ಸಂತೃಸ್ತರ ನಡುವೆ ಸಮಯಕೊಟ್ಟ ನಿಸ್ವಾರ್ಥಿಗಳು

ನೆರೆಪೀಡಿತ ಪ್ರದೇಶಗಳಲ್ಲಿ ಕೆಲಸಮಾಡುವ ಎಂ.ಎಲ್.ಎ. ಗಳು ಎಂ.ಪಿ., ಮಂತ್ರಿ, ಅಧಿಕಾರಿ,ಇತ್ಯಾದಿ ಸರ್ಕಾರಿ ವೇತನ, ಭತ್ಯೆ, ಅನುಕೂಲ ಪಡೆದು ಕೆಲಸ ಮಾಡುವವರಿಗೆ ಅದು ಕರ್ತವ್ಯ ಮತ್ತು ಜವಾಬ್ಧಾರಿ.
ಆದರೆ ಇಂಥ ಅನುಕೂಲಗಳಿಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡುವವರು ಅನೇಕರಿದ್ದಾರೆ ಅವರು ಹೆಚ್ಚೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಹಾಕಿಕೊಳ್ಳಬಹುದು, ಅಥವಾ ಪತ್ರಿಕೆಗಳಿಗೆ ವರದಿ, ಚಿತ್ರ ನೀಡಬಹುದು. ಆದರೆ ಮನೆ, ಮಠ ಬಿಟ್ಟು ಸಂತೃಸ್ತರಿಗಾಗಿ ದುಡಿಯುವ ಈ ನಿಸ್ವಾರ್ಥ ಸೇವಕರಿದ್ದಾರಲ್ಲ ಅವರು ನಿಜಕ್ಕೂ ಸನ್ಮಾನ, ಪ್ರಶಂಸೆ, ಗೌರವಕ್ಕೆ ಅರ್ಹರು.
ಈ ವಾರದ ಉತ್ತರ ಕನ್ನಡದ ನೆರೆ ಹಾವಳಿಯಲ್ಲಿ ಹೀಗೆ ಕೆಲಸ ಮಾಡಿದ ಕೈ, ಮನಸ್ಸುಗಳು ಅನೇಕ.
ಸಿದ್ಧಾಪುರದಲ್ಲಿ ಹೆಮ್ಮನಬೈಲ್ ಮತ್ತು ಕಲ್ಯಾಣಪುರ, ಅಕ್ಕುಂಜಿಗಳಲ್ಲಿ ತಾತ್ಕಾಲಿಕ ಪುನರ್‍ವಸತಿ ಕೇಂದ್ರಗಳಲ್ಲಿ ದುಡಿದ ಅನೇಕರು ನಮ್ಮ ಗಮನ ಸೆಳೆದರು. ಆದರೆ ಅವರೆಲ್ಲರ ಮುಖ ಪರಿಚಯವಾಗಲಿ,ಸ್ನೇಹ-ಸಂಬಂಧಗಳಾಗಲಿ ನಮಗಿಲ್ಲ. ಆದರೆ ನಮ್ಮ ಪರಿಚಯದ ತಾ.ಪಂ. ಸದಸ್ಯ ನಾಸಿರ್‍ಖಾನ್ ಈ ವಾರವಿಡೀ ಈ ಸಂತೃಸ್ತರ ಜೊತೆಗಿದ್ದರು. ಸಿದ್ಧಾಪುರದ ತಹಸಿಲ್ಧಾರರು ಹುರುಪಿನಿಂದಲೇ ಇಲ್ಲಿಯ ಜವಾಬ್ಧಾರಿ ನಿರ್ವಹಿಸಿದ್ದಾರೆ. ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ದುಡಿದ ಅನೇಕರಿದ್ದಾರೆ. ಇವರೆಲ್ಲರ ಜೊತೆಗೆ ರಾತ್ರಿ ಹಗಲೆನ್ನದೆ ಕೆಲಸ ಮಾಡಿದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರಿದ್ದಾರೆ. ಇವರಲ್ಲಿ ಕೊಂಡ್ಲಿ ಗ್ರಾಮ ಚಾವಡಿಯ ಆರ್.ಐ. ದಿವಾಕರ್ ನಾಯ್ಕ ತಮ್ಮ ಬಿರುಕುಬಿಟ್ಟ ಕಾಲ್ ಬೆರಳುಗಳ ಪಾದವನ್ನೇ ಊರುತ್ತಾ ಇಡೀ ತಾಲೂಕು ಸುತ್ತಿದ್ದಾರೆ!.
ಇವರ ಮಧ್ಯೆ ಗವಿನಗುಡ್ಡ ಸೇರಿದಂತೆ ಸಿದ್ದಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಹೀಗೆ ನಿಸ್ವಾರ್ಥ ಸೇವೆ ಮಾಡಿದ ಅನೇಕರಿದ್ದಾರೆ. ಇವರೆಲ್ಲರಿಗೆ ಧನ್ಯವಾದಗಳು. ಊರು ಕೊಚ್ಚಿಹೋದ ಮೇಲೆ ವಾರದ ಕೊನೆ ಅವಧಿಯಲ್ಲ ಓಡೋಡಿ ಬಂದು ಸುದ್ದಿ ಮಾಡಿದ ಕೆಲವು ಎಂ.ಪಿ., ಎಂ.ಎಲ್.ಎ.ಗಳಿಗೂ. ಅವರ ಚಿತ್ರ ಹಾಕಿ ಭಟ್ಟಂಗಿತನ ಮೆರೆದ ಕೆಲವು ಭಕ್ತಹುಳುಗಳಿಗೂ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *