ರವಿವಾರ ಗೌರಿ, ಸೋಮವಾರ ಗಣಪತಿ ನಾಡಿಗೆ, ಪರಿಸರ ಸ್ನೇಹಿಗಳಾದ ಕಲಾವಿದರು


ಪುರಾಣ, ಚರಿತ್ರೆಯಲ್ಲಿ ವೈದಿಕತೆಯ ವಿಜೃಂಬಣೆಗೆ ಸೃಷ್ಟಿಯಾದ, ನಂತರ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲೂ ಕೆಲಸ ಮಾಡಿದ ಗೌರಿ-ಗಣೇಶನ ಹಬ್ಬವನ್ನು ಎಲ್ಲೆಲ್ಲೂ ಆಚರಿಸಲಾಗುತ್ತಿದೆ.
ಮುಂಬೈ, ಕೊಲ್ಲಾಪುರ ನಂತರ ಹುಬ್ಬಳ್ಳಿ,ಕರಾವಳಿ ಯಲ್ಲೆಡೆ ಆಚರಿಸಲಾಗುವ ಗಣೇಶನ ಹಬ್ಬಕ್ಕೆ ಜನತೆ ಸಿದ್ಧತೆಯಲ್ಲಿ ತೊಡಗಿದ್ದಾರೆ.ಸಂಪ್ರದಾಯದಂತೆ ರವಿವಾರ ಸ್ವರ್ಣಗೌರಿ ಪೂಜೆಯಿಂದ ಪ್ರಾರಂಭವಾಗುವ ವಿನಾಯಕ ಚತುರ್ಥಿ ಸೋಮವಾರ ಏಕಕಾಲದಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬದ ಪ್ರಾರಂಭ ವಿದ್ಯುಕ್ತವಾಗಿ ಆರಂಭವಾಗುತ್ತದೆ.
ಸಿದ್ಧಾಪುರ ತಾಲೂಕಿನಾದ್ಯಂತ ಗ್ರಾಮಗ್ರಾಮಗಳಲ್ಲಿ ಗೌರಿ ತುಂಬುವ ವಿಧಿ ನಡೆದರೆ, ಕೆಲವು ಗ್ರಾಮಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮೂಲಕ ಗಣೇಶ್ ಚತುರ್ಥಿ ಆಚರಿಸಲಾಗುತ್ತದೆ.
ಈ ಹಬ್ಬಕ್ಕೆಂದೇ ಗಣಪತಿ ಮೂರ್ತಿ ತಯಾರಿಸುವ ನೂರಾರು ಕಲಾವಿದರು ಸಿದ್ಧಾಪುರದಲ್ಲಿದ್ದು ನೂರಾರು ಗಣಪತಿ ಮೂರ್ತಿಗಳನ್ನು ತಯಾರಿಸುವ ಗೋಡೆ ಆಟ್ರ್ಸನ ಸತ್ಯನಾರಾಯಣ ಹೆಗಡೆ ಮೂರ್ತಿ ತಯಾರಿಕೆಯನ್ನೇ ವೃತ್ತಿ-ಪ್ರವೃತ್ತಿ ಮಾಡಿಕೊಂಡಿದ್ದಾರೆ.
ತಮ್ಮ ತಾಯಿಯಿಂದ ಗಣಪತಿ ಮೂರ್ತಿ ಮಾಡುವ ಅಭ್ಯಾಸ ರೂಢಿಸಿಕೊಂಡ ಅವರಿಗೆ ಈಗ ಕೈತುಂಬಾ ಕೆಲಸ. ಸಿದ್ಧಾಪುರ ಮತ್ತು ಗ್ರಾಮೀಣ ಪ್ರದೇಶಗಳ ನೂರಾರು ಗಣಪತಿ ಮಾಡಿಕೊಡುವ ಇವರ ವೈಶಿಷ್ಟ್ಯ ಪರಿಸರಸ್ನೇಹಿ ಗಣಪ. ಹಾರ್ಸಿಕಟ್ಟಾದಲ್ಲಿ ವಿಶ್ವನಾಥ ಶೇಟ್,ಸುಂಗೋಳಿಮನೆಯಲ್ಲಿ ಆಯ್.ಕೆ.ನಾಯ್ಕ ನಗರದ ಶಿವಕುಮಾರ ಹಿರೇಮಠ ಸೇರಿದಂತೆ ಕೆಲವರು ತಮ್ಮ ವಿಶಿಷ್ಟ ಕಲೆ,ಪ್ರತಿಭೆಯ ಅನನ್ಯ ಗಣೇಶ ಮೂರ್ತಿ ಮಾಡುವಲ್ಲಿ ಸಿದ್ಧಹಸ್ತರು. ಸಿದ್ಧಾಪುರದ ಬಹುತೇಕ ಎಲ್ಲಾ ಕಲಾವಿದರೂ ರಾಸಾಯನಿಕ ರಹಿತ, ಮಾಲಿನ್ಯನಿರೋಧಕ ವಸ್ತುಗಳಿಂದ ಗಣಪತಿ ಮೂರ್ತಿ ಮಾಡುವುದರಿಂದ ಅವರೆಲ್ಲರೂ ಪರಿಸರ ಪೂರಕ ಕಲಾವಿದರೆನಿಸಿಕೊಳ್ಳುತಿದ್ದಾರೆ.
ಕಲಾವಿದ ಶಿವಕುಮಾರ ಹಿರೇಮಠ ಅಷ್ಟಗಂಧದ ಗಣಪತಿ ಮಾಡಿ ಕುಡಿಯುವ ನೀರಿನಲ್ಲಿ ಕೂಡಾ ಮುಳುಗಿಸುವ ಮೂರ್ತಿಗಳನ್ನು ತಯಾರಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಈವರೆಗೆ ಸೆರೆ ಸಿಕ್ಕವರು…೫ ಉಳಿದವರು ೨.. ಹುಡುಗಾಟದ ಪುಂಡರ ತಂಡ ಆರೆಸ್ಟ್, ಸಮಾಜಸೇವಕರಿಗೆ ನಡುಕ!

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ …. ಸೊರಬಾ ತೌಡತ್ತಿ ಆತ್ಮಹತ್ಯೆ ಪ್ರಕರಣದ ಸುರುಳಿ ಮುಂದುವರಿಯುತ್ತಿದೆ....

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ

ಮಲೆನಾಡಿನ ಮಳೆಯ ನಡುವೆಯೂ ಜನರ ಬಿಸಿ ಏರಿಕೆಗೆ ಕಾರಣವಾದ ಸೊರಬಾ ತೌಡತ್ತಿ ಸಂತೋಷ ಆತ್ಮಹತ್ಯೆಯ ಪ್ರಕರಣ ಹಾವು-ಏಣಿ ಆಟದಂತೆ ಮುಂದುವರಿದಿದೆ. ಡೈನಾಮಿಕ್ ಎಸ್ಪಿ ನೇತೃತ್ವದಲ್ಲಿ‌...

ಸಂತೋಷ್‌ ಆತ್ಮಹತ್ಯೆ ಪ್ರಕರಣ….. ತಮಿಳುನಾಡಿನಲ್ಲಿ ಆರೋಪಿಗಳ ಸೆರೆ!

ಒಂದು ಲವ್‌ ಪ್ರಕರಣ, ಪತ್ತೆದಾರಿ ರಕ್ಷಕನನ್ನಾಗಿ ಮಾಡಿ ನಂತರ ಆ ಪತ್ತೆಧಾರಿಯೇ ಹಣದ ಹಿಂದೆ ಬಿದ್ದು ತನಗೆ ಮೋಸ ಮಾಡಿದ ಪ್ರೇಯಸಿಗಾಗಿ ಪ್ರಾಣ ಕೊಡುವ...

ವಸಂತ ನಾಯ್ಕರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…. ಕೆ.ಜಿ. ನಾಯ್ಕ ಹಣಜಿಬೈಲ್‌ ಸವಾಲು

ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಈಗಲೂ ನಿಷ್ಪಕ್ಷಪಾತ ಮತ್ತು ನಿರ್ಭೀತ ವಿಚಾರಣೆಗೆ ಒತ್ತೇಯಿಸುತ್ತೇವೆ ಎಂದು ಪ್ರತಿಪಾದಿಸಿರುವ ಬಿ.ಜೆ.ಪಿ. ನಾಯಕ ಕೆ.ಜಿ. ನಾಯ್ಕ ಹಣಜಿಬೈಲ್‌...

ಅಪರಾಧಿಗಳನ್ನು ಬಂಧಿಸಿ…ನಿರಪರಾಧಿಗಳನ್ನಲ್ಲ… ವಸಂತ ನಾಯ್ಕ

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರೀಯಿಸಿದ ವಸಂತ ನಾಯ್ಕ ಬಿ.ಜೆ.ಪಿ. ಹೆಣಗಳನ್ನಿಟ್ಟುಕೊಂಡು ರಾಜಕಾರಣ ಮಾಡುವ ದರಿದ್ರ ಪಕ್ಷ, ಬಿ.ಜೆ.ಪಿ. ಮೂರ್ಖ ಮುಖಂಡರ ವಿರುದ್ಧ ರಾಜಕೀಯವಾಗಿ ಮತ್ತು...

Latest Posts

ಈವರೆಗೆ ಸೆರೆ ಸಿಕ್ಕವರು…೫ ಉಳಿದವರು ೨.. ಹುಡುಗಾಟದ ಪುಂಡರ ತಂಡ ಆರೆಸ್ಟ್, ಸಮಾಜಸೇವಕರಿಗೆ ನಡುಕ!

ಇಬ್ಬರು ಅಂದರ್….ಇಬ್ಬರು ಸಸ್ಪೆಂಡ್‌, ಒಬ್ಬ ಸೇಫ್!‌ ಇದು ತೌಡತ್ತಿ ಆತ್ಮಹತ್ಯೆ ಪ್ರಕರಣದ ಮುಂದುವರಿದ ಭಾಗ …. ಸೊರಬಾ ತೌಡತ್ತಿ ಆತ್ಮಹತ್ಯೆ ಪ್ರಕರಣದ ಸುರುಳಿ ಮುಂದುವರಿಯುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳಾ ಗಿ ತಲೆಮರೆಸಿಕೊಂಡಿದ್ದ ಒಟ್ಟೂ 7 ಜನರಲ್ಲಿ ಇಬ್ಬರು ಬಂಧನ ಕ್ಕೊಳಗಾಗಿ 24 ಗಂಟೆಯೊಳಗೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟೂ...

Recommended For You

About the Author: Kanneshwar Naik

Leave a Reply

Your email address will not be published. Required fields are marked *