ಕಂಬಳಿಗೊಂದು ಕಾಲ ಇದುವೆ ಕೊನೆಗಾಲ!

ಮಲೆನಾಡು, ರೈತ, ಮಳೆ ಕಂಬಳಿಗಳಿಗೆಲ್ಲಾ ಬಾದರಾಯಣ ಸಂಬಂಧಗಳಿವೆ!
ಹಿಂದೊಂದು ಕಾಲವಿತ್ತು ಆಗ ಮಳೆಯೆಂದರೆ ಮಲೆನಾಡು, ಮಲೆನಾಡೆಂದರೆ ಮಳೆಗಾಲ ಎನ್ನುವಂತಿದ್ದ ಕಾಲ.
ಈಗ ಕಾಲ ಬದಲಾಗಿದೆ. ಆದರೂ ಕಂಬಳಿಜೊತೆಗಿನ ನಂಟಿನ ಗಂಟು ಇನ್ನೂ ಸಂಪೂರ್ಣ ಸಡಿಲವಾಗಿಲ್ಲ. ಹಿಂದೆ ಶಾಲಾಮಕ್ಕಳು, ಜನಸಾಮಾನ್ಯರು ಎಲ್ಲದಕ್ಕೂ ಕಂಬಳಿ ಬಳಸುತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಶ್ರಮಿಕರು ಕೆಲಸಕ್ಕೆ ಕಂಬಳಿ, ಕಂಬಳಿ ಕೊಪ್ಪೆ ಬಳಸಿದರೆ ಉಳಿದ ಬಿಳಿಕಾಲರ್ ಮನುಷ್ಯರು ಚಳಿ ತಡೆಯಲು ಕಂಬಳಿಯನ್ನು ಹೊದಿಕೆಯಾಗಿ ಬಳಸುತ್ತಾರೆ.
ಇಂಥ ಕಂಬಳಿ ತಯಾರಿಸುವ, ಕರೆ ಕಟ್ಟುವ, ಮಾರುವ ರೀತಿ-ನೀತಿಗಳೆಲ್ಲಾ ಬದಲಾಗಿದ್ದು ಈಗಿನ ವಿಶೇಶ.
ಹಿಂದೆ ಬಯಲುಸೀಮೆಯ ಜನ ಕಂಬಳಿಯನ್ನು ತಾವೇ ತಯಾರಿಸಿಕೊಂಡು ಮಲೆನಾಡಿಗೆ ಮಾರಾಟಕ್ಕೆ ಬರುತಿದ್ದರು. ಈಗ ಬಯಲುಸೀಮೆಯ ಕಂಬಳಿಮಾಡುವವರ ಕೈಗಳ ಕೆಲಸವನ್ನು ಯಂತ್ರ ಕದ್ದಿದೆ. ಯಂತ್ರದಿಂದ ತಯಾರಾದ ಕಂಬಳಿಗಳನ್ನು ಮಾರುವ ಮಾರುಕಟ್ಟೆಗಳ ರೀತಿ ಕೂಡಾ ಬದಲಾಗಿದೆ.
ಹಿಂದೆ ತಲೆಮೇಲೆ, ಸೈಕಲ್ ಮೇಲೆ ಕಂಬಳಿ ಹೊತ್ತು ಊರೂರು ತಿರುಗುತಿದ್ದವರ ಸಂಖ್ಯೆ ಈಗ ಕುಸಿದಿದೆ. ಅನಿವಾರ್ಯತೆಗೆ ಅದೇ ಕಸುಬು ಮುಂದುವರಿಸುವವರನ್ನು ಬಿಟ್ಟರೆ ಕಂಬಳಿ ಜೊತೆಗಿನ ವೃತ್ತಿ ಪ್ರೀತಿ,ಬದಲಾಗಿದೆ.
ಯಂತ್ರದಿಂದ ತಯಾರಾಗುವ ಹೊಸ ಕಂಬಳಿಗಳು ಮೊದಲಿನ ಮ್ಯಾನ್ ಮೇಡ್ ಕಂಬಳಿಗಳಷ್ಟು ಮಟ್ಟಸವಾಗಿರುವುದಿಲ್ಲ. ಮನುಷ್ಯ ನಿರ್ಮಿತ ಕಂಬಳಿಗಳಿಗೆ ಸಾವಿರ ಮೇಲ್ಪಟ್ಟು ಬೆಲೆಯಾದರೆ ಯಂತ್ರದಿಂದ ತಯಾರಾದ ಕಂಬಳಿಗಳಿಗೆ ಅವುಗಳಿಗಿಂತ ಸ್ಪಲ್ಪ ಕಡಿಮೆ ಬೆಲೆ. ಬಳಕೆ ವಿಚಾರದಲ್ಲಿ ಮನುಷ್ಯ ನಿರ್ಮಿತ ಕಂಬಳಿಗಳಿಗೇ ಹೆಚ್ಚು ಆಯುಷ್ಯ ಎನ್ನುವ ಕಂಬಳಿ ಮಾರುವ ಮಹಿಳೆ ಸಾಗರದ ಕಮಲ ಈಗ ಕಂಬಳಿ ಕಾಲ ಬದಲಾಗಿದೆ. ಮನುಷ್ಯ ತಯಾರಿಸಿದ ಕಂಬಳಿಗಳಿಗೆ ಬೆಲೆ ಹೆಚ್ಚು. ವ್ಯಾಪಾರದ ಸ್ಫರ್ಧೆಯಿಂದಾಗಿ ಮಾರಾಟಮಾಡುವವರು ಯಂತ್ರದಿಂದ ತಯಾರಾದ ಕಂಬಳಿಗಳನ್ನೇ ಮನುಷ್ಯ ನಿರ್ಮಿತ ಕಂಬಳಿಗಳು ಎಂದು ನಂಬಿಸುತ್ತಾರೆ.
ಆದರೆ ನಾವು ಪ್ರತಿವರ್ಷದ ನಿರಂತರ ಸಂಪರ್ಕದಲ್ಲಿರುವ ವ್ಯಾಪಾರಿಗಳು ನಾವು ಸುಳ್ಳು ಹೇಳಿ ಮಾರಾಟ ಮಾಡಲು, ಸುಳ್ಳು ಹೇಳಿ ಮೋಸಮಾಡಿ ಪಾರಾಗಲು ಸಾಧ್ಯವಿಲ್ಲ. ನಂಬಿಕೆಯ ಜೊತೆಗೆ ಪ್ರೀತಿ-ವಿಶ್ವಾಸದ ವ್ಯಾಪಾರ ನಮ್ಮದು ಎನ್ನುತ್ತಾರೆ.
ಕಂಬಳಿ ಮಾರಾಟದ ಜೊತೆಗೆ ನಾಜೂಕಾಗಿ ಕರೆ ಕಟ್ಟುವ ಕೆಲಸ ಮಾಡುವ ಇವರ ಕುಟುಂಬ ಒಂದು ಕಂಬಳಿ ಕರೆ ಕಟ್ಟಲು ಕನಿಷ್ಟ ನೂರರಿಂದ 200 ವರೆಗೆ ಪಡೆಯುತ್ತಾರೆ. ಹೀಗೆ ಮಲೆನಾಡಿನಲ್ಲಿ ಕಂಬಳಿ ಬಳಸುವವರು ಕರೆಕಟ್ಟದ ಕಂಬಳಿ ಬಳಸುವುದು ಕಡಿಮೆ. ಯಾಂತ್ರೀಕೃತ ಕಂಬಳಿಯಾಗಲಿ, ಮಾನವ ನಿರ್ಮಿತ ಕಂಬಳಿಯಾಗಲಿ ಕಂಬಳಿ ಕರೆ ಕಟ್ಟದರೆ ಅದರ ಆಯುಷ್ಯ ಹೆಚ್ಚು. ಕಂಬಳಿ ತಯಾರಿಕೆ, ಮಾರಾಟ, ಕಂಬಳಿ ಕರೆ ಕಟ್ಟುವ ಕಸುಬು ಮಾಡುವವರ ಸಂಖ್ಯೆ ಈಗ ಕ್ಷೀಣಿಸುತ್ತಿದೆ. ಜನರು ಮೊದಲು ಕಂಬಳಿ ಬಿಟ್ಟು ಇತರೆ ಹೊದಿಕೆ, ಸೂಡು ವಸ್ತುಗಳನ್ನು ಬಳಸುತಿದ್ದಿಲ.್ಲ ಈಗ ಕಾಲ ಬದಲಾಗಿದೆ ಕಂಬಳಿಯ ಜಾಗದಲ್ಲಿ ಬೇರೆ ವಸ್ತುಗಳು ಬಂದು ಕುಳಿತಿವೆ ಹಾಗಾಗಿ ಈ ವೃತ್ತಿ ಲಾಭದಾಯಕವಾಗಿಯೂ ಉಳಿದಿಲ್ಲ ಎನ್ನುತ್ತಾರೆ, ಈ ವೃತ್ತಿ ಅವಲಂಬಿತರು.
ಹೀಗೆ ಆಧುನಿಕತೆ ಕಂಬಳಿ, ಮಲೆನಾಡು, ಮಳೆ, ಕರೆಕಟ್ಟುವುದು, ಈ ವೃತ್ತಿಮಾಡುವವರ ನಡುವಿನ ಬಂಧವನ್ನು ಸಡಿಲ ಮಾಡುತ್ತಿದೆ. ಕಾಲ ಎಲ್ಲವನ್ನೂ ಬದಲಿಸುತ್ತಿದೆ. ಕಂಬಳಿ ಮಾಡುವವರು, ಮಾರುವವರ ಬದುಕು, ಭವಿಷ್ಯವನ್ನೂ ಕೂಡಾ.
ಹಾಗಾಗಿ ಮಲೆನಾಡಿನ ಕಂಬಳಿ ಮಾರಾಟಗಾರರು, ಬಳಕೆದಾರರ ನಡುವಿನ ಬಂಧ-ಸಂಬಂಧ ಸಡಿಲವಾಗುತ್ತಿದೆ.ಕಂಬಳಿ ಮರೆಯಾಗುತ್ತಿರುವ ಈ ಕಾಲದಲ್ಲಿ ಕಂಬಳಿಯ ಬೆಚ್ಚಗಿನ ನೆನಪಿಗೆ ಸಲಾಂ ಹೇಳಲೇಬೇಕು.

ಬುಧವಾರ ರಜೆ
ನಿರಂತರ ಮಳೆ,ಗಾಳಿ ಹಿನ್ನೆಲೆಯಲ್ಲಿ ಆ.7 ರ ಬುಧವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಶಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಪ್ರಕಟಣೆ ತಿಳಿಸಿದೆ.
ಈ ವಾರದ ಕೊನೆಗೆ ಮಳೆನಾಡು!
ಈ ವಾರದ ಪ್ರಾರಂಭದಿಂದ ಆರಂಭವಾದ ಮಳೆ ಅಬ್ಬರ ಮಲೆನಾಡಿನ ಜನರನ್ನು ದಿಕ್ಕೆಡಿಸಿದೆ. ಕೊಡಗು, ಚಿಕ್ಕಮಗಳೂರು,ಶೃಂಗೇರಿ, ತೀರ್ಥಹಳ್ಳಿ ಹೊಸನಗರ, ಸಾಗರ ಸಿದ್ಧಾಪುರ,ಶಿರಸಿ,ಯಲ್ಲಾಪುರ,ದಾಂಡೇಲಿ, ಬೆಳಗಾವಿ,ಗೋವಾ ಸೇರಿದಂತೆ ಮಲೆನಾಡು, ಪಶ್ಚಿಮಘಟ್ಟಗಳ ಅಡಿಯಲ್ಲಿ ಈ ವಾರಪೂರ್ತಿ ಮಳೆ ತನ್ನ ರುದ್ರ ನರ್ತನ ನಡೆಸಲಿದೆ. ಆ.8,9, ಕ್ಕೆ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು ಈ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಶಿಸಬೇಕಿದೆ ಎಂದು ಹವಾಮಾನ ಇಲಾಖೆಯ ಉನ್ನತ ಮೂಲಗಳು ವರದಿ ಮಾಡಿವೆ.
ಮಲೆನಾಡು, ಕರಾವಳಿಯ ಜನತೆ ಈ ಸಮಯದಲ್ಲಿ ಎಚ್ಚರದಿಂದಿರಲು, ತಾಲೂಕು ಮತ್ತು ಜಿಲ್ಲಾಡಳಿತಗಳು ಸಿದ್ಧತೆಯಲ್ಲಿರಲು ಸೂಚಿಸಲಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *