರು ಮೋಸಹೋಗಿದ್ದಾರೆ. ಇಂಥ ಕಂಪನಿಗಳು ಮೊದಲು ಪರಿಚಿತರ ಮೂಲಕ ಪ್ರವೇಶ ಪಡೆದು ನಂತರ ಪರಿಚಿತರಿಗೇ ಟೋಪಿ ತೊಡಿಸಿ ಕೆಲವೆಡೆ ಓಡಿಹೋಗಿವೆ. ಕೆಲವು ಓಡಿ ಹೋಗುವ ಸಿದ್ಧತೆಯಲ್ಲಿವೆ. ಹಾಗಾಗಿ ಚಿಟ್ಸ್ ನಲ್ಲಿ ಹೂಡಿಕೆ ಮಾಡಿರುವವರು ಈ ಕಂಪನಿಗಳ ನೀರಿ-ರೀತಿ, ನಿಯಮ, ನಿಬಂಧನೆ ಕೇಳಿ, ಹೊಸದಾಗಿ ಹೂಡಿಕೆ ಮಾಡುವವರು ಇವರ ಬ್ರಟೀಷ್ ಮೋಸದಾಟದ ಬಗ್ಗೆ ಜಾಗೃತೆ ವಹಿಸಿ, ಹೂಡಿಕೆ ಮಾಡಿ.

ನೆನಪಿಡಿ ಹೂಡಿಕೆ ಮಾಡುವಾಗ ಆಪ್ತರು, ಮಿತ್ರರಂತೆ ನಟಿಸಿ ವ್ಯವಹರಿಸುವ ಚಿಟ್ಸ್ ಕಂಪನಿಗಳು ನಂತರ ಕಾನೂನು, ನಿಯಮ, ನಿಮ್ಮ ಒಪ್ಪಿಗೆಯ ಸಹಿ ಎಂದು ಹೊಸ ನಾಟಕ ಶುರುಮಾಡುತ್ತವೆ. ಇಂಥ
ವ್ಯವಸ್ಥಿತ ಮೋಸದಿಂದ ಬಾಧಿತರಾದವರು ಚಿಟ್ಸ್ ಕಂಪನಿಗಳನ್ನು ಮನೆಯೊಳಗೆ ಸೇರಿಸುವುದಿಲ್ಲ.
ಲಾಭಕ್ಕಿಂತ ಮೋಸ, ಸೇವೆ,ಲಾಭದ ಹೆಸರಲ್ಲಿ ಜನಸಾಮಾನ್ಯರಿಗೆ ಮೋಸ ಮಾಡಿ ಕಂಪನಿ ಬೆಳೆಸುವ ಚಿಟ್ಸ್ ಗಳಿಂದ ಬಾಧಿತರಾವರು ನ್ಯಾಯಾಲಯ, ಸಂಘಟಿತ ಹೋರಾಟದ ಮೂಲಕ ಈ ಹಗಲು ದರೋಡೆಯನ್ನು ತಡೆಯಬೇಕಿದೆ. ಇಂಥ ಚಿಟ್ಸ್ ಬಾಧಿತರ ಪರವಾಗಿನ ಹೋರಾಟಕ್ಕೆ ಸಂಘಟನೆಯಾದರೆ ಜನಸಾಮಾನ್ಯರಿಗೆ ನ್ಯಾಯ ದೊರೆಯಬಹುದೇನೊ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *