ಸಂತೃಸ್ತರ ನಡುವೆ ಸಮಯಕೊಟ್ಟ ನಿಸ್ವಾರ್ಥಿಗಳು

ನೆರೆಪೀಡಿತ ಪ್ರದೇಶಗಳಲ್ಲಿ ಕೆಲಸಮಾಡುವ ಎಂ.ಎಲ್.ಎ. ಗಳು ಎಂ.ಪಿ., ಮಂತ್ರಿ, ಅಧಿಕಾರಿ,ಇತ್ಯಾದಿ ಸರ್ಕಾರಿ ವೇತನ, ಭತ್ಯೆ, ಅನುಕೂಲ ಪಡೆದು ಕೆಲಸ ಮಾಡುವವರಿಗೆ ಅದು ಕರ್ತವ್ಯ ಮತ್ತು ಜವಾಬ್ಧಾರಿ.
ಆದರೆ ಇಂಥ ಅನುಕೂಲಗಳಿಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡುವವರು ಅನೇಕರಿದ್ದಾರೆ ಅವರು ಹೆಚ್ಚೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಹಾಕಿಕೊಳ್ಳಬಹುದು, ಅಥವಾ ಪತ್ರಿಕೆಗಳಿಗೆ ವರದಿ, ಚಿತ್ರ ನೀಡಬಹುದು. ಆದರೆ ಮನೆ, ಮಠ ಬಿಟ್ಟು ಸಂತೃಸ್ತರಿಗಾಗಿ ದುಡಿಯುವ ಈ ನಿಸ್ವಾರ್ಥ ಸೇವಕರಿದ್ದಾರಲ್ಲ ಅವರು ನಿಜಕ್ಕೂ ಸನ್ಮಾನ, ಪ್ರಶಂಸೆ, ಗೌರವಕ್ಕೆ ಅರ್ಹರು.
ಈ ವಾರದ ಉತ್ತರ ಕನ್ನಡದ ನೆರೆ ಹಾವಳಿಯಲ್ಲಿ ಹೀಗೆ ಕೆಲಸ ಮಾಡಿದ ಕೈ, ಮನಸ್ಸುಗಳು ಅನೇಕ.
ಸಿದ್ಧಾಪುರದಲ್ಲಿ ಹೆಮ್ಮನಬೈಲ್ ಮತ್ತು ಕಲ್ಯಾಣಪುರ, ಅಕ್ಕುಂಜಿಗಳಲ್ಲಿ ತಾತ್ಕಾಲಿಕ ಪುನರ್‍ವಸತಿ ಕೇಂದ್ರಗಳಲ್ಲಿ ದುಡಿದ ಅನೇಕರು ನಮ್ಮ ಗಮನ ಸೆಳೆದರು. ಆದರೆ ಅವರೆಲ್ಲರ ಮುಖ ಪರಿಚಯವಾಗಲಿ,ಸ್ನೇಹ-ಸಂಬಂಧಗಳಾಗಲಿ ನಮಗಿಲ್ಲ. ಆದರೆ ನಮ್ಮ ಪರಿಚಯದ ತಾ.ಪಂ. ಸದಸ್ಯ ನಾಸಿರ್‍ಖಾನ್ ಈ ವಾರವಿಡೀ ಈ ಸಂತೃಸ್ತರ ಜೊತೆಗಿದ್ದರು. ಸಿದ್ಧಾಪುರದ ತಹಸಿಲ್ಧಾರರು ಹುರುಪಿನಿಂದಲೇ ಇಲ್ಲಿಯ ಜವಾಬ್ಧಾರಿ ನಿರ್ವಹಿಸಿದ್ದಾರೆ. ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ದುಡಿದ ಅನೇಕರಿದ್ದಾರೆ. ಇವರೆಲ್ಲರ ಜೊತೆಗೆ ರಾತ್ರಿ ಹಗಲೆನ್ನದೆ ಕೆಲಸ ಮಾಡಿದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಿದ್ದಾರೆ. ಇವರಲ್ಲಿ ಕೊಂಡ್ಲಿ ಗ್ರಾಮ ಚಾವಡಿಯ ಆರ್.ಐ. ದಿವಾಕರ್ ನಾಯ್ಕ ತಮ್ಮ ಬಿರುಕುಬಿಟ್ಟ ಕಾಲ್ ಬೆರಳುಗಳ ಪಾದವನ್ನೇ ಊರುತ್ತಾ ಇಡೀ ತಾಲೂಕು ಸುತ್ತಿದ್ದಾರೆ!.
ಇವರ ಮಧ್ಯೆ ಗವಿನಗುಡ್ಡ ಸೇರಿದಂತೆ ಸಿದ್ದಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಹೀಗೆ ನಿಸ್ವಾರ್ಥ ಸೇವೆ ಮಾಡಿದ ಅನೇಕರಿದ್ದಾರೆ. ಇವರೆಲ್ಲರಿಗೆ ಧನ್ಯವಾದಗಳು. ಊರು ಕೊಚ್ಚಿಹೋದ ಮೇಲೆ ವಾರದ ಕೊನೆ ಅವಧಿಯಲ್ಲ ಓಡೋಡಿ ಬಂದು ಸುದ್ದಿ ಮಾಡಿದ ಕೆಲವು ಎಂ.ಪಿ., ಎಂ.ಎಲ್.ಎ.ಗಳಿಗೂ. ಅವರ ಚಿತ್ರ ಹಾಕಿ ಭಟ್ಟಂಗಿತನ ಮೆರೆದ ಕೆಲವು ಭಕ್ತಹುಳುಗಳಿಗೂ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *