ಸಂತೃಸ್ತರ ನಡುವೆ ಸಮಯಕೊಟ್ಟ ನಿಸ್ವಾರ್ಥಿಗಳು

ನೆರೆಪೀಡಿತ ಪ್ರದೇಶಗಳಲ್ಲಿ ಕೆಲಸಮಾಡುವ ಎಂ.ಎಲ್.ಎ. ಗಳು ಎಂ.ಪಿ., ಮಂತ್ರಿ, ಅಧಿಕಾರಿ,ಇತ್ಯಾದಿ ಸರ್ಕಾರಿ ವೇತನ, ಭತ್ಯೆ, ಅನುಕೂಲ ಪಡೆದು ಕೆಲಸ ಮಾಡುವವರಿಗೆ ಅದು ಕರ್ತವ್ಯ ಮತ್ತು ಜವಾಬ್ಧಾರಿ.
ಆದರೆ ಇಂಥ ಅನುಕೂಲಗಳಿಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡುವವರು ಅನೇಕರಿದ್ದಾರೆ ಅವರು ಹೆಚ್ಚೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಹಾಕಿಕೊಳ್ಳಬಹುದು, ಅಥವಾ ಪತ್ರಿಕೆಗಳಿಗೆ ವರದಿ, ಚಿತ್ರ ನೀಡಬಹುದು. ಆದರೆ ಮನೆ, ಮಠ ಬಿಟ್ಟು ಸಂತೃಸ್ತರಿಗಾಗಿ ದುಡಿಯುವ ಈ ನಿಸ್ವಾರ್ಥ ಸೇವಕರಿದ್ದಾರಲ್ಲ ಅವರು ನಿಜಕ್ಕೂ ಸನ್ಮಾನ, ಪ್ರಶಂಸೆ, ಗೌರವಕ್ಕೆ ಅರ್ಹರು.
ಈ ವಾರದ ಉತ್ತರ ಕನ್ನಡದ ನೆರೆ ಹಾವಳಿಯಲ್ಲಿ ಹೀಗೆ ಕೆಲಸ ಮಾಡಿದ ಕೈ, ಮನಸ್ಸುಗಳು ಅನೇಕ.
ಸಿದ್ಧಾಪುರದಲ್ಲಿ ಹೆಮ್ಮನಬೈಲ್ ಮತ್ತು ಕಲ್ಯಾಣಪುರ, ಅಕ್ಕುಂಜಿಗಳಲ್ಲಿ ತಾತ್ಕಾಲಿಕ ಪುನರ್‍ವಸತಿ ಕೇಂದ್ರಗಳಲ್ಲಿ ದುಡಿದ ಅನೇಕರು ನಮ್ಮ ಗಮನ ಸೆಳೆದರು. ಆದರೆ ಅವರೆಲ್ಲರ ಮುಖ ಪರಿಚಯವಾಗಲಿ,ಸ್ನೇಹ-ಸಂಬಂಧಗಳಾಗಲಿ ನಮಗಿಲ್ಲ. ಆದರೆ ನಮ್ಮ ಪರಿಚಯದ ತಾ.ಪಂ. ಸದಸ್ಯ ನಾಸಿರ್‍ಖಾನ್ ಈ ವಾರವಿಡೀ ಈ ಸಂತೃಸ್ತರ ಜೊತೆಗಿದ್ದರು. ಸಿದ್ಧಾಪುರದ ತಹಸಿಲ್ಧಾರರು ಹುರುಪಿನಿಂದಲೇ ಇಲ್ಲಿಯ ಜವಾಬ್ಧಾರಿ ನಿರ್ವಹಿಸಿದ್ದಾರೆ. ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ದುಡಿದ ಅನೇಕರಿದ್ದಾರೆ. ಇವರೆಲ್ಲರ ಜೊತೆಗೆ ರಾತ್ರಿ ಹಗಲೆನ್ನದೆ ಕೆಲಸ ಮಾಡಿದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಿದ್ದಾರೆ. ಇವರಲ್ಲಿ ಕೊಂಡ್ಲಿ ಗ್ರಾಮ ಚಾವಡಿಯ ಆರ್.ಐ. ದಿವಾಕರ್ ನಾಯ್ಕ ತಮ್ಮ ಬಿರುಕುಬಿಟ್ಟ ಕಾಲ್ ಬೆರಳುಗಳ ಪಾದವನ್ನೇ ಊರುತ್ತಾ ಇಡೀ ತಾಲೂಕು ಸುತ್ತಿದ್ದಾರೆ!.
ಇವರ ಮಧ್ಯೆ ಗವಿನಗುಡ್ಡ ಸೇರಿದಂತೆ ಸಿದ್ದಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಹೀಗೆ ನಿಸ್ವಾರ್ಥ ಸೇವೆ ಮಾಡಿದ ಅನೇಕರಿದ್ದಾರೆ. ಇವರೆಲ್ಲರಿಗೆ ಧನ್ಯವಾದಗಳು. ಊರು ಕೊಚ್ಚಿಹೋದ ಮೇಲೆ ವಾರದ ಕೊನೆ ಅವಧಿಯಲ್ಲ ಓಡೋಡಿ ಬಂದು ಸುದ್ದಿ ಮಾಡಿದ ಕೆಲವು ಎಂ.ಪಿ., ಎಂ.ಎಲ್.ಎ.ಗಳಿಗೂ. ಅವರ ಚಿತ್ರ ಹಾಕಿ ಭಟ್ಟಂಗಿತನ ಮೆರೆದ ಕೆಲವು ಭಕ್ತಹುಳುಗಳಿಗೂ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

ಏಪ್ರಿಲ್ 14 ರಿಂದ ಕಾನಳ್ಳಿ ಕಾರ್ಯಕ್ರಮ….#ಊರಿಗೆ ಕಾಲಿಟ್ಟ ಹುಲಿ#

ಸಿದ್ದಾಪುರ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿದ್ದಾಪುರ ತಾಲೂಕಿನ ಕಾನಳ್ಳಿಯ ಶ್ರೀ ಚೌಡೇಶ್ವರಿ ದೇವಾಲಯದ 30ನೇ ವಾರ್ಷಿಕೋತ್ಸವ ಎಪ್ರಿಲ್ 14 ರಿಂದ 16 ರವರೆಗೆ...

Latest Posts

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು) ೬೨೦/ ದಿಶಾ ರವಿ ನಾಯ್ಕ (ಸ.ಪ್ರೌ. ಹಾಳದಕಟ್ಟಾ) ೬೧೯/ ನಿಶಾ ಪರಮೇಶ್ವರ ಮಡಿವಾಳ ಸ.ಪ್ರೌ.ಶಾ.ಜಿಡ್ಡಿ ೬೧೭/ ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಮುಂದುವರಿದಿರುವ ಸಿದ್ಧಾಪುರ ತಾಲೂಕು ಅತಿ ಹೆಚ್ಚು ಜನ...

Recommended For You

About the Author: Kanneshwar Naik

Leave a Reply

Your email address will not be published. Required fields are marked *