ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು!

ಮಳೆನಿಂತುಹೋದಮೇಲೆ!-ಭಾಗ-02
ಕಾನಳ್ಳಿಯಲ್ಲಿ ಬೆಟ್ಟದ ಮೇಲೂ ನೀರು ಬಂತು ಅಡುಗೆ ಮನೆ ಜಗಲಿಗೆ ತಂತು!
ಸಿದ್ಧಾಪುರ ತಾಲೂಕಿನ ಕಾನಳ್ಳಿ ಬಹಳ ಕಾರಣಕ್ಕೆ ವಿಶಿಷ್ಟ. ಬೇಡ್ಕಣಿ ಗ್ರಾಮ ಪಂಚಾಯತ್ ಕಡಕೇರಿಯ ಕಾನಳ್ಳಿ ಇಲ್ಲಿಯ ಪ್ರಖ್ಯಾತ ಚೌಡೇಶ್ವರಿ ದೇವಾಲಯದಿಂದ ಪ್ರಸಿದ್ಧವಾದರೆ, ಇಲ್ಲಿರುವ ಪರಿಶಿಷ್ಟ ಜಾತಿಯ ಹಸ್ಲರರು ಶ್ರಮಜೀವಿಗಳೆಂದೇ ಖ್ಯಾತಿ.
ಸುಮಾರು 30 ಮನೆಗಳ ಈ ಪುಟ್ಟ ಹಳ್ಳಿಯಲ್ಲಿ ಸಾರ್ವಜನಿಕ ಕೆರೆ,ಕಿರಿಯ ಪ್ರಾಥಮಿಕಶಾಲೆ, ಸುವ್ಯವಸ್ಥಿತ ಸಂಪರ್ಕ ರಸ್ತೆಗಳೆಲ್ಲಾ ಇವೆ. ಇಲ್ಲಿಯ ಯುವಕರು ಜಾನಪದ, ಬುಡಕಟ್ಟು ಹಾಡುಗಳಿಂದ ರಾಜ್ಯಮಟ್ಟದಲ್ಲಿ ಹೆಸರುಮಾಡಿದ್ದಾರೆ.ಆಗಸ್ಟ್ 2 ನೇ ವಾರದ ಸುಮಾರಿಗೆ ಸಿದ್ದಾಪುರದಲ್ಲಿ 280ಮಿ.ಮೀ ಗಿಂತಲೂ ಹೆಚ್ಚು ಮಳೆ ಸುರಿಯಿತು ನೋಡಿ, ಆಗ ತಗ್ಗುಪ್ರದೇಶದ ಈ ಊರಿನ ಸಾರ್ವಜನಿಕ ರಸ್ತೆಯಲ್ಲಿ ನೀರುತುಂಬುತ್ತಿರುವುದನ್ನು ನೋಡುತಿದ್ದ ಬಹುತೇಕರಿಗೆ ತಮ್ಮ ಗುಡ್ಡದಮೇಲಿನ ಮನೆಗಳ ಒಳಗೆ ಜಲ ಬರುತ್ತಿರುವುದರ ಯಾವ ಸೂಚನೆಯೂ ಇರಲಿಲ್ಲ. ಆದರೆ 6-7 ಮನೆಗಳಲ್ಲಿ ಜಲಪುಟಿದೆದ್ದು ನೀರು ನುಗ್ಗಿತ್ತು. ಬಹುತೇಕ ಎಲ್ಲರ ಮನೆಯ ಅಡುಗೆ ಮನೆಗೆ ಕೆಸರುನೀರು, ಮಣ್ಣು ತುಂಬಿಹೋಗಿತ್ತು.
ಸರ್ಕಾರ ಗಂಜಿ ಕೇಂದ್ರ ಮಾಡಲು ಸಿದ್ಧಮಾಡುತಿದ್ದ ಸಮಯದಲ್ಲೇ ಸಮೀಪದ ಭಾನ್ಕುಳಿಮಠದಲ್ಲಿ ನಿರಾಶ್ರಿತರಿಗೆ ಸಕಲ ವ್ಯವಸ್ಥೆಗಳಿರುವ ಪ್ರಕಟಣೆ ಹೊರಬಿತ್ತು. ಮೂರ್ನಾಲ್ಕು ಕಿ.ಮೀ. ದೂರದ ಭಾನ್ಕುಳಿಗೆ ಹೋಗಲು ತಯಾರಾಗದ ಇಲ್ಲಿಯ ಜನರು ಸ್ಥಳಿಯರ ನೆರವು ಪಡೆದು ಕಾಲದೂಡಿದರು. ಮಳೆನಿಂತು ನಿರಾಳವೆನಿಸುವ ಸಮಯದಲ್ಲಿ ಮನೆಯ ಮುಂಭಾಗದ ಜಗಲಿಯಲ್ಲೇ ಅಡುಗೆ ಮಾಡುತ್ತಾ ದಿನಕಳೆದರು. ಸ್ಥಳಿಯರು, ಗ್ರಾಮಪಂಚಾಯತ್ ನೆರವಿನಿಂದ ಈ ಜನರ ದುಖ: ಕಡಿಮೆಯಾಯಿತು.ಈಗಲೂ ಇವರ ಅಡುಗೆ ಮನೆಯ ಮಣ್ಣು ತೆರವಾಗಿಲ್ಲ, ನೀರು ಹೋಗಲು ಮಾಡಿಕೊಟ್ಟ ಮನೆಯೊಳಗಿನ ನೀರುಕಾಲುವೆ ಮುಚ್ಚಿಲ್ಲ.
ಅದೇನಾಯ್ತೋ ಮಳೆಯ ರಭಸಕ್ಕೆ ಎತ್ತರದ ಮನೆ ಒಳಗೆ ಜಲ,ನೀರು ಬರತೊಡಗಿದಾಗ ಸ್ಥಳಿಯರ ಸಲಹೆಯಂತೆ ವಾಸಸ್ಥಾನ ಬದಲಿಸಿ, ಬೇರೆಕಡೆ ಆಶ್ರಯ ಪಡೆದರು, ಗ್ರಾಮಸ್ಥರು ಅವರ ನೆರವಿಗಿದ್ದುದರಿಂದ ಅವರಿಗೆ ಧೈರ್ಯ ಬಂತು ಎನ್ನುತ್ತಾರೆ ಕಾನಳ್ಳಿಯ ಯುವಕ ಗೋಪಾಲ ಹಸ್ಲರ್, ನಾವೆಂದೂ ಕಂಡರಿಯದ ಮಳೆ, ನೆರೆ ನಮ್ಮ ಗ್ರಾಮಕ್ಕೂ ನುಗ್ಗಿತ್ತು, ಗ್ರಾ.ಪಂ. ತಾಲೂಕಾ ಆಡಳಿತಗಳು ನಮ್ಮ ನೆರವಿಗೆ ಬಂದವು ಜನಪ್ರತಿನಿಧಿಗಳು ಸಂತೃಸ್ತರ ನೆರವಿಗೆ ಬಂದರು. ಬಂದ ಕಷ್ಟ,ಬಂದಂತೇ ಕರಗಿಹೋಯ್ತು ಎಂದವರು ರವಿ ಕಾನಳ್ಳಿ.
ಹೀಗೆ ಸಿದ್ದಾಪುರದ ಕಡಕೇರಿ ಕಾನಳ್ಳಿ ಈ ಶತಮಾನದಲ್ಲಿ ನೋಡಿದ ಮೊಟ್ಟಮೊದಲ ನೆರೆ, ಮಹಾಮಳೆ ಇದು. ಆದರೆ ಅಪಾಯಕ್ಕೆ ಅವಕಾಶವಾಗದಂತೆ ಆಡಳಿತಯಂತ್ರ, ಜನಪ್ರತಿನಿಧಿಗಳು, ಸರ್ಕಾರ ನೆರವಿಗೆ ಬಂದು ಅವರ ಕಷ್ಟ ದೂರ ಮಾಡಿದ್ದಾರೆ. ಬಹುತೇಕ ಕೂಲಿ ಕಾರ್ಮಿಕರು, ಪರಿಶಿಷ್ಟವರ್ಗ, ಪರಿಶಿಷ್ಟ ಜಾತಿಯವರೇ ಹೆಚ್ಚಿರುವ ಈ ಗ್ರಾಮದ ನೆರೆ,ಜಲ ಒಂದು ದುಸ್ವಪ್ನದಂತೆ ಬಂದು ಹೋಗಿದ್ದನ್ನು ನೆನೆಯುವಾಗ ಅವರ ಕಣ್ಣು, ಬಾಯಿ, ಮನಸ್ಸು ತೇವಗೊಳ್ಳುತ್ತವೆ. ಈ ಗ್ರಾಮದ ಪ್ರವಾಹ ತೊಂದರೆಯನ್ನು ಸೂಕ್ತಸಮಯದಲ್ಲಿ ಸರಿಯಾಗಿ ನಿರ್ವಹಿಸಿದ ಸಿದ್ದಾಪುರ ತಾಲೂಕಾ ಆಡಳಿತ ಮತ್ತು ಉ.ಕ.ಜಿಲ್ಲಾ ಆಡಳಿತಕ್ಕೆ ಧನ್ಯವಾದ ಹೇಳಲೇಬೇಕು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *