ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು!

ಮಳೆನಿಂತುಹೋದಮೇಲೆ!-ಭಾಗ-02
ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು!
ಸಿದ್ಧಾಪುರ ತಾಲೂಕಿನ ಕಾನಳ್ಳಿ ಬಹಳ ಕಾರಣಕ್ಕೆ ವಿಶಿಷ್ಟ. ಬೇಡ್ಕಣಿ ಗ್ರಾಮ ಪಂಚಾಯತ್ ಕಡಕೇರಿಯ ಕಾನಳ್ಳಿ ಇಲ್ಲಿಯ ಪ್ರಖ್ಯಾತ ಚೌಡೇಶ್ವರಿ ದೇವಾಲಯದಿಂದ ಪ್ರಸಿದ್ಧವಾದರೆ, ಇಲ್ಲಿರುವ ಪರಿಶಿಷ್ಟ ಜಾತಿಯ ಹಸ್ಲರರು ಶ್ರಮಜೀವಿಗಳೆಂದೇ ಖ್ಯಾತಿ.
ಸುಮಾರು 30 ಮನೆಗಳ ಈ ಪುಟ್ಟ ಹಳ್ಳಿಯಲ್ಲಿ ಸಾರ್ವಜನಿಕ ಕೆರೆ,ಕಿರಿಯ ಪ್ರಾಥಮಿಕಶಾಲೆ, ಸುವ್ಯವಸ್ಥಿತ ಸಂಪರ್ಕ ರಸ್ತೆಗಳೆಲ್ಲಾ ಇವೆ. ಇಲ್ಲಿಯ ಯುವಕರು ಜಾನಪದ, ಬುಡಕಟ್ಟು ಹಾಡುಗಳಿಂದ ರಾಜ್ಯಮಟ್ಟದಲ್ಲಿ ಹೆಸರುಮಾಡಿದ್ದಾರೆ.ಆಗಸ್ಟ್ 2 ನೇ ವಾರದ ಸುಮಾರಿಗೆ ಸಿದ್ದಾಪುರದಲ್ಲಿ 280ಮಿ.ಮೀ ಗಿಂತಲೂ ಹೆಚ್ಚು ಮಳೆ ಸುರಿಯಿತು ನೋಡಿ, ಆಗ ತಗ್ಗುಪ್ರದೇಶದ ಈ ಊರಿನ ಸಾರ್ವಜನಿಕ ರಸ್ತೆಯಲ್ಲಿ ನೀರುತುಂಬುತ್ತಿರುವುದನ್ನು ನೋಡುತಿದ್ದ ಬಹುತೇಕರಿಗೆ ತಮ್ಮ ಗುಡ್ಡದಮೇಲಿನ ಮನೆಗಳ ಒಳಗೆ ಜಲ ಬರುತ್ತಿರುವುದರ ಯಾವ ಸೂಚನೆಯೂ ಇರಲಿಲ್ಲ. ಆದರೆ 6-7 ಮನೆಗಳಲ್ಲಿ ಜಲಪುಟಿದೆದ್ದು ನೀರು ನುಗ್ಗಿತ್ತು. ಬಹುತೇಕ ಎಲ್ಲರ ಮನೆಯ ಅಡುಗೆ ಮನೆಗೆ ಕೆಸರುನೀರು, ಮಣ್ಣು ತುಂಬಿಹೋಗಿತ್ತು.
ಸರ್ಕಾರ ಗಂಜಿ ಕೇಂದ್ರ ಮಾಡಲು ಸಿದ್ಧಮಾಡುತಿದ್ದ ಸಮಯದಲ್ಲೇ ಸಮೀಪದ ಭಾನ್ಕುಳಿಮಠದಲ್ಲಿ ನಿರಾಶ್ರಿತರಿಗೆ ಸಕಲ ವ್ಯವಸ್ಥೆಗಳಿರುವ ಪ್ರಕಟಣೆ ಹೊರಬಿತ್ತು. ಮೂರ್ನಾಲ್ಕು ಕಿ.ಮೀ. ದೂರದ ಭಾನ್ಕುಳಿಗೆ ಹೋಗಲು ತಯಾರಾಗದ ಇಲ್ಲಿಯ ಜನರು ಸ್ಥಳಿಯರ ನೆರವು ಪಡೆದು ಕಾಲದೂಡಿದರು. ಮಳೆನಿಂತು ನಿರಾಳವೆನಿಸುವ ಸಮಯದಲ್ಲಿ ಮನೆಯ ಮುಂಭಾಗದ ಜಗಲಿಯಲ್ಲೇ ಅಡುಗೆ ಮಾಡುತ್ತಾ ದಿನಕಳೆದರು. ಸ್ಥಳಿಯರು, ಗ್ರಾಮಪಂಚಾಯತ್ ನೆರವಿನಿಂದ ಈ ಜನರ ದುಖ: ಕಡಿಮೆಯಾಯಿತು.ಈಗಲೂ ಇವರ ಅಡುಗೆ ಮನೆಯ ಮಣ್ಣು ತೆರವಾಗಿಲ್ಲ, ನೀರು ಹೋಗಲು ಮಾಡಿಕೊಟ್ಟ ಮನೆಯೊಳಗಿನ ನೀರುಕಾಲುವೆ ಮುಚ್ಚಿಲ್ಲ.
ಅದೇನಾಯ್ತೋ ಮಳೆಯ ರಭಸಕ್ಕೆ ಎತ್ತರದ ಮನೆ ಒಳಗೆ ಜಲ,ನೀರು ಬರತೊಡಗಿದಾಗ ಸ್ಥಳಿಯರ ಸಲಹೆಯಂತೆ ವಾಸಸ್ಥಾನ ಬದಲಿಸಿ, ಬೇರೆಕಡೆ ಆಶ್ರಯ ಪಡೆದರು, ಗ್ರಾಮಸ್ಥರು ಅವರ ನೆರವಿಗಿದ್ದುದರಿಂದ ಅವರಿಗೆ ಧೈರ್ಯ ಬಂತು ಎನ್ನುತ್ತಾರೆ ಕಾನಳ್ಳಿಯ ಯುವಕ ಗೋಪಾಲ ಹಸ್ಲರ್, ನಾವೆಂದೂ ಕಂಡರಿಯದ ಮಳೆ, ನೆರೆ ನಮ್ಮ ಗ್ರಾಮಕ್ಕೂ ನುಗ್ಗಿತ್ತು, ಗ್ರಾ.ಪಂ. ತಾಲೂಕಾ ಆಡಳಿತಗಳು ನಮ್ಮ ನೆರವಿಗೆ ಬಂದವು ಜನಪ್ರತಿನಿಧಿಗಳು ಸಂತೃಸ್ತರ ನೆರವಿಗೆ ಬಂದರು. ಬಂದ ಕಷ್ಟ,ಬಂದಂತೇ ಕರಗಿಹೋಯ್ತು ಎಂದವರು ರವಿ ಕಾನಳ್ಳಿ.
ಹೀಗೆ ಸಿದ್ದಾಪುರದ ಕಡಕೇರಿ ಕಾನಳ್ಳಿ ಈ ಶತಮಾನದಲ್ಲಿ ನೋಡಿದ ಮೊಟ್ಟಮೊದಲ ನೆರೆ, ಮಹಾಮಳೆ ಇದು. ಆದರೆ ಅಪಾಯಕ್ಕೆ ಅವಕಾಶವಾಗದಂತೆ ಆಡಳಿತಯಂತ್ರ, ಜನಪ್ರತಿನಿಧಿಗಳು, ಸರ್ಕಾರ ನೆರವಿಗೆ ಬಂದು ಅವರ ಕಷ್ಟ ದೂರ ಮಾಡಿದ್ದಾರೆ. ಬಹುತೇಕ ಕೂಲಿ ಕಾರ್ಮಿಕರು, ಪರಿಶಿಷ್ಟವರ್ಗ, ಪರಿಶಿಷ್ಟ ಜಾತಿಯವರೇ ಹೆಚ್ಚಿರುವ ಈ ಗ್ರಾಮದ ನೆರೆ,ಜಲ ಒಂದು ದುಸ್ವಪ್ನದಂತೆ ಬಂದು ಹೋಗಿದ್ದನ್ನು ನೆನೆಯುವಾಗ ಅವರ ಕಣ್ಣು, ಬಾಯಿ, ಮನಸ್ಸು ತೇವಗೊಳ್ಳುತ್ತವೆ. ಈ ಗ್ರಾಮದ ಪ್ರವಾಹ ತೊಂದರೆಯನ್ನು ಸೂಕ್ತಸಮಯದಲ್ಲಿ ಸರಿಯಾಗಿ ನಿರ್ವಹಿಸಿದ ಸಿದ್ದಾಪುರ ತಾಲೂಕಾ ಆಡಳಿತ ಮತ್ತು ಉ.ಕ.ಜಿಲ್ಲಾ ಆಡಳಿತಕ್ಕೆ ಧನ್ಯವಾದ ಹೇಳಲೇಬೇಕು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *