ಮಳೆ+ಗಾಳಿ=ಹಾನಿ,ಶಾಲಾ-ಕಾಲೇಜುಗಳಿಗೆ ರಜೆ

ಶಾಲಾ-ಕಾಲೇಜುಗಳಿಗೆ ರಜೆ
(ಸಿದ್ಧಾಪುರ,ಆ.05-) ನಿರಂತರ ಮಳೆಯ ಹಿನ್ನೆಲೆಯಲ್ಲಿ ಸಿದ್ಧಾಪುರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಆ.6 ರ ಮಂಗಳವಾರ ರಜೆ ಘೋಶಿಸಿರುವುದಾಗಿ ತಹಸಿಲ್ದಾರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲೆಲ್ಲೂ ನೀರು-
ಸಿದ್ಧಾಪುರ, ಹಾಳದಕಟ್ಟಾ, ಕೊಂಡ್ಲಿ ಭಾಗದಲ್ಲಿ ಅವೈಜ್ಞಾನಿಕ ನಿರ್ಮಾಣಗಳ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ನೀರು ತುಂಬಿ ಜನರು, ವಿದ್ಯಾರ್ಥಿಗಳು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಈ ತೊಂದರೆ ಬಗ್ಗೆ ಪ.ಪಂ. ಆಡಳಿತ ಮತ್ತು ಶಾಸಕರು ಗಮನ(ಹರಿ) ವಹಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
ಮಳೆ+ಗಾಳಿ=ಹಾನಿ
ಕಳೆದ ಎರಡ್ಮೂರು ದಿವಸಗಳಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹಳ್ಳ-ಕೊಳ್ಳ ಗಳೆಲ್ಲಾ ತುಂಬಿ ಹರಿಯುತ್ತಿವೆ. ಜನರು ಕೃಷಿ ಕೆಲಸ ಮಾಡಲು ಹಿಂಜರಿಯುವಂತೆ ಮಳೆ,ಗಾಳಿ ರಭಸ ಹೆಚ್ಚಾಗಿದ್ದು ಜನಜಾನುವಾರುಗಳ ಓಡಾಟಕ್ಕೂ ತೊಂದರೆಯಾಗಿದೆ.
ಶುಕ್ರವಾರ ಶನಿವಾರದ ಅವಧಿಯ ಮಳೆ ಗಾಳಿಗೆ ಕೋಲಶಿರ್ಸಿ ಪಂಚಾಯತ್ ನ ಅವರಗುಪ್ಪಾದ ಈಶ್ವರ ದೇವಾಲಯದ ಕಲ್ಲುಗಳು ಕುಸಿದಿವೆ. ಈ ಈಶ್ವರ ದೇವಾಲಯ ಪುರಾತನ ದೇವಾಲಯವಾಗಿದ್ದು ಗ್ರಾಮಸ್ಥರು ಈ ದೇವಸ್ಥಾನದ ಪುನರ್ ನಿರ್ಮಾಣದ ಬಗ್ಗೆ ಯೋಚಿಸುತ್ತಿದ್ದ ಸಮಯದಲ್ಲೇ ಇದು ಉದುರಿಬೀಳುವಂತೆ ಕಟ್ಟಡದ ಕಲ್ಲು,ಮಣ್ಣು, ಮರಳು ಜರಿಯತೊಡಗಿದೆ.
ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಇಲ್ಲಿಯ ಗ್ರಾಮ ಸಮೀತಿ ಸ್ಥಳಿಯ ಆಡಳಿತವನ್ನು ಆಗ್ರಹಿಸಿದೆ. ರವಿವಾರ ಶಿರಸಿ ರಸ್ತೆಯ 16 ನೇ ಮೈಲ್‍ಕಲ್ ಬಳಿ ಬುಡಮೇಲಾಗಿ ಬಿದ್ದ ಬಿದಿರಿನ ಹಿಂಡು ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತ್ತು. ಸೋಮವಾರ ಬೆಳಿಗ್ಗೆ ರಭಸದ ಮಳೆ-ಗಾಳಿ ಪರಿಣಾಮ ಸಿದ್ಧಾಪುರ ಸಿವಿಲ್ ಕೋರ್ಟ್ ಎದುರಿಗೆ ಮೇ ಫ್ಲವರ್ ಮರವೊಂದು ಬುಡಸಹಿತ ಧರೆಗುರುಳಿದ್ದು ಸಂಬಂಧಿಸಿದವರು ರಸ್ತೆ ತೆರವು ಮಾಡಿಕೊಟ್ಟಿದ್ದಾರೆ.

ಇದೊಂಥರಾ ವಿಶಿಷ್ಟ ನಾಗಪಂಚಮಿ
ವಿಶೇಶಚೇತನರಿಗೆ ಹಾಲು,ಸಿಹಿ ಹಂಚಿ ನಾಗರ ಪಂಚಮಿ ಆಚರಣೆ
ನಿರಂತರ ಮಳೆ, ಮಹಾಪೂರಗಳ ನಡುವೆ ನಾಡಿನಾದ್ಯಂತ ಇಂದು ನಾಗರ ಪಂಚಮಿ ಆಚರಿಸಲಾಯಿತು.
ಬಹುತೇಕ ಕಡೆ ಕಲ್ಲುನಾಗರ, ಮೂರ್ತಿನಾಗರ, ಜೀವಂತನಾಗರ ದೇವರ ಆರಾಧನೆ ನಡೆದರೆ, ಕಾರವಾರದಲ್ಲಿ ನಗರದ ಗಣ್ಯರು ವಿಭಿನ್ನವಾಗಿ ನಾಗರಪಂಚಮಿ ಆಚರಿಸಿದರು.
ಇಲ್ಲಿಯ ಖುರಸಾವಾಡಾ ದಲ್ಲಿರುವ ಆಶಾನಿಕೇತನ ವಿಶೇಶಚೇತನ ಮಕ್ಕಳ ಶಾಲೆಗೆ ತರಳಿ ನಾಗಪಂಚಮಿ ಆಚರಿಸಿದ ಜನಶಕ್ತಿ ಸಂಘಟನೆಯ ಮುಖ್ಯಸ್ಥ ಮಾಧನ ನಾಯ್ಕ ನೇತೃತ್ವದ ತಂಡ ಇಲ್ಲಿಯ ಮಕ್ಕಳಿಗೆ ಸಿಹಿ-ಹಾಲು ವಿತರಿಸಿ, ಊಟ ಬಡಿಸುವ ಮೂಲಕ ನಾಗರಪಂಚಮಿ ಆಚರಿಸಿತು.
ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಕಲ್ಲು, ಕಲ್ಲಿನ ನಾಗರ ಮೂರ್ತಿಗೆ ಹಾಲು ಸುರಿದು ಹಾಳು ಮಾಡುವ ಬದಲು ಇಂಥ ಅಸಹಾಯಕ, ದುರ್ಬಲ ಮಕ್ಕಳು,ಹಿರಿಯರಿಗೆ ಹಾಲು,ಹಣ್ಣು- ಸಿಹಿ ವಿತರಿಸುವ ಮೂಲಕ ನಾಗರ ಪಂಚಮಿ ಆಚರಿಸಿದರೆ ಅದರಿಂದಲೂ ಫಲ ದೊರೆಯುತ್ತದೆ ಎಂದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗ್ರಾಮ ಪಂಚಾಯತ್‌ ಗಳಿಗೆ ಖರ್ಗೆ ನಿರ್ಧೇಶನ ಏನು ಗೊತ್ತೆ?

ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ನಿರ್ದೇಶನ ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಮೇಲ್ಪಾವಣಿಗಳು ಮತ್ತು ಆವರಣಗಳಲ್ಲಿ...

ಅಪಘಾತಕ್ಕೊಳಗಾದ ಹಿರಿಯ ಪತ್ರಕರ್ತ ರಾ. ಸೋಮನಾಥ್‌

ಕನ್ನಡ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ದೊಡ್ಡ ಹೆಸರು ಉತ್ತರ ಕನ್ನಡ ಮೂಲದ ರಾ. ಸೋಮನಾಥ್‌ ಅಪಘಾತಕ್ಕೀಡಾಗಿದ್ದಾರೆ. ನಾಲ್ಕೈದು ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಗಳ ಅಪರಾಧ ಸುದ್ದಿ,...

ವಿಪರೀತ ಮಳೆ ವಾಸ್ತವ್ಯ & ನಿರ್ಮಾಣ ಹಂತದ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿ

ನಿರ್ಮಾಣ ಹಂತದ ಆಶ್ರಯ ಮನೆ ಮತ್ತು ವಾಸ್ತವ್ಯದ ಕಚ್ಚಾ ಮನೆ ಸೇರಿ ಒಂದೇ ಕುಟುಂಬದ ಎರಡೂ ಮನೆಗಳಿಗೆ ಹಾನಿಯಾಗಿರುವ ದುರ್ಘಟನೆ ಸಿದ್ಧಾಪುರ ತಾಲೂಕು ಕಂಸಲೆಯಿಂದ...

ಸುರಿಯುವ ಮಳೆ ಲೆಕ್ಕಿಸದೇ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಜನಸಮೂಹ!

ಕಾಲು ಶತಮಾನ ಒಂದೇ ಶಾಲೆಯಲ್ಲಿ ಸೇವೆಗೆ ಗ್ರಾಮಸ್ಥರ ಪ್ರೀತಿಯೇ ಕಾರಣ- ಉಮೇಶ ನಾಯ್ಕ.ಸಿದ್ದಾಪುರ:ಆದರ್ಶ ಶಿಕ್ಷಕ ಉಮೇಶ‌ ನಾಯ್ಕ 31 ರಂದು ಸೇವಾನಿವೃತ್ತರಾಗಿದ್ದು ಇಂದು ತಾಲೂಕಿನ...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *