ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿತಂತು

ಮಳೆನಿಂತು ಹೋದ ಮೇಲೆ ಭಾಗ-05
ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿಆಯ್ತು
ಮಳೆ ಪ್ರವಾಹ, ಗಾಳಿ ಮಾಡಿರುವ ಅನಾಹುತದ ಮೊತ್ತ ಈಗಲೂ ನಿಖರವಾಗಿ ಸಿಗುತ್ತಿಲ್ಲ. ಸಿದ್ಧಾಪುರದ ಕಲ್ಯಾಣಪುರದ ಧರೆ ಕುಸಿತದಿಂದ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದ ಕುಟುಂಬಗಳು ತಮ್ಮ ಊರು, ಮನೆಗೆ ಮರಳಿವೆ. ಅವರ ಭತ್ತದ ಗದ್ದೆಗಳನ್ನು ಮುಳುಗಿಸಿದ್ದ ನೆಗಸು ಮಾಯವಾಗಿ ಈಗ ಭತ್ತದ ಗದ್ದೆಗಳು ಕೆಸರಿನಿಂದ ತುಂಬಿಕೊಂಡಿವೆ.
ಈ ಕಲ್ಯಾಣಪುರಕ್ಕೆ ಗೋಳಗೋಡು ಅಕ್ಕುಂಜಿ ಮಾರ್ಗವಾಗಿ ತೆರಳಲು ಬಳಸಬಹುದಾದ ರಸ್ತೆ ನಾಲ್ಕೈದು ದಿನ ಮುಳುಗಿ ಹೋಗಿದ್ದು ಈಗ ರಸ್ತೆಯಂತೆ ಕಾಣತೊಡಗಿದೆ. ಕಪ್ಪು ಬಂಗಾರ ಎಂದು ಕರೆಯುವ ಕಾಳುಮೆಣಸು ಬೆಳೆ ಸಿದ್ಧಾಪುರ ತಾಲೂಕಿನಲ್ಲಿ 80% ಹೆಚ್ಚು ಹಾನಿಯಾಗಿದೆ.
ಈ ಪ್ರಮಾಣ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲೂ ಇದಕ್ಕಿಂತ ಕಡಿಮೆ ಎನ್ನುವಂತಿಲ್ಲ. ಬಾಳೆ47%ಅಡಿಕೆ 50% ಶುಂಠಿ 80% ನಾಶವಾಗಿದೆ. ಈ ಅತಿವೃಷ್ಟಿ ಹಾನಿ ಬಗ್ಗೆ ಪರಿಹಾರಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 35% ಮೀರಿಲ್ಲ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಆಯ್. ನಾಯ್ಕ ವಾಜಗೋಡು ಪಂಚಾಯತ್ ಸೇರಿದಂತೆ ತಾಲೂಕಿನಾದ್ಯಂತ 80% ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ, ಕೃಷಿಭೂಮಿ ನಾಶವಾಗಿದೆ. ಈ ಬಗ್ಗೆ ಸಮೀಕ್ಷೆಗಳೂ ಸರಿಯಾಗಿ ನಡೆದಿಲ್ಲ. ತಾಲೂಕಿನ ರೈತರ ಸಂಪೂರ್ಣ ಯಾದಿ ಕಂದಾಯ ಇಲಾಖೆ ಯಲ್ಲಿ ಇರುವುದರಿಂದ ಸಾಮೂಹಿಕವಾಗಿ ಪರಿಹಾರ ವಿತರಿಸಬೇಕು. ಇದಕ್ಕಾಗಿ ಮತ್ತೆ ಅರ್ಜಿ ಪಡೆಯುವ ಅಗತ್ಯವಿಲ್ಲ ಎಂದರು.
ಬೆಳೆವಿಮೆ ಮಾನದಂಡಗಳೇ ತಿಳಿಯುತ್ತಿಲ್ಲ. ಮಳೆ,ಬೆಳೆಹಾನಿ ಆಗುತ್ತಿರುವ ಬಹುತೇಕ ಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ವಿಮೆ ಸಿಗದೆ ಕೆಲವೆಡೆ ಮಾತ್ರ ಹೆಚ್ಚು ಬೆಳೆವಿಮೆ ಸಿಗುತ್ತಿರುವ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದರು.
ವಾಜಗೋಡು, ದೊಡ್ಮನೆ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಬೆಳೆ ಹಾನಿ, ಕೃಷಿಭೂಮಿ ನಾಶಗಳ ಜೊತೆಗೆ ಸಾರ್ವಜನಿಕ ಸ್ವತ್ತುಗಳಾದ ಸೇತುವೆ, ಸೇತುವೆಯ ಮೇಲ್ಭಾಗದ ರಕ್ಷಣಾ ಬೇಲಿ ಮುರಿದು ಹೋಗಿವೆ. ಆ ಬಗ್ಗೆ ಸಮೀಕ್ಷೆ ನಡೆಯಬೇಕು ಎಂದು ಆಭಾಗದ ಮುಖಂಡರಾದ ಡಿ.ಜಿ.ಹೆಗಡೆ, ಕೃಷ್ಣಮೂರ್ತಿ ಐಸೂರು, ಆಯ್.ಕೆ.ನಾಯ್ಕ ಸುಂಗೋಳಿಮನೆ ಆಗ್ರಹಿಸಿದರು.
ತಾಲೂಕಿನಲ್ಲಿ ಕೆಲವೆಡೆ ನಾಟಿ ಮಾಡಿದ ಭತ್ತದ ಸಸಿ ತೇಲಿ ಹೋಗಿದೆ. ಕೆಲವರಿಗೆ ನಾಟಿ ಮಾಡಲು ಸಮಯ, ಅನುಕೂಲವೇ ಸಿಗಲಿಲ್ಲ. ಕೆಲವೆಡೆ ಮಾತ್ರ ಹೆಚ್ಚಿನ ನೀರಿನಿಂದ ಬೆಳೆಗೆ ಅನುಕೂಲವಾಗಿರುವ ಉದಾಹರಣೆಗಳೂ ಇವೆ.

ಬೆಳೆಹಾನಿಗೆ ಅರ್ಜಿನೀಡಲು ಗಡುವು ಮುಕ್ತಾಯ, ಸಮಯಾವಕಾಶಕ್ಕೆ ಜನಪ್ರತಿನಿಧಿಗಳು,ಮುಖಂಡರಆಗ್ರಹ
ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.
ತಾಲೂಕಿನ ಒಟ್ಟೂ 14700 ಕೃಷಿಕರಲ್ಲಿ 500 ಜನ ಭತ್ತಬೆಳೆಗಾರರು ಅರ್ಜಿ ನೀಡಿದ್ದು ಒಟ್ಟೂ ಅಂದಾಜು 4200 ಕ್ಕಿಂತ ಕಡಿಮೆ ರೈತರು ಅತಿವೃಷ್ಟಿಹಾನಿಗೆ ಅರ್ಜಿ ನೀಡಿದಂತಾಗಿದೆ.
ಈ ಅತಿವೃಷ್ಟಿ ಹಾನಿ ಅರ್ಜಿ ಸಲ್ಲಿಕೆಗೆ ಕಡಿಮೆ ಅವಧಿಯ ಸಮಯಾವಕಾಶ ನೀಡಿದ್ದು ಈ ಅವಧಿಯಲ್ಲಿ ಮಾಹಿತಿ ತಲುಪದೇ ಸಂವಹನ ಕೊರತೆಯಿಂದ ಅರ್ಜಿ ಸಲ್ಲಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಮಧ್ಯೆ ಕಾಂವಚೂರು ಮತ್ತು ವಾಜಗೋಡು ಪಂಚಾಯತ್, ಸೇವಾಸಹಕಾರಿ ಸಂಘಗಳ ವ್ಯಾಪ್ತಿಯ ರೈತ ಮುಖಂಡರು ಮತ್ತು ಜನಪ್ರತಿನಿಧಿಗಳು ಈ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಶಾಸಕರು, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವರೆಗೆ ಅವಧಿ ವಿಸ್ತರಣೆಯ ಬೇಡಿಕೆ ಹೋಗಿದ್ದು ಸೋಮುವಾರದ ವರೆಗೆ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಿ ಅರ್ಜಿ ಸ್ವೀಕರಿಸಬೇಕೆಂಬ ಒತ್ತಾಯ ಬಂದರೂ ತಾಂತ್ರಿಕ ಕಾರಣಗಳಿಂದ ಅರ್ಜಿ ಪಡೆಯುವ ಅವಧಿಯನ್ನು ಇಂದಿಗೆ ಮುಕ್ತಾಯಗೊಳಿಸಿದ್ದು. ಅಡಿಕೆ ತೋಟಗಳ ಕೊಳೆಹಾನಿ ಬಗ್ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಲೂಕಿನಲ್ಲಿ ಮಳೆ,ಪ್ರವಾಹ, ನೀರು ನಿಂತ ತೊಂದರೆ ಇದ್ದರೂ ಅಲ್ಫಪ್ರಮಾಣದ ಅರ್ಜಿ ಸಲ್ಲಿಕೆ ಆಗಿರುವ ಹಿಂದೆ ಕೆಲವು ಅಧಿಕಾರಿಗಳು ಭತ್ತದ ಗದ್ದೆ ಹಾನಿ ಅರ್ಜಿ ತಿರಸ್ಕರಿಸಿದ್ದೂ ಕಾರಣ ಎನ್ನಲಾಗಿದೆ. ಈ ಮಧ್ಯೆ ತಾಲೂಕಿನಲ್ಲಿ ಅತಿವೃಷ್ಟಿ ಹಾನಿ ವ್ಯಾಪಕವಾಗಿರುವುದರಿಂದ ಅರ್ಜಿ ಪಡೆಯದೆ ಸಾಮೂಹಿಕವಾಗಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎನ್ನುವ ಬೇಡಿಕೆಯೂ ವ್ಯಕ್ತವಾಗಿದೆ.ಇಂದು ನಿನ್ನೆ ತೋಟಗಾರಿಕೆ, ಕೃಷಿ ಇಲಾಖೆಗಳ ಸಿಬ್ಬಂದಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಅಹೋರಾತ್ರಿ ಅರ್ಜಿ ಪ್ರಕ್ರಿಯೆ ಕೆಲಸ ಮಾಡಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *